Close Menu
ISM Kannada News
    IPL 2025 Live Score
    What's Hot

    Atal Pension Yojana : ಅಟಲ್ ಪೆನ್ಷನ್ ಯೋಜನೆಯಡಿ ಈಗ 7.65 ಲಕ್ಷ ಸದಸ್ಯರು, ಈ ಪಿಂಚಣಿ ಯಾರಿಗೆಲ್ಲಾ ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ..!

    May 17, 2025

    Fire Safety : ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೇ ಅಡಿಪಾಯ : ಅಗ್ನಿಶಾಮಕ ಸಿಬ್ಬಂದಿ ಅನಂತರಾಜ್

    May 17, 2025

    Rain Alert : ಕರ್ನಾಟಕದಲ್ಲಿ ಮುಂದುವರಿದ ಮಳೆ ಆರ್ಭಟ: ಬೆಂಗಳೂರು ಸೇರಿದಂತೆ 22 ಜಿಲ್ಲೆಗಳಿಗೆ ಮೇ 22ರವರೆಗೆ ಎಲ್ಲೋ ಅಲರ್ಟ್…!

    May 17, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!
    State

    Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!

    By by AdminMay 8, 2025No Comments2 Mins Read
    Facebook Twitter Pinterest WhatsApp
    Hindu Festival - Akkamma Deepotsava and Kayi Utlu Parushe Festival in Gudibande, Karnataka

    Table of Contents

    Toggle
    • Hindu Festivals – ಭಕ್ತಿಯಿಂದ ನಡೆದ ದೀಪೋತ್ಸವ
      • Hindu Festivals – ಏಳು ಗ್ರಾಮ ದೇವತೆಗಳ ಮಹತ್ವ
        • Hindu Festivals –  ರೋಚಕ ಕಾಯಿ ಉಟ್ಲು ಪರುಷೆ

    Hindu Festivals – ಐತಿಹಾಸಿಕ ಹಿನ್ನೆಲೆಯುಳ್ಳ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಏಡುಗರ ಅಕ್ಕಮ್ಮ ದೇವಿಯ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ನಡೆದ ದೀಪೋತ್ಸವ ಮತ್ತು ಕಾಯಿ ಉಟ್ಲು ಪರುಷೆಯು ಅದ್ದೂರಿಯಾಗಿ ಸಂಪನ್ನಗೊಂಡಿತು. ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಈ ಪುರಾತನ ದೇವಿಯ ಜಾತ್ರೆಯಲ್ಲಿ ಗುಡಿಬಂಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

    Hindu Festival - Akkamma Deepotsava and Kayi Utlu Parushe Festival in Gudibande, Karnataka

    Hindu Festivals – ಭಕ್ತಿಯಿಂದ ನಡೆದ ದೀಪೋತ್ಸವ

    ಏಡುಗರ ಅಕ್ಕಮ್ಮ ಸೇರಿದಂತೆ ಪಟ್ಟಣದ ಏಳು ಗ್ರಾಮ ದೇವತೆಗಳಿಗಾಗಿ ಈ ವಿಶೇಷ ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಮಂಗಳವಾರದಂದು ನೂರಾರು ಮಹಿಳೆಯರು ತಾವೇ ತಯಾರಿಸಿದ ತಂಬಿಟ್ಟಿನ ದೀಪಗಳನ್ನು ಸುಂದರವಾದ ಹೂವುಗಳಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಸಾಗಿದರು. 4, 5 ಮತ್ತು 6ನೇ ವಾರ್ಡಿನ ವಾಲ್ಮೀಕಿ ನಗರದಲ್ಲಿ ನಡೆದ ಈ ದೀಪ ಬೆಳಗುವ ಕಾರ್ಯಕ್ರಮವು ಭಕ್ತಿ ಮತ್ತು ಸಂಪ್ರದಾಯದ ಪ್ರತೀಕವಾಗಿತ್ತು.

    Hindu Festivals – ಏಳು ಗ್ರಾಮ ದೇವತೆಗಳ ಮಹತ್ವ

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗ್ರಾಮ ದೇವತೆಗಳಾದ ಏಡುಗರ ಅಕ್ಕಮ್ಮ, ಮುತ್ಯಾಲಮ್ಮ, ಸಪ್ಪಲಮ್ಮ, ಮಾರೇಮ್ಮ, ಕೋಲ್ಲಾಪುರಿ ಮಹಾಲಕ್ಷ್ಮೀ, ಗಂಗಮ್ಮ ಮತ್ತು ಸತ್ಯಮ್ಮನವರಿಗೆ ಶತಮಾನಗಳ ಇತಿಹಾಸವಿದೆ. ಹಿಂದೆ ಪ್ಲೇಗು ಮುಂತಾದ ಮಾರಕ ರೋಗಗಳು ಹರಡಿದಾಗ ಗ್ರಾಮಸ್ಥರು ಈ ದೇವತೆಗಳಿಗೆ ಹರಕೆ ಹೊತ್ತಿದ್ದರಂತೆ. ರೋಗಗಳು ವಾಸಿಯಾದ ನಂತರ ವರ್ಷಕ್ಕೊಮ್ಮೆ ಜಾತ್ರೆ ನಡೆಸಿ ಹರಕೆ ತೀರಿಸುವುದು ಇಂದಿಗೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಏಳು ಗ್ರಾಮ ದೇವತೆಗಳ ಪೈಕಿ ಕೊಲ್ಲಾಪುರಿ ಮಹಾಲಕ್ಷ್ಮೀ ದೇವಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ದೇವತೆಗಳಿಗೂ ಮಂಗಳವಾರದಂದು ಭಕ್ತರು ಪ್ರಾಣಿ ಬಲಿ ನೀಡಿ ತಮ್ಮ ಹರಕೆಗಳನ್ನು ತೀರಿಸಿಕೊಂಡರು. ಈ ಹಬ್ಬಕ್ಕೆ ವಿವಿಧ ಗ್ರಾಮಗಳಿಂದ ಬಂಧುಗಳು ಆಗಮಿಸಿ ಎರಡು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ ಪಾಲ್ಗೊಂಡರು.

    Hindu Festival - Akkamma Deepotsava and Kayi Utlu Parushe Festival in Gudibande, Karnataka

    Hindu Festivals –  ರೋಚಕ ಕಾಯಿ ಉಟ್ಲು ಪರುಷೆ

    ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಕಾಯಿ ಉಟ್ಲು ಪರುಷೆ ಬುಧವಾರ ನಡೆಯಿತು. ಸುಮಾರು 60 ಅಡಿ ಎತ್ತರದ ಉಟ್ಲು ಮರವನ್ನು ಸ್ಥಾಪಿಸಿ, ಎತ್ತರವಾದ ಕಲ್ಲಿನ ಕಂಬದ ಮೇಲೆ ತಿರುಗುವ ತೊಟ್ಟಿಲನ್ನು ನಿರ್ಮಿಸಲಾಗಿತ್ತು. ಉದ್ದವಾದ ಹಗ್ಗಕ್ಕೆ ತೆಂಗಿನಕಾಯಿಯನ್ನು ಕಟ್ಟಿ ತಿರುಗಿಸಲಾಗುತ್ತಿತ್ತು. ಹತ್ತಾರು ಯುವಕರು ದೊಣ್ಣೆಗಳಿಂದ ಆ ತಿರುಗುವ ಕಾಯಿಯನ್ನು ಒಡೆಯಲು ಪ್ರಯತ್ನಿಸುತ್ತಿದ್ದುದು ರೋಚಕವಾಗಿತ್ತು. ಯಾರು ವೇಗವಾಗಿ ತಿರುಗುವ ಕಾಯಿಯನ್ನು ಒಡೆಯುತ್ತಾರೋ ಅವರಿಗೆ ಬಹುಮಾನವನ್ನು ನೀಡಲಾಯಿತು. ಈ ದೃಶ್ಯವು ಜಾತ್ರೆಗೆ ಆಗಮಿಸಿದ್ದ ಜನರನ್ನು ಬಹುವಾಗಿ ರಂಜಿಸಿತು. Read this also : ವರ್ಲಕೊಂಡ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗ್ರಾಮ ದೇವತೆಗಳ ಜಾತ್ರೆ: 11 ವರ್ಷಗಳ ನಂತರ ವಿಜೃಂಭಣೆ…!

