Close Menu
ISM Kannada News
    IPL 2025 Live Score
    What's Hot

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Jatre : ಅದ್ದೂರಿಯಾಗಿ ನೆರವೇರಿದ ಗಂಗಾಭವಾನಿ ದೇವಿಯ ಜಾರುಟ್ಲು ಜಾತ್ರೆ, ಹರಿದುಬಂದ ಜನಸಾಗರ….!
    State

    Jatre : ಅದ್ದೂರಿಯಾಗಿ ನೆರವೇರಿದ ಗಂಗಾಭವಾನಿ ದೇವಿಯ ಜಾರುಟ್ಲು ಜಾತ್ರೆ, ಹರಿದುಬಂದ ಜನಸಾಗರ….!

    By by AdminApril 1, 2025No Comments2 Mins Read
    Facebook Twitter Pinterest WhatsApp
    Devotees climbing the greased pole during Gangabhavani Jarutlu Jatre in Somenahalli, Gudibande, Karnataka

    Table of Contents

    Toggle
    • Jatre – ಜಾತ್ರೆಯ ಆರಂಭ: ಪವಿತ್ರ ಪೂಜೆ ಮತ್ತು ಮಹಾಮಂಗಳಾರತಿ
      • Jatre – ಜಾರುಟ್ಲು ಮರ ಏರಿಕೆ: ರೋಚಕ ಸ್ಪರ್ಧೆಯ ಆರಂಭ

    Jatre – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಂಭ್ರಮದೊಂದಿಗೆ ಗ್ರಾಮ ದೇವತೆ ಗಂಗಾಭವಾನಿ ದೇವಿಯ 70ನೇ ವರ್ಷದ ಜಾರುಟ್ಲು ಜಾತ್ರೆಯು ಅತ್ಯಂತ ಅದ್ದೂರಿಯಾಗಿ ಜರುಗಿತು. ಈ ವಿಶೇಷ ಜಾತ್ರೆಗೆ ಸ್ಥಳೀಯ ಜನರಷ್ಟೇ ಅಲ್ಲದೆ ದೂರದ ಕೋಲಾರ, ತುಮಕೂರು, ಮೈಸೂರು, ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕದಿರಿ, ಗೋರೆಂಟ್ಲ, ಅನಂತಪುರದಂತಹ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಜಾತ್ರೆಯ ಸಂಪೂರ್ಣ ಆಯೋಜನೆಯನ್ನು ಗಂಗಾಭವಾನಿ ಭಕ್ತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದರು.

    Devotees climbing the greased pole during Gangabhavani Jarutlu Jatre in Somenahalli, Gudibande, Karnataka

    Jatre – ಜಾತ್ರೆಯ ಆರಂಭ: ಪವಿತ್ರ ಪೂಜೆ ಮತ್ತು ಮಹಾಮಂಗಳಾರತಿ

    ಸೋಮೇನಹಳ್ಳಿ ಗ್ರಾಮದ ಗಂಗಾಭವಾನಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ಮಧ್ಯಾಹ್ನ 3:30 ಗಂಟೆಗೆ ಜಾತ್ರೆಯ ಮುಖ್ಯ ಆಕರ್ಷಣೆಯಾದ ಜಾರುಟ್ಲು ಮರಕ್ಕೆ ಪೂಜೆ ಆರಂಭವಾಯಿತು. ಗ್ರಾಮದ ಪೌರೋಹಿತರಾದ ಎಸ್.ಎಲ್. ಬಾಲಸುಬ್ರಹ್ಮಣ್ಯಂ ಮತ್ತು ವಿಜಯ್ ಕುಮಾರ್ ಅವರು ಪುಣ್ಯಾಹ ಮತ್ತು ಪೂಜಾ ಕಾರ್ಯಗಳನ್ನು  ನೆರವೇರಿಸಿದರು. ಈ ಸಂದರ್ಭದಲ್ಲಿ ಅಲಂಕೃತಗೊಂಡ ಗಂಗಾಭವಾನಿ ದೇವಿಗೆ ತೆಂಗಿನಕಾಯಿ ಒಡೆಯಲಾಗಿ, ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡವು.

    Jatre – ಜಾರುಟ್ಲು ಮರ ಏರಿಕೆ: ರೋಚಕ ಸ್ಪರ್ಧೆಯ ಆರಂಭ

    ಈ ಜಾತ್ರೆಯ ಪ್ರಮುಖ ಘಟನೆಯಾದ ಜಾರುಟ್ಲು ಮರ ಏರಿಕೆಯಲ್ಲಿ ವಾಲ್ಮೀಕಿ ನಾಯಕ ಜನಾಂಗದ 30 ರಿಂದ 40 ಜನರ ತಂಡ ಭಾಗವಹಿಸಿತು. ಮಿಲ್ಟ್ರಿ ಶ್ರೀನಿವಾಸ್, ವೆಂಕಟೇಶಪ್ಪ, ಕೋಳ್ಳ ನಾರಾಯಣಪ್ಪ, ಆದಿನಾರಾಯಣಪ್ಪ ಮಾಸ್ಟರ್, ಸುಬ್ಬನಾರಾಯಣಪ್ಪ ಮತ್ತು ಶಿವಪ್ಪ ಅವರ ನೇತೃತ್ವದಲ್ಲಿ ಈ ತಂಡವು ದೇವಾಲಯಕ್ಕೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿತು. ತದನಂತರ, ಮರದ ಸುತ್ತಲೂ ಸರತಿಯ ಸಾಲಿನಲ್ಲಿ ನಿಂತು ಮರ ಏರಲು ಸಿದ್ಧತೆ ಮಾಡಿಕೊಂಡರು.

    ಇದನ್ನೂ ಓದಿ : ಅದ್ದೂರಿಯಾಗಿ ನಡೆದ ಸೋಮೇನಹಳ್ಳಿ ಗಂಗಾಭವಾನಿ ದೇವಿಯ ತಂಬಿಟ್ಟು ದೀಪೋತ್ಸವ….!

    ಮರದ ತುದಿಯಲ್ಲಿ ಕುಳಿತ ಅಕ್ಕಸಾಲಿಗ ರಾಮಕೃಷ್ಣ ಮತ್ತು ಕುಮಾರ್ ಅವರು ನಾಲ್ಕು ದಿಕ್ಕುಗಳಲ್ಲಿ ಕಟ್ಟಿದ ಹಗ್ಗದ ಸಹಾಯದಿಂದ ಮೇಲಕ್ಕೆ ಏರಿ, ನೀರನ್ನು ಹಾಯಿಸುವ ಕಾರ್ಯವನ್ನು ಪ್ರಾರಂಭಿಸಿದರು. ಈ ವೇಳೆ ಉಪ್ಪಾರ ಚೌಡಪ್ಪ ಅವರು ಕಂಬದ ಮೇಲಿರುವವರಿಗೆ ಸಹಕಾರ ನೀಡಿದರು. ನಾಯಕ ತಳವಾರ ಜನಾಂಗದ ಯುವಕರು ಜಾರುವ ಸವಾಲನ್ನು ಸ್ವೀಕರಿಸಿದರು. ಮರವನ್ನು ಏರುವುದು, ಜಾರುವುದು ಮತ್ತು ಕೆಳಗೆ ಬೀಳುವ ಈ ಮನರಂಜನಾತ್ಮಕ ಆಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.

    Devotees climbing the greased pole during Gangabhavani Jarutlu Jatre in Somenahalli, Gudibande, Karnataka

    Jatre – ಜನರಿಗೆ ಮನರಂಜನೆ ನೀಡಿದ ಜಾರುಟ್ಲು

    ಕೊನೆಯಲ್ಲಿ, ನಾಯಕ ಜನಾಂಗದ ಲಕ್ಷ್ಮಣ ಮತ್ತು ಮಂಜುನಾಥ ಅವರು ಹಗ್ಗಗಳನ್ನು ಕಂಬಕ್ಕೆ ಕಟ್ಟಿಕೊಂಡು ಮರವನ್ನು ಏರಿ, ತುದಿಯಲ್ಲಿದ್ದ ಅಕ್ಕಸಾಲಿಗನನ್ನು ಕೆಳಗೆ ಬೀಳಿಸುವ ಪ್ರಯತ್ನ ಮಾಡಿದರು. ಅಕ್ಕಸಾಲಿಗ ಮತ್ತು ನಾಯಕ ಜನಾಂಗದವರ ನಡುವಿನ ಜಂಗಿ ಕುಸ್ತಿ ನೆರೆದಿದ್ದ ಜನರಿಗೆ ಭರ್ಜರಿ ಮನರಂಜನೆ ನೀಡಿತು. ಗ್ರಾಮದ ಯುವ ಘರ್ಜನೆ ಯುವಕ ಸಂಘದವರು ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಭಕ್ತರು ಭಕ್ತಿಭಾವದಿಂದ ಗಂಗಾಭವಾನಿ ದೇವಿಯ ಆಶೀರ್ವಾದ ಪಡೆದರು.

    Ganga Bhavani Devi Festival 2025 Ganga Bhavani Devi Pooja Gudibande Temple Celebrations Kannada Temple Festivals 2025 Karnataka Village Festivals 2025 Religious Event Sappalamma and Chowdeshwari Devi Worship Shakti Devi Worship Karnataka Somenhalli Annual Jatre Somenhalli Ganga Bhavani Jatre Tumbittu Deepa Seve Ritual
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    May 17, 2025

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025
    Leave A Reply Cancel Reply

    IPL 2025 Live Score
    Don't Miss

    Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ…!

    State May 17, 2025

    Indira Canteen  – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಬಾಗೇಪಲ್ಲಿಯಲ್ಲಿಂದು ಲೋಕಾರ್ಪಣೆಗೊಂಡಿತು. ಬಡವರು ಮತ್ತು ದುಡಿಯುವ…

    Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!

    May 17, 2025

    Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

    May 17, 2025

    Viral Video: ಹುಲಿಯನ್ನು ನುಂಗಲು ಯತ್ನಿಸಿದ ಅನಕೊಂಡ, ಕೊನೆಯಲ್ಲಿ ಆಗಿದ್ದೇನು, ವಿಡಿಯೋ ನೋಡಿದೊರೆಲ್ಲಾ ಶಾಕ್…!

    May 16, 2025

    Monkey Waiter : ಬನ್ನಿ ಬನ್ನಿ! ಕೋತಿಗಳು ಊಟ ಬಡಿಸುವ ಜಪಾನ್ ಹೋಟೆಲ್… ಮುಗಿಬೀಳುತ್ತಿರುವ ಜನ…!

    May 16, 2025

    Milk and Rice : ಹಾಲು ಮತ್ತು ಅನ್ನಆರೋಗ್ಯಕ್ಕೆ ಅಮೃತ, ಇಲ್ಲಿದೆ ಪೋಷಕಾಂಶಗಳ ಆಗರ, ಮಾಹಿತಿ ಇಲ್ಲಿದೆ ನೋಡಿ…..!

    May 16, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.