Sunday, June 29, 2025
HomeStateDavanagere : ದಾವಣಗೆರೆಯ ವಿಚಿತ್ರ ಪ್ರೇಮಕಥೆ : ಇದು ಎಂಥಾ ಪ್ರೀತಿ?: 25ರ ಅಳಿಯ, 55ರ...

Davanagere : ದಾವಣಗೆರೆಯ ವಿಚಿತ್ರ ಪ್ರೇಮಕಥೆ : ಇದು ಎಂಥಾ ಪ್ರೀತಿ?: 25ರ ಅಳಿಯ, 55ರ ಅತ್ತೆ ಜೊತೆ ಪರಾರಿ….!

Davanagere : ದಾವಣಗೆರೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗಿ ಕೇವಲ ಎರಡೇ ತಿಂಗಳಾಗಿದ್ದ 25 ವರ್ಷದ ಅಳಿಯನೊರ್ವ  ತನ್ನ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿದ್ದಾನೆ. ಈ ಘಟನೆ ಕೇಳಿದವರನ್ನು ದಿಗ್ಭ್ರಮೆಗೊಳಿಸಿದೆ. ಚನ್ನಗಿರಿ ಬಸ್ ನಿಲ್ದಾಣದಲ್ಲಿ ತನ್ನ ಪತ್ನಿ ಹೇಮಾಳನ್ನು ಬಿಟ್ಟು, ಗಣೇಶ್ ಎಂಬಾತ ತನ್ನ ಅತ್ತೆ ಶೋಭಾ ಜೊತೆ ಪರಾರಿಯಾಗಿದ್ದಾನೆ. ಗಣೇಶನ ವಯಸ್ಸು 25 ಆಗಿದ್ದರೆ, ಅತ್ತೆ ಶೋಭಾ ಗಣೇಶನಿಗಿಂತ 30 ವರ್ಷ ದೊಡ್ಡವಳು. ಮದುವೆಯಾಗಿ ಎರಡೇ ತಿಂಗಳುಗಳಲ್ಲಿ ತನ್ನ ಪತಿ ತನ್ನ ತಾಯಿಯ ಜೊತೆ ಓಡಿಹೋಗಿರುವುದಕ್ಕೆ ಪತ್ನಿ ಹೇಮಾ ಕಣ್ಣೀರಿಟ್ಟಿದ್ದಾಳೆ.

A 25-year-old man elopes with his 55-year-old mother-in-law in Davanagere, Karnataka, leaving his newlywed wife in shock — emotional scene at a bus stand.

Davanagere : ಎರಡು ತಿಂಗಳ ಹಿಂದೆಯಷ್ಟೆ ನಡೆದಿತ್ತು ಮದುವೆ

ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಎರಡನೇ ಪತ್ನಿ ಶಾಂತಾ. ಸುಮಾರು 13 ವರ್ಷಗಳ ಹಿಂದೆ ನಾಗರಾಜ್ ಶಾಂತಾ ಅವರನ್ನು ಮದುವೆಯಾಗಿದ್ದರು. ನಾಗರಾಜ್ ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಅವರ ಹಿರಿಯ ಮಗಳು ಹೇಮಾಳನ್ನು ಎರಡು ತಿಂಗಳ ಹಿಂದಷ್ಟೇ ಗಣೇಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಈಗ ಗಣೇಶ್ ತನ್ನ ಹೆಂಡತಿಯನ್ನು ಬಿಟ್ಟು, ಆಕೆಯ ಮಲತಾಯಿ ಶಾಂತಾಳೊಂದಿಗೆ ಪರಾರಿಯಾಗಿದ್ದಾನೆ.

Davanagere : ಪತಿಯ ಮೊಬೈಲ್‌ನಲ್ಲಿತ್ತು ಅತ್ತೆಯ ಜೊತೆಗಿನ ರೊಮ್ಯಾನ್ಸ್ ವಿಡಿಯೋ

ಮದುವೆಗೂ ಎರಡು ವರ್ಷಗಳ ಮೊದಲು ಶಾಂತಾ, ಗಣೇಶನನ್ನು ಮನೆಗೆ ಕರೆತಂದು, ಮಗಳನ್ನು ಮದುವೆ ಮಾಡಿಕೊಟ್ಟು ಮನೆಯ ಅಳಿಯನನ್ನಾಗಿ ಇಟ್ಟುಕೊಳ್ಳುವ ಆಮಿಷ ಒಡ್ಡಿದ್ದರು. ಅದರಂತೆ, ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶ್ ಜೊತೆ ಹೇಮಾಳ ಮದುವೆಯಾಗಿತ್ತು. ಆದರೆ, ಮದುವೆಯಾದ 15 ದಿನಗಳಲ್ಲೇ ಗಣೇಶ್ ಮತ್ತು ಶಾಂತಾ ನಡುವೆ ಅಕ್ರಮ ಸಂಬಂಧ ಇರುವುದು ಬಯಲಾಗಿದೆ. ಗಣೇಶ್ ಮೊಬೈಲ್‌ನಲ್ಲಿ ಶಾಂತಾ ಜೊತೆಗಿನ ಅಶ್ಲೀಲ ಮೆಸೇಜ್‌ಗಳನ್ನು ಹೇಮಾ ನೋಡಿದ್ದಾರೆ.

A 25-year-old man elopes with his 55-year-old mother-in-law in Davanagere, Karnataka, leaving his newlywed wife in shock — emotional scene at a bus stand.

 

Read this also : ಉತ್ತರ ಪ್ರದೇಶದ ವಿಚಿತ್ರ ಘಟನೆ, ಮಾವ-ಭಾವಿ ಸೊಸೆಯ ಮದುವೆ, 6 ಮಕ್ಕಳ ತಂದೆಯ ವಿಚಿತ್ರ ಪ್ರೇಮ ಕಹಾನಿ…!

Davanagere : ದೂರು ದಾಖಲು

ತಕ್ಷಣವೇ ಹೇಮಾ ಆ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಕಳುಹಿಸಿದ್ದಾರೆ. ಗಣೇಶ್ ಮತ್ತು ಶಾಂತಾ ನಡುವಿನ ಈ ಸಂಬಂಧವನ್ನು ನೋಡಿ ನಾಗರಾಜ್ ಆಘಾತಕ್ಕೊಳಗಾಗಿದ್ದಾರೆ. ಸತ್ಯ ಬಯಲಾಗುತ್ತಿದ್ದಂತೆ, ಶಾಂತಾ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕದ್ದು ಗಣೇಶ್ ಜೊತೆ ಪರಾರಿಯಾಗಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular