ಕಲಬುರಗಿ: ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಈ ಘಟನೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವೇನೋ ಎನ್ನುವಂತೆ ಕಲಬುರಗಿಯಲ್ಲಿ (Kalaburagi Brutal Murder) ಹಾಡುಹಗಲೇ ಬೆಚ್ಚಿಬೀಳಿಸುವ ಹತ್ಯೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಬಳುರಗಿ ಗ್ರಾಮದ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಬರ್ಬರವಾಗಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.

Kalaburagi Brutal Murder – ನಡುರಸ್ತೆಯಲ್ಲಿ ‘ಸೈತಾನ’ನ ಅಟ್ಟಹಾಸ!
ಮಾರ್ಚ್ 26ರ ಮಧ್ಯಾಹ್ನ ಸುಮಾರು 11:30ರ ಸಮಯ. ರಸ್ತೆಯಲ್ಲಿ ವಾಹನಗಳ ಸಂಚಾರವಿತ್ತು. ಆದರೆ ಆ ರಾಕ್ಷಸ ಪತಿ ಅಕ್ಷಯ್ ಜಾಧವ್ಗೆ ಯಾವುದರ ಭಯವೂ ಇರಲಿಲ್ಲ. ಮಹಾರಾಷ್ಟ್ರದ ಬಾರಾಮತಿ ಮೂಲದ ಈತ, ತನ್ನ ಪತ್ನಿ ಶೈಲಾ (28 ವರ್ಷ) ಎಂಬಾಕೆಯನ್ನು ದೇವಸ್ಥಾನಕ್ಕೆ ಹೋಗೋಣ ಎಂದು ನಂಬಿಸಿ ಕರೆತಂದಿದ್ದ. ಆದರೆ ಬಳುರಗಿ ಸಮೀಪ ಕಾರು ನಿಲ್ಲಿಸಿ, ಪತ್ನಿಯ ತಲೆಗೂದಲು ಹಿಡಿದು ಎಳೆದಾಡಿ, ಕುರಿ ಕತ್ತರಿಸುವಂತೆ ತನ್ನ ಬಳಿಯಿದ್ದ ಕುಡುಗೋಲಿನಿಂದ ಆಕೆಯ ಕತ್ತು ಸೀಳಿದ್ದಾನೆ.
ಇಷ್ಟಕ್ಕೇ ಆತನ ಹಗೆ ತೀರಲಿಲ್ಲ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ (Kalaburagi Brutal Murder) ಪತ್ನಿಯ ಮೇಲೆ ತನ್ನ ಇನೋವಾ ಕಾರನ್ನು ಹತ್ತಿಸಿ ವಿಕೃತಿ ಮೆರೆದಿದ್ದಾನೆ. ರಸ್ತೆಯಲ್ಲಿ ಹೋಗುವವರು ಇದನ್ನು ನೋಡಿ ಸ್ತಬ್ಧರಾಗಿದ್ದಾರೆಯೇ ಹೊರತು, ಆ ರಕ್ಕಸನನ್ನು ತಡೆಯುವ ಧೈರ್ಯ ಯಾರಿಗೂ ಬರಲಿಲ್ಲ. Read this also : ರೀಲ್ಸ್ ಹುಚ್ಚಿಗೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ! ಅಸಲಿ ಕಾರಣ ಕೇಳಿದ್ರೆ ದಂಗಾಗ್ತೀರಾ!
ಮಾನವೀಯತೆ ಎಲ್ಲಿಗೆ ಬಂತು? ಮೊಬೈಲ್ನಲ್ಲಿ ಶೂಟಿಂಗ್ ಮಾಡಿದ ಜನ!
ಈ ಘಟನೆಯಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ ಅಲ್ಲಿ ನೆರೆದಿದ್ದ ಜನರ ನಡೆ. ಮಹಿಳೆಯು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೂ, ನೆರೆದಿದ್ದವರು ತಮ್ಮ (Kalaburagi Brutal Murder) ಮೊಬೈಲ್ಗಳಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳಲು ಮುಗಿಬಿದ್ದಿದ್ದರು. ಯಾರೊಬ್ಬರೂ ಆಕೆಯ ರಕ್ಷಣೆಗೆ ಧಾವಿಸಲಿಲ್ಲ ಎಂಬುದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯ. ಹತ್ತಾರು ಜನರ ಕಣ್ಣೆದುರೇ ಒಂದು ಜೀವ ಬಲಿಯಾಗಿದೆ.
ಕಾರಿನಲ್ಲಿದ್ದ ಸಂಬಂಧಿಕರೂ ಮೂಕಪ್ರೇಕ್ಷಕರು!
ವರದಿಗಳ ಪ್ರಕಾರ, ಅಕ್ಷಯ್ ಜಾಧವ್ ಜೊತೆ ಕಾರಿನಲ್ಲಿ ಆತನ ತಂದೆ-ತಾಯಿ (Kalaburagi Brutal Murder) ಸೇರಿದಂತೆ ಐವರು ಸಂಬಂಧಿಕರಿದ್ದರು ಎನ್ನಲಾಗಿದೆ. ಆದರೆ ಅವರು ಕೂಡ ಈ ಕೊಲೆಯನ್ನು ತಡೆಯುವ ಪ್ರಯತ್ನ ಮಾಡದೆ, ಮೌನವಾಗಿ ಕುಳಿತುಕೊಳ್ಳುವ ಮೂಲಕ ಈ ಕೃತ್ಯಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಪೊಲೀಸ್ ಕಾರ್ಯಾಚರಣೆ ಮತ್ತು ತನಿಖೆ
ಘಟನೆ (Kalaburagi Brutal Murder) ನಡೆದ ತಕ್ಷಣ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪುರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಅಕ್ಷಯ್ ಜಾಧವನನ್ನು ವಶಕ್ಕೆ ಪಡೆದಿದ್ದಾರೆ. ಈ ಭೀಕರ ಕೊಲೆಗೆ ನಿಖರವಾದ ಕಾರಣವೇನು? ದಂಪತಿಗಳ ನಡುವೆ ವೈಮನಸ್ಯವಿತ್ತೇ? ಅಥವಾ ಬೇರೆನಾದರೂ ಕಾರಣವಿದೆಯೇ? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.