    ಹೀಗೆ ಗುಡಿಬಂಡೆಯ ಏಡುಗರ ಅಕ್ಕಮ್ಮನ ಜಾತ್ರೆಯು ದೀಪೋತ್ಸವ ಮತ್ತು ಕಾಯಿ ಉಟ್ಲು ಪರುಷೆಯೊಂದಿಗೆ ಸಂಪ್ರದಾಯ ಹಾಗೂ ಸಂಭ್ರಮದ ಸಮ್ಮಿಲನವಾಗಿ ಯಶಸ್ವಿಯಾಗಿ ನೆರವೇರಿತು. ಈ ಗ್ರಾಮ ದೇವತೆ ಜಾತ್ರೆಯು ಊರಿನ ಐಕ್ಯತೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

    Chikkaballapur festival 2025 Hindu Festivals Karnataka village fairs Kayi Utlu Parushe rural festivals Sappalamma Gangamma Jathre temple festival Chikkaballapur traditional processions Karnataka Varlakonda Jathre village deity worship
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Fire Safety : ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೇ ಅಡಿಪಾಯ : ಅಗ್ನಿಶಾಮಕ ಸಿಬ್ಬಂದಿ ಅನಂತರಾಜ್

    May 17, 2025

    Rain Alert : ಕರ್ನಾಟಕದಲ್ಲಿ ಮುಂದುವರಿದ ಮಳೆ ಆರ್ಭಟ: ಬೆಂಗಳೂರು ಸೇರಿದಂತೆ 22 ಜಿಲ್ಲೆಗಳಿಗೆ ಮೇ 22ರವರೆಗೆ ಎಲ್ಲೋ ಅಲರ್ಟ್…!

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025
    Leave A Reply Cancel Reply

    IPL 2025 Live Score
    Don't Miss

    Atal Pension Yojana : ಅಟಲ್ ಪೆನ್ಷನ್ ಯೋಜನೆಯಡಿ ಈಗ 7.65 ಲಕ್ಷ ಸದಸ್ಯರು, ಈ ಪಿಂಚಣಿ ಯಾರಿಗೆಲ್ಲಾ ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ..!

    Special May 17, 2025

    Atal Pension Yojana – ಕೇಂದ್ರ ಸರ್ಕಾರವು ನಡೆಸುತ್ತಿರುವ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಅಟಲ್ ಪೆನ್ಷನ್ ಯೋಜನೆ (Atal Pension…

    Fire Safety : ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೇ ಅಡಿಪಾಯ : ಅಗ್ನಿಶಾಮಕ ಸಿಬ್ಬಂದಿ ಅನಂತರಾಜ್

    May 17, 2025

    Rain Alert : ಕರ್ನಾಟಕದಲ್ಲಿ ಮುಂದುವರಿದ ಮಳೆ ಆರ್ಭಟ: ಬೆಂಗಳೂರು ಸೇರಿದಂತೆ 22 ಜಿಲ್ಲೆಗಳಿಗೆ ಮೇ 22ರವರೆಗೆ ಎಲ್ಲೋ ಅಲರ್ಟ್…!

    May 17, 2025

    Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!

    May 17, 2025

    Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ

    May 17, 2025

    Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!

    May 17, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.