ಪ್ರೀತಿ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅದೇ ಪ್ರೀತಿಯಲ್ಲಿ ‘ಸಂಶಯ’ ಎಂಬ ವಿಷಕಾರಿ ಬೀಜ ಮೊಳಕೆಯೊಡೆದರೆ ಏನಾಗುತ್ತದೆ ಎಂಬುದಕ್ಕೆ ರಾಮನಗರ ದಲ್ಲಿ ನಡೆದ ಈ ಭೀಕರ (Love Marriage Murder) ಘಟನೆಯೇ ಸಾಕ್ಷಿ. ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಹಸೆಮಣೆ ಏರಿದ್ದ ಯುವತಿಯೊಬ್ಬಳು, ಸ್ವತಃ ಪತಿಯ ಕೈಯಿಂದಲೇ ಕೊಲೆಯಾಗಿರುವ ಮನಕಲಕುವ ಘಟನೆ ಜರುಗಿದೆ.

Love Marriage Murder – ಕೆಲಸದ ಜಾಗದಲ್ಲಿ ಚಿಗುರಿದ್ದ ಪ್ರೀತಿ
ರಾಮನಗರದ ಯಾರಬ್ ನಗರದ ನಿವಾಸಿಗಳಾದ ಸಲ್ಮಾನ್ (22) ಮತ್ತು ಸುಫಿಯಾ ಬಾನು (21) ಇಬ್ಬರೂ ಸ್ಥಳೀಯ ಫಿಲೇಚರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಅವಧಿಯಲ್ಲಿ ಇಬ್ಬರ ನಡುವೆ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. “ನಿನ್ನನ್ನು ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದ ಸಲ್ಮಾನ್, ನಾಲ್ಕು ತಿಂಗಳ ಹಿಂದೆಯಷ್ಟೇ ಸುಫಿಯಾಳನ್ನು ಮದುವೆಯಾಗಿದ್ದ.
ಸಂತೋಷದ ಸಂಸಾರಕ್ಕೆ ನುಗ್ಗಿದ ‘ಸಂಶಯ’ದ ಭೂತ
ಮದುವೆಯಾದ ನಂತರ ಸಲ್ಮಾನ್ ತನ್ನ ಪತ್ನಿ ಸುಫಿಯಾ ಮನೆಯಲ್ಲಿಯೇ ನೆಲೆಸಿದ್ದ. ಸುಫಿಯಾ ತಾಯಿ ಮತ್ತು ತಮ್ಮನ ಜೊತೆ ಈ ದಂಪತಿ ವಾಸವಾಗಿದ್ದರು. ವಿಶೇಷವೆಂದರೆ ಇವರ ಮದುವೆಯ ವಿಚಾರ ಸುಫಿಯಾ ತಂದೆ ಮತ್ತು ಸಹೋದರಿಯರಿಗೆ ತಿಳಿದಿರಲೇ ಇಲ್ಲ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಲ್ಮಾನ್ ಪತ್ನಿಯ ಶೀಲದ ಮೇಲೆ ಸಂಶಯ ಪಡಲು ಆರಂಭಿಸಿದ್ದ. “ನೀನು ಬೇರೆಯವರ ಜೊತೆ ಸಂಬಂಧ ಹೊಂದಿದ್ದೀಯಾ” ಎಂದು ಪದೇ ಪದೇ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. Read this also : ವ್ಯಾಲೆಂಟೈನ್ಸ್ ಡೇ ದಿನವೇ ಪತ್ನಿಯ ಕೊಲೆ: ರೊಮ್ಯಾಂಟಿಕ್ ಡಿನ್ನರ್ ಮುಗಿಸಿ ಬಂದ ಬಳಿಕ ನಡೆದಿದ್ದೇನು?
ಫೆಬ್ರವರಿ 18ರ ಸಂಜೆ ನಡೆದಿದ್ದೇನು?
ಬುಧವಾರ (ಫೆ. 18) ಸಂಜೆ ಇಬ್ಬರೂ ಫಿಲೇಚರಿ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಸುಫಿಯಾ ತಾಯಿ ಸ್ವಲ್ಪ ಕೆಲಸದ ಮೇಲೆ ಅಂಗಡಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ (Love Marriage Murder) ಸಮಯ ಸಾಧಿಸಿದ ಸಲ್ಮಾನ್, ಸುಫಿಯಾ ಜೊತೆ ಮತ್ತೆ ಜಗಳವಾಡಿದ್ದಾನೆ. ಆವೇಶದಲ್ಲಿ ಚಾಕುವಿನಿಂದ ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಫಿಯಾಳನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಪ್ರೀತಿಸಿದವನೇ ಕಾಲನಾಗಿ ಬಂದಿದ್ದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲೀಸರಿಗೆ ಶರಣಾದ ಆರೋಪಿ
ಕೃತ್ಯ ಎಸಗಿದ ನಂತರ (Love Marriage Murder) ಆರೋಪಿ ಸಲ್ಮಾನ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ರಾಮನಗರದ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. “ನನ್ನ ಮಗಳ ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸುಫಿಯಾ ಕುಟುಂಬಸ್ಥರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
