Local News – ಆಧ್ಯಾತ್ಮಿಕತೆಯ ಸುಂದರ ತಾಣ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಯಲ್ಲಿ ಜೂನ್ 12 ರಿಂದ 16 ರವರೆಗೆ ನಡೆಯಲಿರುವ ಐದು ದಿನಗಳ ವೈಭವೋಪೇತ ಕಾರ್ಯಕ್ರಮಕ್ಕೆ ಅಂತಿಮ ಸಿದ್ಧತೆಗಳು ನಡೆದಿವೆ. ಆದಿಶಕ್ತ್ಯಾತ್ಮಕ ತ್ರಿಮತಾಚಾರ್ಯ ಗಾಯತ್ರಿ ದೇಗುಲದ 37ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಜೊತೆಗೆ, ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮುಚ್ಚಯದ ಮೊದಲ ಹಂತದ ಲೋಕಾರ್ಪಣೆಯು ಭಕ್ತಿ ಮತ್ತು ಸಮಾಜಸೇವೆಯ ಮಹಾ ಸಂಗಮಕ್ಕೆ ಸಾಕ್ಷಿಯಾಗಲಿದೆ.
Local News – ವೇದ ವಿಜ್ಞಾನ ಪಾಠಶಾಲೆ ಮತ್ತು ಗಾಯತ್ರಿ ಜ್ಞಾನಯಜ್ಞ ಮಂಟಪ ಲೋಕಾರ್ಪಣೆ
ಜೂನ್ 12 ರಂದು ಕಾರ್ಯಕ್ರಮದ ಮೊದಲ ದಿನವೇ “ಶ್ರೀಮತಿ ಯಶೋದಮ್ಮ ಶ್ರೀ ರಾಮಚಂದ್ರರಾವ್ ಸ್ಮಾರಕ ವೇದ ವಿಜ್ಞಾನ ಪಾಠಶಾಲೆ” ಮತ್ತು “ಗಾಯತ್ರಿ ಜ್ಞಾನಯಜ್ಞ ಮಂಟಪ” ಗಳು ಲೋಕಾರ್ಪಣೆಗೊಳ್ಳಲಿವೆ. ಇದು ದೇಶದಲ್ಲಿಯೇ ಒಂದು ವಿಶಿಷ್ಟ ಪ್ರಯತ್ನ ಎಂದು ಗುರುತಿಸಿಕೊಂಡಿದೆ. ಗುಡಿಬಂಡೆ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಎಸ್. ಗಿರೀಶ್ ರಾವ್ ಮತ್ತು ಪ್ರಧಾನ ಸಂಚಾಲಕ ಸ.ನ. ನಾಗೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದೆ.
Local News – ಪುರಾತನ ಕಲ್ಯಾಣಿ ಪುನಶ್ಚೇತನ ಕಾರ್ಯಕ್ಕೆ ಚಾಲನೆ
ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಘನ ಅಧ್ಯಕ್ಷತೆಯಲ್ಲಿ ನೆರವೇರಲಿರುವ ವೇದವಿಜ್ಞಾನ ಪಾಠಶಾಲೆ, ಗಾಯತ್ರಿ ಜ್ಞಾನಯಜ್ಞ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೆಟ್ಟದಿಂದ ಹರಿದು ಬರುವ ಮಳೆನೀರು ಬಳೆಸಿಕೊಂಡು ಗುಡಿಬಂಡೆ ಪಟ್ಟಣದ ಜನತೆಗೆ ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ್ಯದ ಹಿನ್ನಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಪುರಾತನ ಕಲ್ಯಾಣಿ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
Local News – ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರು
ಈ ಸಮಾರಂಭದಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥ ಡಾ.ಬಿಎಸ್.ಶ್ರೀನಾಥ್, ಅಖಿಲ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್,ರಘುನಾಥ್, ಆರ,ವಿ,ಡೆಂಟಲ್ ಕಾಲೇಜು ನಿವೃತ್ತ ಮುಖ್ಯಸ್ಥ ಡಾ,ಕೆ.ಎಸ್.ನಾಗೇಶ್, ಇ.ಐ.ಟೆಕ್ನಾಲಾಜಿ ಕಂಪನಿ ಮುಖ್ಯಸ್ಥ ಡಾ.ಎನ್.ರಂಗನಾಥ್, ಫಿಲಿಪ್ಸ್ ಇಂಡಿಯಾ ಸಿ.ಇ.ಓ ಅರುಣ್ ಕುಮಾರ್, ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ, ಜಿಪಂ ಸಿಇಓ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ತಾಂತ್ರಿ ಸಲಹಾ ಸಮಿತಿ ಮುಖ್ಯಸ್ಥರಾದ ಬಿ.ವಿ.ನಾಗೇಶ್, ಎಸ್.ಎನ್.ಶ್ರೀನಾಥ್, ನಿವೃತ್ತ ಎ.ಸಿ.ಪಿ ಬಿ.ಎನ್.ಶತಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಗುಡಿಬಂಡೆ ತಾಲ್ಲೂಕಿನ ಶೈಕಣಿಕ ಅಭಿವೃಧ್ದಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದ ನಿವೃತ್ತ ಹೆಡ್ಮಾಸ್ಟರ್ ದಿವಂಗತ ಬಿ.ವಿಶ್ವೇಶ್ವರಯ್ಯ ನವರ ಜನ್ಮಶತಾಬ್ಧಿ ಅಂಗವಾಗಿ ಸಂಜೆ ನಡೆಯುವ ಗುರುನಮನ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ.ಎಂ.ಆರ್.ಶ್ರೀನಿವಾಸಮೂರ್ತಿ, ಜಿ.ಕೆ.ವಿ.ಕೆ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಪಿ.ಬ್ರಹ್ಮಪ್ರಕಾಶ್, ಕೇಂದ್ರ ಲೆಕ್ಕಪರಿಶೋಧಕ ಇಲಾಖೆ ನಿವೃತ್ತ ಅಧಿಕಾರಿ ಕುಮಾರಸ್ವಾಮಿ, ಬಿ.ಇ.ಓ ಕೃಷ್ಣಕುಮಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
Local News – ಐದು ದಿನಗಳ ಭಕ್ತಿ ಸಂಭ್ರಮ
ವೇದ ಬ್ರಹ್ಮಶ್ರೀ ಮಂಕಾಲ ಶ್ರೀಹರಿಶರ್ಮಾ ಅಧ್ವರ್ಯದಲ್ಲಿ 5 ದಿನಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ 5 ದಿನಗಳ ಕಾಲಾವಧಿಯಲ್ಲಿ ಉಚ್ಛಿಷ್ಠ ಮಹಾಗಣಪತಿ ಹೋಮ, ಮಹಾ ಗಾಯತ್ರಿ ಹೋಮ, ಸುದರ್ಶನ ಹೋಮ, ಧನ್ವಂತರಿ ಮಹಾವಿಷ್ಣು ಹೋಮ, ರುದ್ರಹೋಮ, ಮೇಧಾ ದಕ್ಷಿಣಾಮೂರ್ತಿ ಹೋಮ, ಪವಮಾನ ಹೋಮ, ರಾಮತಾರಕ ಹೋಮ, ಚಂಡಿಹೋಮ, ಮಹಾಪೂರ್ಣಾಹುತಿ, ಮಹಾಕಲಶಾಭಿಷೇಕ, ಮೂಲದೇವರಿಗೆ ವಿವಿಧ ಜಾತೀಯ ಪುಷ್ಪಾಲಂಕಾರ, ಕೊನೆಯ ದಿನ ಸಾಮೂಹಿಕ ಉಪನಯನ ಸೇರಿದಂತೆ ಹತ್ತು ಹಲವು ಪೂಜಾ ಕೈಂಕರ್ಯಗಳು ನೆರವೇರಲಿವೆ. ವಿಶೇಷವಾಗಿ ಪ್ರತಿದಿನ ಸಂಜೆ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ವಿವಿಧ ಕಾಲಾವಿದರಿಂದ ಗಾಯತ್ರಿಪ್ರಸಾದ ಭವನ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ಮಾಧವತೀರ್ಥ ಶ್ರೀಮಠದ ಪೀಠಾಧಿಪತಿಗಳಾದ 108ಶ್ರೀ ವಿದ್ಯಾವಲ್ಲಭಮಾಧವ ತೀರ್ಥ ಶ್ರೀಗಳು ಆಗಮಿಸಿ ಅನುಗ್ರಹ ನುಡಿಗಳನ್ನಾಡಲಿದ್ದಾರೆ ಎಂದು ಡಾ.ಗಿರೀಶ್ರಾವ್ ನುಡಿದರು.
ಪ್ರತಿದಿನ ಸಂಜೆ ಗಾಯತ್ರಿಪ್ರಸಾದ ಭವನದ ಮುಖ್ಯ ವೇದಿಕೆಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ಮಾಧವತೀರ್ಥ ಶ್ರೀಮಠದ ಪೀಠಾಧಿಪತಿಗಳಾದ 108 ಶ್ರೀ ವಿದ್ಯಾವಲ್ಲಭಮಾಧವ ತೀರ್ಥ ಶ್ರೀಗಳು ಆಗಮಿಸಿ ಅನುಗ್ರಹ ನುಡಿಗಳನ್ನಾಡಲಿದ್ದಾರೆ. ಸ್ಥಳೀಯ ಶಾಸಕರು ಮತ್ತು ಅಗಣಿತ ದಾನಿಗಳ ನೆರವಿನಿಂದ ದಾಖಲೆ ಅವಧಿಯಲ್ಲಿ ‘ಶ್ರೀಮತಿ ಯಶೋದಮ್ಮ ಶ್ರೀ ರಾಮಚಂದ್ರರಾವ್ ಸ್ಮಾರಕ ವೇದ ವಿಜ್ಞಾನ ಪಾಠಶಾಲೆ ಹಾಗೂ ಗಾಯತ್ರಿ ಜ್ಞಾನಯಜ್ಞ ಮಂಟಪ’ಗಳ ಲೋಕಾರ್ಪಣೆ ಕಾರ್ಯ ನಡೆಯುತ್ತಿದೆ. ಉಳಿದ ಸಾಮಾಜಿಕ ಯೋಜನೆಗಳ ಕಾಮಗಾರಿಯನ್ನೂ ಮುಂದುವರಿಸಲಾಗುವುದು ಎಂದು ಸ.ನ. ನಾಗೇಂದ್ರ ತಿಳಿಸಿದರು.
Read this also : ಸುಮಾರು 200 ಕೋಟಿ ವೆಚ್ಚದಲ್ಲಿ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಯತ್ನ: ಸುಬ್ಬಾರೆಡ್ಡಿ
ಈ ಸಮಾರಂಭಕ್ಕೆ ಪಪಂ ಅಧ್ಯಕ್ಷ ವಿಕಾಸ್, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಓ ನಾಗಮಣಿ, ಗಾಯತ್ರಿ ದೇಗುಲ ಸಮಿತಿ ಪದಾಧಿಕಾರಿಗಳಾದ ಮ.ನಾ. ಮಂಜುನಾಥ್, ವಾಹಿನಿಸುರೇಶ್, ಗುರುಪ್ರಸಾದ್, ವಿಶ್ವಚಲಪತಿ, ಆರ್.ಕೆ. ಪ್ರಸಾದ್, ಶ್ರೀನಾಥ್, ಶ್ರೀಶಸಿಂಹಭಟ್, ವೇಣು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.