Monday, June 30, 2025
HomeSpecialGanesha Temple: ತಲೆಯಿಲ್ಲದ ಗಣಪತಿಯ ದೇವಾಲಯ ಎಲ್ಲಿದೆ ಗೊತ್ತಾ? ಆ ದೇವಾಲಯದ ವಿಶೇಷತೆ ಏನು ಗೊತ್ತಾ?

Ganesha Temple: ತಲೆಯಿಲ್ಲದ ಗಣಪತಿಯ ದೇವಾಲಯ ಎಲ್ಲಿದೆ ಗೊತ್ತಾ? ಆ ದೇವಾಲಯದ ವಿಶೇಷತೆ ಏನು ಗೊತ್ತಾ?

ವಿಘ್ನ ವಿನಾಯಕನ ದೇಗುಲಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅನೇಕ ಭಾಗಗಳಲ್ಲಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಸಹ ಇದೆ. ಆದರೆ ಇಲ್ಲೊಂದು ದೇವಾಲಯ (Ganesha Temple) ಎಲ್ಲದಕ್ಕಿಂತ ವಿಶೇಷ ಎಂದೇ ಹೇಳಬಹುದು. ಒಂದು ಗಣಪನ ಆಲಯದಲ್ಲಿ ತಲೆಗೆ ಮಾತ್ರ ಪೂಜೆ ಮಾಡಲಾಗುತ್ತದೆ. ಮತ್ತೊಂದು ದೇವಾಲಯದಲ್ಲಿ ತಲೆ ಇಲ್ಲದೇ ದೇಹಕ್ಕೆ ಮಾತ್ರ ಪೂಜಾ ಕೈಂಕರ್ಯಗಳು (Ganesha Temple) ನಡೆಯುತ್ತವೆಯಂತೆ. ಈ ದೇವಾಲಯ ಎಲ್ಲಿದೆ, ಆ ದೇವಾಲಯದ ವಿಶೇಷತೆ ಏನು ಎಂಬುದರ ಬಗ್ಗೆ ಸಂಗ್ರಹ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Mundkatiya Ganesh Temple 0

ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದ ನಾನಾ ಕಡೆ ಗಣೇಶನ ಭಕ್ತರಿದ್ದಾರೆ. ಅನೇಕ ದೇಶಗಳಲ್ಲಿ ವಿನಾಯಕನ (Ganesha Temple)ಗುಡಿಗಳಿವೆ. ಪುರಾಣಗಳ ಪ್ರಕಾರ ಪಾರ್ವತಿ ಸ್ನಾನ ಮಾಡುವಾಗ ಶಿವ ಒಳಗೆ ಪ್ರವೇಶ ಮಾಡಲು ಹೋದಾಗ ಪಾರ್ವತಿ ದೇವಿ ಪ್ರಾಣ ನೀಡಿದಂತಹ ವಿನಾಯಕ ಹಾಗೂ ಶಿವನ ನಡುವೆ ಗಲಾಟೆ ನಡೆಯುತ್ತದೆ. ಈ (Ganesha Temple)ಸಮಯದಲ್ಲಿ ಗಣಪನ ತಲೆಯನ್ನು ಶಿವ ಕತ್ತರಿಸುತ್ತಾನೆ. ಬಳಿಕ ಆ ಬಾಲಕನ ಶರೀರಕ್ಕೆ ಉತ್ತರ ದಿಕ್ಕಿನಲ್ಲಿ ನಿದ್ದೆಹೋಗುತ್ತಿದ್ದ ಆನೆಯ ತಲೆಯನ್ನು ಜೋಡಿಸಿ ಪ್ರಾಣ ನೀಡುತ್ತಾರೆ. ಈ ಕಥೆ ಎಲ್ಲರಿಗೂ ತಿಳಿದೇ ಇದೆ. ಆದರೆ ಒಂದು ದೇವಾಲಯದಲ್ಲಿ ಗಣಪನಿಗೆ ತಲೆ ಇಲ್ಲದೇ ಪೂಜೆಗಳು ನಡೆಯುತ್ತಿವೆ. ಈ ವಿಶೇಷ ದೇವಾಲಯ ಎಲ್ಲಿದೆ ಎಂಬುದನ್ನು ತಿಳಿಯೋಣ ಬನ್ನಿ

ಜ್ಞಾನ ಸಂಪದಕ್ಕೆ ವಿನಾಯಕ ಅಧಿಪತಿ, ಯಾವುದೇ ಶುಭ ಕಾರ್ಯಕ್ರಮ ಆರಂಭಿಸುವುದಕ್ಕೂ (Ganesha Temple) ಮುನ್ನಾ ವಿನಾಯನಿಗೆ ಪೂಜೆ ಸಲ್ಲಿಸುವುದು ಹಿಂದೂಗಳ ಸಂಪ್ರದಾಯ. ಸರ್ವ ವಿಘ್ಞಗಳನ್ನು ನಿವಾರಿಸುವಂತಹ ಗಣಪನ ದೇವಾಲಯಗಳು ಭಾರತ ದೇಶ ಮಾತ್ರವಲ್ಲದೇ ಇಡೀ ವಿಶ್ವದ ನಾನಾ ದೇಶಗಳಲ್ಲೂ ಇದೆ. ಭಾರತದಲ್ಲಿ ಅನೇಕ ಪುರಾತನ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಗಣಪನನ್ನು ಪೂಜಿಸಲಾಗುತ್ತಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ (Ganesha Temple) ವಿಘ್ಞ ವಿನಾಯನಿಗೆ ವಿನಾಯಕ ಚತುರ್ಥಿಯಂದು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಗಲ್ಲಿ ಗಲ್ಲಿಗಳಲ್ಲಿ ವಿನಾಯಕ ವಿಗ್ರಹಗಳನ್ನು ಕೂರಿಸಿ ಪೂಜೆ ಮಾಡುತ್ತಾರೆ.

Mundkatiya Ganesh Temple 2

ಆದರೆ ಈ ದೇವಾಲಯದಲ್ಲಿ ಮಾತ್ರ ವಿನಾಯಕನಿಗೆ ತಲೆ (Ganesha Temple) ಇರುವುದಿಲ್ಲ. ವಿನಾಯನ ಶರೀರಕ್ಕೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಈ ದೇವಾಲಯದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಪುರಾಣಗಳ ಪ್ರಕಾರ ಪಾರ್ವತಿಯನ್ನು ನೋಡಲು ಹೋಗುತ್ತಿದ್ದಾಗ ಶಿವನನ್ನು ತಡೆದಂತಹ ಬಾಲಕನ ತಲೆಯನ್ನು ಶಿವ ಕತ್ತರಿಸುತ್ತಾನೆ. (Ganesha Temple) ಬಳಿಕ ಆನೆಯ ತಲೆಯನ್ನು ಕಡಿದು ತಂದು ಆ ಬಾಲಕನಿಗೆ ಪ್ರಾಣ ಕೊಡುತ್ತಾರೆ. ಇದೀಗ ನಾವು ಹೇಳುತ್ತಿರುವ ದೇವಾಲಯದ ಭೂಮಿಯಲ್ಲಿಯದೇ ಬ್ರಹ್ಮಾದಿ ದೇವತೆಗಳು ಆನೆಯ ತಲೆಯನ್ನು ಬಾಲಕನಿಗೆ ಜೋಡಿಸಿ ಪ್ರಾಣ ನೀಡಿದ್ದಾರೆ ಎಂದು ಹೇಳಲಾಗುತ್ತದೆ.

ಈ ದೇವಾಲಯವು ಉತ್ತರಾಖಂಡದಲ್ಲಿದೆ.(Ganesha Temple)  ದೇವಾಲಯವನ್ನು ಮುಂಡೆ ಕತಿಯಾ ಎಂದು ಕರೆಯಲಾಗುತ್ತದೆ. ಉತ್ತರಾಖಂಡದ ಕೇದಾರ್‍ ಕಣಿವವೆಯಲ್ಲಿ ಈ ತಲೆಯಲ್ಲಿದ ಗಣಪನ ವಿಗ್ರಹವನ್ನು ಪೂಜಿಸುತ್ತಾರೆ. ಈ ಭಾಗವನ್ನು ದೇವಭೂಮಿ ಎಂದು ಹೇಳುತ್ತಾರೆ. ಈ ಭಾಗದಲ್ಲಿ ಶಿವ, ಕೇಶವ ದೇವರ ಜೊತೆಗೆ ಅನೇಕ ದೇವರ ದೇವಾಲಯಗಳಿವೆ. (Ganesha Temple) ಇಲ್ಲಿಯೇ ಮುಂಡೆ ಕತಿಯಾ ಎಂಬ ದೇವಾಲಯವಿದೆ.ಈ ಭಾಗದಲ್ಲಿಯೇ ಶಿವ ಬಾಲಕನ ತಲೆಯನ್ನು ಕಡಿದು ಆನೆಯ ತಲೆಯನ್ನು ಜೋಡಿಸಿದರು. ಅದಕ್ಕಾಗಿಯೇ ಈ ಭಾಗಕ್ಕೆ ಮುಂಡೆಕತಿಯಾ ಎಂಬ ಹೆಸರು ಬಂದಿದೆ (Ganesha Temple) ಎಂದು ಸ್ಥಳೀಯರು ಹೇಳುತ್ತಿರುತ್ತಾರೆ. ಈ ದೇವಾಲಯದಲ್ಲಿ ಬೇಡಿದ ಬೇಡಿಕೆಗಳು ಈಡೇರುತ್ತವೆ. ತುಂಬಾನೆ ದೈವಿಕ ಶಕ್ತಿ ಈ ದೇವಾಲಯದಲ್ಲಿದೆ ಎಂದು ಹೇಳಲಾಗುತ್ತದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular