Local News – ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: ಸ್ಥಳೀಯರಿಂದ ವಿರೋಧ, ಕಾರಣವೇನು?

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೃದಯಭಾಗದಲ್ಲಿರುವ ರಾಮಪಟ್ಟಣ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಸ್ತೆ ಮಾರ್ಕಿಂಗ್ ಮಾಡಲು ಬಂದ ಅಧಿಕಾರಿಗಳಿಗೆ ಸ್ಥಳೀಯರು ತಡೆ ಒಡ್ಡಿದ್ದು, ಸೂಕ್ತ ಪರಿಹಾರ ಮತ್ತು ಮಾಹಿತಿ ಇಲ್ಲದೆ ಕಾಮಗಾರಿ ನಡೆಸದಂತೆ ಆಗ್ರಹಿಸಿದ್ದಾರೆ.

Local News - Gudibande Ramapattana Road widening protest by local residents

Local News – ರಾಮಪಟ್ಟಣ ರಸ್ತೆ: ಸಂಚಾರ ದುಸ್ತರ, ಅಗಲೀಕರಣದ ಅನಿವಾರ್ಯತೆ

ಗುಡಿಬಂಡೆ ರಾಮಪಟ್ಟಣ ರಸ್ತೆ ಪಟ್ಟಣದ ಪ್ರಮುಖ ಸಂಚಾರ ಮಾರ್ಗ ಮಾತ್ರವಲ್ಲದೆ, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಆದರೆ, ರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ, ವಿಶೇಷವಾಗಿ ದೊಡ್ಡ ವಾಹನಗಳ ಓಡಾಟಕ್ಕೆ ಭಾರೀ ತೊಂದರೆಯಾಗುತ್ತಿತ್ತು. ದಟ್ಟಣೆ ಮತ್ತು ಅಪಘಾತಗಳ ಭೀತಿ ಸಾಮಾನ್ಯ ಸಂಗತಿಯಾಗಿತ್ತು. ಈ ಹಿನ್ನೆಲೆಯಲ್ಲಿ, ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರಿಂದ ಬಹುದಿನಗಳಿಂದ ಬೇಡಿಕೆ ಇತ್ತು.

Local News -ಮಾರ್ಕಿಂಗ್‌ ಗೆ ಮುಂದಾದ ಅಧಿಕಾರಿಗಳಿಗೆ ವಿರೋಧ!

ರಸ್ತೆ ಅಗಲೀಕರಣಕ್ಕೆ ಸಿದ್ಧತೆ ನಡೆಸಿರುವ ಪುರಸಭೆ (ಪಪಂ) ಅಧಿಕಾರಿಗಳು, ಇಂದು (ಮೇ 22) ರಸ್ತೆಯನ್ನು ಸರ್ವೆ ಮಾಡಿ, ಮಧ್ಯ ರಸ್ತೆಯಿಂದ 20 ಅಡಿಗಳಷ್ಟು ಅಳತೆ ಮಾಡಿ ಮಾರ್ಕಿಂಗ್ ಹಾಕಲು ಮುಂದಾದರು. ಈ ವೇಳೆ ಸ್ಥಳಕ್ಕೆ ಬಂದ ಕೆಲವು ನಿವಾಸಿಗಳು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದರು.

Local News - Gudibande Ramapattana Road widening protest by local residents

Read this also : ರಸ್ತೆ ಮತ್ತು ಚರಂಡಿಗಾಗಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ….!

Local News – ಸ್ಥಳೀಯರ ಆತಂಕ: ನೋಟಿಸ್ ಇಲ್ಲ, ಪರಿಹಾರವಿಲ್ಲ!

ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, “ನಮಗೆ ಯಾವುದೇ ನೋಟಿಸ್ ಅಥವಾ ತಿಳುವಳಿಕೆ ನೀಡದೆ ಏಕಾಏಕಿ ರಸ್ತೆ ಮಾರ್ಕಿಂಗ್ ಮಾಡುವುದು ಸರಿಯಲ್ಲ. ಹಿಂದೆ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ನಿವೇಶನ ಅಥವಾ ಪರಿಹಾರ ಸಿಕ್ಕಿಲ್ಲ. ಈಗ ರಾಮಪಟ್ಟಣ ರಸ್ತೆ ಅಗಲೀಕರಣದಿಂದ ನಮ್ಮ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಸರ್ಕಾರ ನಮಗೆ ಹೇಗೆ ಪರಿಹಾರ ಅಥವಾ ನಿವೇಶನ ನೀಡುತ್ತದೆ ಎಂಬ ಸ್ಪಷ್ಟ ಮಾಹಿತಿ ನೀಡಬೇಕು,” ಎಂದು ಒತ್ತಾಯಿಸಿದರು. ಕೆಲವರು, 20 ಅಡಿ ಅಗಲೀಕರಣಕ್ಕೆ ನಮ್ಮ ತಕರಾರಿಲ್ಲ, ಆದರೆ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿ ನೀಡಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂದು ಅಭಿಪ್ರಾಯಪಟ್ಟರು.

Leave a Comment

Your email address will not be published. Required fields are marked *

Scroll to Top