Crime News : ಆರ್ಡರ್ ಇನ್ನೂ ಬಂದಿಲ್ಲ ಎಂದ ಗ್ರಾಹಕನನ್ನು ಕೊಲೆ ಮಾಡಿದ ಹೋಟೆಲ್ ಮಾಲೀಕ…!

Crime News – ಊಟ ಮಾಡಲು ಹೋಟೆಲ್ ಒಂದಕ್ಕೆ ಹೋದ ವ್ಯಕ್ತಿಯೊರ್ವ ತನ್ನ ಆರ್ಡರ್‍ ಇನ್ನೂ ಬಂದಿಲ್ಲ ಎಂದು ಹೇಳಿದ್ದಕ್ಕೆ ಕೊಲೆಯಾಗಿದ್ದಾನೆ. ಈ ಘಟನೆ ದೆಹಲಿಯ ಟ್ಯಾಗೋರ್‍ (Crime News) ಗಾರ್ಡನ್ ನಲ್ಲಿ ಕಳೆದ ಮಂಗಳವಾರ ನಡೆದಿದೆ. ತಡರಾತ್ರಿ ಊಟ ಮಾಡಲು ಪುರ್‍ ಆರ್ಡರ್‍ ಮಾಡಿದ್ದು, ಆರ್ಡರ್‍ ಲೇಟ್ ಆಗಿದೆ ಎಂದು ಹೇಳಿದ್ದಕ್ಕಾಗಿ ಆತನ ಮೇಲೆ ಸಿಟ್ಟಾದ ಮಾಲೀಕ ಕಬಾಬ್ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದರಿಂದಾಗಿ (Crime News) ಗ್ರಾಹಕ ಮೃತಪಟ್ಟಿದ್ದಾನೆ.

Crime News- ಆರ್ಡರ್‍ ಬಂದಿಲ್ಲ ಅಂತಾ ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ :

ಮೃತ ದುರ್ದೈವಿಯನ್ನು (Crime News)  ದೆಹಲಿಯ ಚಂದ್ರ ವಿಹಾರ್‍ ನ ಹರ್ನೀತ್ ಸೀಂಗ್ ಸಚ್ ದೇವ (29) ಎಂದು ಗುರ್ತಿಸಲಾಗಿದೆ. ಮೃತ ದುರ್ದೈವಿ ಹರ್ನೀತ್ ಸಿಂಗ್ ಕಳೆದ ಮಂಗಳವಾರ ರಾತ್ರಿ ಕಬಾಬ್ ತಿನ್ನಲು ಹೋಟೆಲ್ ಒಂದಕ್ಕೆ ಹೋಗಿದ್ದರು. ತುಂಬಾ ಸಮಯ ಆದರೂ ಸಹ ಆರ್ಡರ್‍ ಬಂದಿಲ್ಲ. (Crime News) ಈ ಕಾರಣದಿಂದ ಹರ್ನೀತ್ ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಹೋಟೆಲ್ ಮಾಲೀಕ ಹಾಗೂ ಅವರ ಮಗ, ಸುಮಾರು 10 ನಿಮಿಷಗಳ ಕಾಲ (Crime News) ಹರ್ನೀತ್ ಸಿಂಗ್ ಮೇಲೆ ಕಬಾಬ್ ರಾಡ್ ನಿಂದಲೇ ಹಲ್ಲೆ ನಡೆಸಿದ್ದಾರೆ. ಈ ಕಾರಣದಿಂದ ತೀವ್ರವಾಗಿ ಗಾಯಗೊಂಡ ಹರ್ನೀತ್ ಸಿಂಗ್ ಮೃತಪಟ್ಟಿದ್ದಾರೆ.

man killed for order food is late 0

Crime News – ಸೀಕ್ ಕಬಾಬ್ ರಾಡ್ ನಿಂದ ಹಲ್ಲೆ:

ಇನ್ನೂ ಪೇಂಟರ್‍ (Crime News) ಕೆಲಸ ಮಾಡುತ್ತಿದ್ದ ಹರ್ನೀತ್ ಹಾಗೂ ತನ್ನ ಇಬ್ಬರು ಸ್ನೇಹಿತರೊಂದಿಗೆ ಖೇತನ್ ಪುಡ್ ಹೆಸರಿನ ಟೇಕ್ ಅವೇ ಹೋಟೆಲ್ ಗೆ ಭೇಟಿ ನೀಡಿದ್ದರು. ತಮ್ಮ ಆರ್ಡರ್‍ ನ್ನು ತಡವಾಗಿದ್ದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರು ಕೋಪಗೊಂಡಿದ್ದರು. ನನ್ನ ಆರ್ಡರ್‍ ಇನ್ನೂ ರೆಡಿಯಾಗಿಲ್ಲವೇ ಎಂದು ಕೌಂಟರ್‍ ಬಳಿ ಹೋಗಿ ವಿಚಾರಣೆ ನಡೆಸಿದ್ದಾರೆ. (Crime News) ಪುಡ್ ರೆಡಿಯಾಗಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿತ್ತು. ಇದರಿಂದ ಹರ್ನೀತ್ ಜಗಳ ಮಾಡಿ ತಾನು ನೀಡಿದ ಹಣ ವಾಪಸ್ ಕೊಡಲು ಹೇಳಿದ್ದಾನೆ. ಇದರಿಂದಾಗಿ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ. (Crime News) ಈ ಸಮಯದಲ್ಲಿ ರೆಸ್ಟೋರೆಂಟ್ ಮಾಲೀಕ ಅಜಯ್ ಹಾಗೂ ಅವರ ಮಗ ಕೇತನ್ ಇಬ್ಬರೂ ಸೇರಿಕೊಂಡು ಹರ್ನೀತ್ ಮೇಲೆ ಸೀಕ್ ಕಬಾಬ್ ರಾಡ್ ಹಾಗೂ ಪಂಚ್ ಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಹರ್ನಿತ್ ಸಹಾಯಕ್ಕೆ ಹೋದ ಸ್ನೇಹತರ ಮೇಲೂ ಹಲ್ಲೆ ನಡೆದಿದೆ. (Crime News) ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಹರ್ನೀತ್ ನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಹರ್ನೀತ್ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, (Crime News) ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಹರ್ನೀತ್ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಹಾಗೂ ಆತನ ಮಗನನ್ನು ಬಂಧಿಸಿ (Crime News)  ವಿಚಾರಣೆ ನಡೆಸುತ್ತದಿದಾರೆ. ಹೋಟೆಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top