Dalit – “ದಲಿತರು, ಕೂಲಿ ಕಾರ್ಮಿಕರು, ಬಡವರು ಮತ್ತು ಹಿಂದುಳಿದವರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟಗಳ ಮೂಲಕ ನ್ಯಾಯ ಒದಗಿಸುವುದು ಹಾಗೂ ಜಿಲ್ಲೆಯಲ್ಲಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿಯನ್ನು ಬಲಿಷ್ಠಗೊಳಿಸುವುದು ನನ್ನ ಪ್ರಾಮಾಣಿಕ ಪ್ರಯತ್ನವಾಗಿರುತ್ತದೆ” ಎಂದು ನೂತನ ಜಿಲ್ಲಾಧ್ಯಕ್ಷ ಎಂ.ವಿ.ಲಕ್ಷ್ಮೀನರಸಿಂಹಪ್ಪ ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳೊಂದಿಗೆ ಸಮಸಮಾಜದ ಕನಸು ಹೊತ್ತಿರುವ ನಮ್ಮ ಸಮಿತಿಯು ಕಳೆದ 10 ವರ್ಷಗಳಿಂದ ರಾಜ್ಯದಾದ್ಯಂತ ದುರ್ಬಲರ ಧ್ವನಿಯಾಗಿ ಹೋರಾಡುತ್ತಿದೆ. ಬಡವರು, ದಲಿತರು, ಮಹಿಳೆಯರು, ಕಾರ್ಮಿಕರು ಹಾಗೂ ಹಿಂದುಳಿದವರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ ಅವರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಅವರು ವಿವರಿಸಿದರು.
Dalit – ಪ್ರಮುಖ ಬೇಡಿಕೆಗಳು ಮತ್ತು ಸಂಘಟನಾತ್ಮಕ ಗುರಿಗಳು
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀನರಸಿಂಹಪ್ಪ ಅವರು, ಪಟ್ಟಣದ ಶಿಥಿಲಗೊಂಡಿರುವ ಅಂಬೇಡ್ಕರ್ ಪುತ್ಥಳಿಯನ್ನು ಬದಲಾಯಿಸಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವುದು, ಅಂಬೇಡ್ಕರ್ ಭವನದಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
Dalit – ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲವರ್ಧನೆ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ, ಅದರಲ್ಲೂ ವಿಶೇಷವಾಗಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ನಮ್ಮ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಇತ್ತೀಚೆಗೆ ನಮ್ಮ ರಾಜ್ಯಾಧ್ಯಕ್ಷರಾದ ಎಂ.ಎಂ.ರಾಜು ಅವರ ಅಧ್ಯಕ್ಷತೆಯಲ್ಲಿ ಬಾಗೇಪಲ್ಲಿಯ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿ, ಜಿಲ್ಲಾ ಮತ್ತು ಬಾಗೇಪಲ್ಲಿ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
Read this also : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್ ರಹೇ…!
Dalit – ನೂತನ ಪದಾಧಿಕಾರಿಗಳ ಪಟ್ಟಿ
ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳ ವಿವರವನ್ನು ಅವರು ಈ ಕೆಳಗಿನಂತೆ ನೀಡಿದರು:
- ಜಿಲ್ಲಾ ಗೌರವಾಧ್ಯಕ್ಷ: ಜಿ.ಎಲ್.ರಾಮಾಂಜಿನೇಯಪ್ಪ
- ಜಿಲ್ಲಾಧ್ಯಕ್ಷ: ಎಂ.ವಿ.ಲಕ್ಷ್ಮೀನರಸಿಂಹಪ್ಪ
- ಪ್ರಧಾನ ಕಾರ್ಯದರ್ಶಿ: ಎನ್.ನಾರಾಯಣಸ್ವಾಮಿ
- ಯುವ ಘಟಕ ಅಧ್ಯಕ್ಷ: ಟಿ.ವೆಂಕಟೇಶ್
- ಜಿಲ್ಲಾ ಉಪಾಧ್ಯಕ್ಷ: ಪೆನಮಲೆನರಸಿಂಹಪ್ಪ
- ಜಿಲ್ಲಾ ಸಹಕಾರ್ಯದರ್ಶಿ: ಅರುಣ್ ಕುಮಾರ್
- ಚಾಲಕರ ಘಟಕದ ಜಿಲ್ಲಾಧ್ಯಕ್ಷ: ಟಿ.ಆನಂದ್
- ಬಾಗೇಪಲ್ಲಿ ತಾಲೂಕು ಗೌರವಾಧ್ಯಕ್ಷ: ಸಿ.ತಿಪ್ಪನ್ನ
- ಬಾಗೇಪಲ್ಲಿ ತಾಲೂಕು ಅಧ್ಯಕ್ಷ: ಜಿ.ಮೂರ್ತಿ
- ಬಾಗೇಪಲ್ಲಿ ತಾಲೂಕು ಉಪಾಧ್ಯಕ್ಷ: ಆನಂದ್
- ಬಾಗೇಪಲ್ಲಿ ತಾಲೂಕು ಕಾರ್ಯದರ್ಶಿ: ಶ್ರೀನಿವಾಸ್
- ಬಾಗೇಪಲ್ಲಿ ತಾಲೂಕು ಸಹಕಾರ್ಯದರ್ಶಿ: ಜಿ.ಮದ್ದೇಪಲ್ಲಿ ಶ್ರೀನಿವಾಸ್
- ಬಾಗೇಪಲ್ಲಿ ತಾಲೂಕು ಖಜಾಂಚಿ: ಆರ್.ನರಸಿಂಹಪ್ಪ
- ಬಾಗೇಪಲ್ಲಿ ನಗರ ಘಟಕದ ಅಧ್ಯಕ್ಷ: ಪಿ.ವಿ.ವಿನಯ್ ಕುಮಾರ್
- ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷ: ನಾಗರತ್ನಮ್ಮ
- ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ: ಗಂಗುಲಮ್ಮ
- ಬಾಗೇಪಲ್ಲಿ ತಾಲೂಕು ಮಹಿಳಾ ಘಟಕದ ಗೌರವಾಧ್ಯಕ್ಷ: ಕಾಂತಮ್ಮ
- ಬಾಗೇಪಲ್ಲಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷ: ವಿ.ವನಜಾ
- ಬಾಗೇಪಲ್ಲಿ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ: ಅರುಣಮ್ಮ
- ಬಾಗೇಪಲ್ಲಿ ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ: ರೂಪ
- ಬಾಗೇಪಲ್ಲಿ ತಾಲೂಕು ಮಹಿಳಾ ಘಟಕದ ಸದಸ್ಯರು: ರಾಧ, ರಮಾದೇವಿ, ಭೂದೇವಿ
ಈ ಸಂದರ್ಭದಲ್ಲಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ನಾಗಪ್ಪ, ತಾಲೂಕು ಅಧ್ಯಕ್ಷ ಜಿ.ಮೂರ್ತಿ, ಜಿಲ್ಲಾ ಗೌರವಾಧ್ಯಕ್ಷ ರಾಮಾಂಜಿನೇಯಪ್ಪ, ತಾ.ಗೌರವಾಧ್ಯಕ್ಷ ಸಿ.ತಿಪ್ಪನ್ನ, ಮುಖಂಡರಾದ ಸಾಯಿ, ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.