Sunday, June 1, 2025
HomeStateMandya - ಮಂಡ್ಯದಲ್ಲಿ ಭೀಕರ ಘಟನೆ ಮಗಳ ಸಾವಿಗೆ ಪ್ರತೀಕಾರ: ಹಂತಕನ ತಂದೆಯನ್ನೇ ಮುಗಿಸಿದ ತಂದೆ...!

Mandya – ಮಂಡ್ಯದಲ್ಲಿ ಭೀಕರ ಘಟನೆ ಮಗಳ ಸಾವಿಗೆ ಪ್ರತೀಕಾರ: ಹಂತಕನ ತಂದೆಯನ್ನೇ ಮುಗಿಸಿದ ತಂದೆ…!

Mandya – ತನ್ನ ಮಗಳನ್ನು ಬರ್ಬರವಾಗಿ ಕೊಂದಿದ್ದ ಆರೋಪಿಯ ತಂದೆಯನ್ನೇ ಆಕೆಯ ತಂದೆ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ (Manikyanahalli) ನಡೆದಿದೆ. ಈ ಕೊಲೆ ಪ್ರಕರಣವು ಇಡೀ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Mandya – ಪ್ರತೀಕಾರದ ಕಿಚ್ಚು: ಹಂತಕನ ತಂದೆಯೇ ಬಲಿ

ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹೇಗೌಡ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಎಂಬಾತ ಕೊಲೆ ಮಾಡಿದ ಆರೋಪಿ. 2024ರ ಜನವರಿ 22 ರಂದು ಮಾಣಿಕ್ಯನಹಳ್ಳಿಯ ದೀಪಿಕಾ (Deepika) ಎಂಬ ಯುವತಿಯನ್ನು ನಿತೀಶ್ ಎಂಬಾತನು ಕೊಲೆ ಮಾಡಿದ್ದನು. ಈ ಕೃತ್ಯಕ್ಕೆ ಪ್ರತೀಕಾರವಾಗಿ ದೀಪಿಕಾಳ ತಂದೆ ವೆಂಕಟೇಶ್, ಆಕೆಯ ಹಂತಕನ ತಂದೆಯಾದ ನರಸಿಂಹೇಗೌಡರನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡುವಾಗ “ನನ್ನ ಮಗಳನ್ನು ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದೀಯಾ?” ಎಂದು ವೆಂಕಟೇಶ್ ಆಕ್ರೋಶದಿಂದ ಕೂಗಿರುವುದಾಗಿ ತಿಳಿದುಬಂದಿದೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

Mandya Manikyanahalli Revenge Killing of Narasimhaegowda by Venkatesh

Mandya – ಘಟನೆಯ ಹಿನ್ನೆಲೆ: ದೀಪಿಕಾ ಕೊಲೆ ಪ್ರಕರಣ

ಮೃತ ದೀಪಿಕಾ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯವರಾಗಿದ್ದರು. ಶಿಕ್ಷಕಿಯಾಗಿದ್ದ ದೀಪಿಕಾ ಅವರು 2024ರ ಜನವರಿ 19 ರಂದು ನಾಪತ್ತೆಯಾಗಿದ್ದರು. ನಂತರ ಜನವರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ತನಿಖೆ ನಡೆಸಿದ ಮಂಡ್ಯ ಪೊಲೀಸರು, ಮಾಣಿಕ್ಯನಹಳ್ಳಿಯ ನಿತೀಶ್ ಎಂಬ ಯುವಕನೇ ದೀಪಿಕಾಳನ್ನು ಕೊಲೆ ಮಾಡಿರುವುದಾಗಿ ದೃಢಪಡಿಸಿದ್ದರು.

