Sitaram Yechury: ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಮೃತದೇಹವನ್ನು ಏಮ್ಸ್ ಗೆ ಸಂಶೋಧನೆಗೆ ದಾನ….!

ಸಿಪಿಐಎಂ  ಪಕ್ಷದ ಹಿರಿಯ ನಾಯಕ ಸೀತಾರಾಮಂ ಯೆಚೂರಿ (Sitaram Yechury) ತೀವ್ರ ಉಸಿರಾಟ ತೊಂದರೆಯಿಂದ ಸೆ.12ರ ಮಧ್ಯಾಹ್ನ 3.05 ಗಂಟೆಗೆ ನಿಧನರಾದರು. ಅವರ ಕುಟುಂಬ ಸೀತಾರಾಂ ಯೆಚೂರಿ ರವರ ಮೃತದೇಹವನ್ನು ಬೋಧನೆ ಹಾಗೂ ಸಂಶೋಧನೆಯ ಉದ್ದೇಶಕ್ಕಾಗಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AAIMS)ಗೆ ದಾನ ಮಾಡಿದ್ದಾರೆ.

Sitharam Yechury 0

ಕೆಲವು ದಿನಗಳಿಂದ ಸೀತಾರಾಂ ಯೆಚೂರಿ (72) ರವರು ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಸೆ.12 ರಂದು ಮಧ್ಯಾಹ್ನ 3.05ರ ಸಮಯದಲ್ಲಿ ಇಹಲೋಕ ತ್ಯೆಜಿಸಿದ್ದಾರೆ. ಸೀತಾರಾಂ ಯೆಚೂರಿ ಅವರು 2005ರಿಂದ 2017ರವರೆಗೆ 12 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಅವರು ಏಪ್ರಿಲ್ 19, 2015ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರ ಮೃತದೇಹವನ್ನು ಬೋಧನೆ ಹಾಗೂ ಸಂಶೋಧನಾ ಉದ್ದೇಶಗಳಿಗಾಗಿ AIIMS ಆಸ್ಪತ್ರೆಗೆ ಯೆಚೂರಿಯವರ ಕುಟುಂಬ ದಾನ ಮಾಡಿದೆ ಎಂದು ಏಮ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ಈ ಕುರಿತು ಪೋಸ್ಟ್ ಒಂದನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಲಿಂಕ್ ಇಲ್ಲಿದೆ ನೋಡಿ: https://x.com/DrDatta_AIIMS/status/1834188581125927355

ಇನ್ನೂ ಕಳೆದ ಆ.19 ರಿಂದ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ ಸೋಂಕಿನಿಂದ ಅವರು ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ಮಾಡಿತ್ತಾದರೂ ಅವರ ಆರೋಗ್ಯ ಸುಧಾರಿಸಿರಲಿಲ್ಲ ಎನ್ನಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಾಯಕ ಸೀತಾರಾಂ ಯೆಚೂರಿ ದೈವಾಧೀನರಾಗಿದ್ದರು. ಇನ್ನೂ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ವಿವಿಧ ಪಕ್ಷಗಳ ನಾಯಕರು, ಮುಖಂಡರುಗಳು ಸೀತಾರಾಂ ಯೆಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top