Ayurveda Tips – ಇತ್ತೀಚೆಗೆ ಹೊಕ್ಕಳಿಗೆ ಎಣ್ಣೆ ಹಚ್ಚುವ (belly button oiling) ಪದ್ಧತಿಯು ಮತ್ತೆ ಜನಪ್ರಿಯವಾಗುತ್ತಿದೆ. ಆಯುರ್ವೇದದಲ್ಲಿ ಇದನ್ನು ‘ನಾಭಿ ಚಿಕಿತ್ಸೆ’ ಎಂದು ಕರೆಯುತ್ತಾರೆ. ಇದರ ಪ್ರಕಾರ, ಹೊಕ್ಕಳು ದೇಹದ ಹಲವು ನರಗಳೊಂದಿಗೆ ಸಂಪರ್ಕ ಹೊಂದಿದೆ. ಹಾಗಾಗಿ ಹೊಕ್ಕಳಿಗೆ ಎಣ್ಣೆ ಹಚ್ಚುವುದು ದೇಹದ ಆರೋಗ್ಯಕ್ಕೆ ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಯೋಗ ಗುರು ಮತ್ತು ಲೇಖಕಿ ಹಂಸ ಯೋಗೇಂದ್ರ ತಮ್ಮ ವೀಡಿಯೋ ಒಂದರಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

Ayurveda Tips – ಹೊಕ್ಕಳಿಗೆ ಎಣ್ಣೆ ಹಚ್ಚುವುದರ ಹಿಂದಿನ ಪ್ರಯೋಜನಗಳು
ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಯಾವ ಸಮಸ್ಯೆಗೆ ಯಾವ ಎಣ್ಣೆ ಬಳಸಬೇಕು ಎಂಬುದರ ಕುರಿತು ಇಲ್ಲಿ ವಿವರಣೆ ಇದೆ.
ನಿದ್ರಾಹೀನತೆಗೆ ರಾಮಬಾಣ: ಬಾದಾಮಿ ಎಣ್ಣೆ
ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ನಿಮ್ಮ ಹೊಕ್ಕಳಿಗೆ 2-3 ಹನಿ ಬಾದಾಮಿ ಎಣ್ಣೆ (almond oil) ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆ ಮನಸ್ಸನ್ನು ಶಾಂತಗೊಳಿಸುತ್ತದೆ, ಒತ್ತಡ ಕಡಿಮೆ ಮಾಡುತ್ತದೆ ಮತ್ತು ಗಾಢ ನಿದ್ರೆಗೆ ಸಹಾಯ ಮಾಡುತ್ತದೆ. ಇದರಿಂದ ನೀವು ಬೆಳಿಗ್ಗೆ ರಿಫ್ರೆಶ್ ಆಗಿ ಎದ್ದೇಳಬಹುದು. (Ayurveda Tips)
ಅಜೀರ್ಣ ಸಮಸ್ಯೆಗಳಿಗೆ ಪರಿಹಾರ: ಸಾಸಿವೆ ಎಣ್ಣೆ
ಊಟವಾದ ನಂತರ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಆಗುತ್ತಿದೆಯೇ? ಹಾಗಾದರೆ ಸ್ವಲ್ಪ ಸಾಸಿವೆ ಎಣ್ಣೆಯನ್ನು (mustard oil) ನಿಮ್ಮ ಹೊಕ್ಕಳಿಗೆ ಹಚ್ಚಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯೊಳಗಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಈ ಎಣ್ಣೆಯನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ಮೊಡವೆ ಮತ್ತು ಚರ್ಮದ ಸಮಸ್ಯೆಗಳಿಗೆ: ಬೇವಿನ ಅಥವಾ ತೆಂಗಿನ ಎಣ್ಣೆ
ನಿಮ್ಮ ಮುಖದ ಮೇಲೆ (Ayurveda Tips) ಆಗಾಗ ಮೊಡವೆಗಳು ಮೂಡುತ್ತವೆಯೇ? ಇದಕ್ಕೆ ಪರಿಹಾರವಾಗಿ ನಿಮ್ಮ ಹೊಕ್ಕಳಿಗೆ ಬೇವಿನ ಎಣ್ಣೆ (neem oil) ಅಥವಾ ತೆಂಗಿನ ಎಣ್ಣೆಯನ್ನು (coconut oil) ಬಳಸಿ. ಈ ಎರಡು ಎಣ್ಣೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಇದರಿಂದ ಮುಖ ಹಾಗೂ ಬೆನ್ನಿನ ಮೇಲಿನ ಮೊಡವೆಗಳು ಕ್ರಮೇಣ ಕಡಿಮೆಯಾಗುತ್ತವೆ. Read this also : ಅಮೃತಕ್ಕೆ ಸಮಾನ ಈ ಮಿಶ್ರಣ: ಬೆಳ್ಳುಳ್ಳಿ-ಜೇನುತುಪ್ಪ ಸೇವನೆಯಿಂದ ಆಗುವ ಪ್ರಯೋಜನಗಳು…!
ನೋವುಗಳಿಗೆ ಪರಿಣಾಮಕಾರಿ: ಹರಳೆಣ್ಣೆ
ಬೆನ್ನು ನೋವು, ಕೀಲು ನೋವು ಅಥವಾ ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ನಿಮ್ಮ ಹೊಕ್ಕಳಿಗೆ ಹರಳೆಣ್ಣೆ (castor oil) ಹಚ್ಚಿ ನೋಡಿ. ಹರಳೆಣ್ಣೆಯಲ್ಲಿರುವ ಉರಿಯೂತ ನಿರೋಧಕ ಗುಣಗಳು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಬಳಸುವುದರಿಂದ ನೋವುಗಳಿಗೆ ಶಾಶ್ವತ ಪರಿಹಾರ ಸಿಗಬಹುದು.

ಮನಸ್ಸಿನ ಸಮತೋಲನಕ್ಕೆ: ಹಸುವಿನ ತುಪ್ಪ
ಪೀರಿಯಡ್ಸ್ ಸಮಯದಲ್ಲಿ ಮನಸ್ಥಿತಿ ಬದಲಾವಣೆಗಳು ಅಥವಾ ಹಾರ್ಮೋನಲ್ ವ್ಯತ್ಯಾಸಗಳು ಸಾಮಾನ್ಯ. ಈ ಸಮಯದಲ್ಲಿ ಹೊಕ್ಕಳಿಗೆ ಹಸುವಿನ ತುಪ್ಪ (cow ghee) ಹಚ್ಚುವುದರಿಂದ ಮಾನಸಿಕ (Ayurveda Tips) ಸಮತೋಲನ ಸುಧಾರಿಸುತ್ತದೆ. ತುಪ್ಪ ದೇಹಕ್ಕೆ ತಂಪು ನೀಡಿ ಮನಸ್ಸನ್ನು ಶಾಂತಗೊಳಿಸುತ್ತದೆ.
ಪ್ರಮುಖ ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಮಸ್ಯೆ ಅಥವಾ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಿದ್ದರೆ, ತಜ್ಞ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಎಣ್ಣೆಗಳನ್ನು ಬಳಸುವ ಮೊದಲು ನಿಮ್ಮ ಚರ್ಮಕ್ಕೆ ಅದು ಸೂಕ್ತವೇ ಎಂದು ಪರೀಕ್ಷಿಸುವುದು ಮುಖ್ಯ.