Mandya –  ಪ್ರೀತಿ, ತಿರಸ್ಕಾರ ಮತ್ತು ಕೊಲೆ

ಪೊಲೀಸ್ ತನಿಖೆಯ ಪ್ರಕಾರ, ಶಿಕ್ಷಕಿ ದೀಪಿಕಾ ಮತ್ತು ನಿತೀಶ್ ನಡುವೆ ಕೊಲೆಗಿಂತ ಎರಡು ವರ್ಷಗಳ ಹಿಂದಿನಿಂದಲೂ ಸ್ನೇಹವಿತ್ತು. ಇಬ್ಬರ ಒಡನಾಟವನ್ನು ಗಮನಿಸಿದ ದೀಪಿಕಾ ಅವರ ಗಂಡ ಮತ್ತು ಕುಟುಂಬಸ್ಥರು ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ದೀಪಿಕಾ, ನಿತೀಶ್ ತಮ್ಮ ತಮ್ಮನಿದ್ದಂತೆ ಎಂದು ಹೇಳಿಕೊಂಡಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ನಂತರ ಇಬ್ಬರೂ ದೂರವಾಗಿದ್ದರು. ಇದರಿಂದ ಮನನೊಂದಿದ್ದ ನಿತೀಶ್, 2024ರ ಜನವರಿ 19 ರಂದು ತನ್ನ ಹುಟ್ಟುಹಬ್ಬದ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ಅಲ್ಲಿ ಉಡುಗೊರೆ ನೀಡಲು ದೀಪಿಕಾ ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ನಿತೀಶ್ ತನ್ನನ್ನು ಅವಾಯ್ಡ್ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡಿದ್ದನು. ಇದೇ ಕಾರಣಕ್ಕೆ ಆತ ದೀಪಿಕಾಳನ್ನು ಹತ್ಯೆ ಮಾಡಿದ್ದನು.

Mandya –  ಜಾಮೀನಿನ ಮೇಲೆ ಬಿಡುಗಡೆ, ಪ್ರತೀಕಾರದ ಸಂಚು

ದೀಪಿಕಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಿತೀಶ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ತನ್ನ ಮಗಳನ್ನು ಕೊಂದಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಸಂಚು ರೂಪಿಸಿದ್ದನು. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್‌ನ ತಂಗಿಯ ಮದುವೆ ಇತ್ತು. ಇಂದು ನಿತೀಶ್‌ನ ತಂದೆ ನರಸಿಂಹೇಗೌಡ ಮನೆಯಿಂದ ಹೊರಗೆ ಹೋದಾಗ ಅವರನ್ನು ಹಿಂಬಾಲಿಸಿದ ವೆಂಕಟೇಶ್, ಊರ ಹೊರಗಿನ ಟೀ ಅಂಗಡಿಯ ಬಳಿ ಕುಳಿತಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. Read this also : 2 ವರ್ಷ ದೊಡ್ಡ ಹುಡುಗಿಯನ್ನ ಪ್ರೀತಿ ಮಾಡಿದ್ದೇ ತಪ್ಪಾಯ್ತಾ? ವಾರ್ನಿಂಗ್ ಕೊಟ್ರೂ ಯುವತಿಯ ಹಿಂದೆ ಬಿದ್ದ ಯುವಕನ ಹತ್ಯೆ…!

Mandya Manikyanahalli Revenge Killing of Narasimhaegowda by Venkatesh

ತನಿಖೆ ಮುಂದುವರಿಕೆ

ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೆಂಕಟೇಶ್‌ನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ, ಒಂದು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಮಗಳ ಮದುವೆಯ ಸಂಭ್ರಮದಲ್ಲಿದ್ದ ನರಸಿಂಹೇಗೌಡ ಅವರು, ತಮ್ಮ ಮಗಳ ಹತ್ಯೆಯ ಪ್ರತೀಕಾರಕ್ಕಾಗಿ ವೆಂಕಟೇಶ್‌ನಿಂದ ಬರ್ಬರವಾಗಿ ಕೊಲ್ಲಲ್ಪಟ್ಟಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯಲ್ಲಿ ತೀವ್ರ ದುಃಖ ಮತ್ತು ಆಘಾತವನ್ನುಂಟು ಮಾಡಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular