HomeNationalVisakhapatnam Murder Case : ಪತ್ನಿಯನ್ನು ತವರಿಗೆ ಕಳುಹಿಸಿ ಪ್ರೇಯಸಿಯನ್ನು ಮನೆಗೆ ಕರೆದವನು ಮಾಡಿದ್ದೇನು?

Visakhapatnam Murder Case : ಪತ್ನಿಯನ್ನು ತವರಿಗೆ ಕಳುಹಿಸಿ ಪ್ರೇಯಸಿಯನ್ನು ಮನೆಗೆ ಕರೆದವನು ಮಾಡಿದ್ದೇನು?

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕ ಎಲ್‌.ವಿ (Visakhapatnam Murder Case) ನಗರದಲ್ಲಿ ಭಾನುವಾರ ಮಧ್ಯರಾತ್ರಿ ಅತಿಮಾನುಷ ಘಟನೆಯೊಂದು ನಡೆದಿದೆ. ಪ್ರೀತಿ ಮತ್ತು ಹಣದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿ, ಮೃತದೇಹವನ್ನು ಫ್ರಿಜ್‌ನಲ್ಲಿ ಅಡಗಿಸಿಟ್ಟಿರುವ ಘೋರ ಸತ್ಯ ಈಗ ಹೊರಬಂದಿದೆ. ಇಂಡಿಯನ್ ನೇವಿಯಲ್ಲಿ ಏರ್‌ಕ್ರಾಫ್ಟ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರವೀಂದ್ರ ಎಂಬಾತನೇ ಈ ಭೀಕರ ಕೃತ್ಯದ ರೂವಾರಿ ಎಂದು ತಿಳಿದುಬಂದಿದೆ.

Visakhapatnam Murder Case where a man hid a woman’s body in a refrigerator after killing her

Visakhapatnam Murder Case – ಅಕ್ರಮ ಸಂಬಂಧ ಮತ್ತು ಆ ಒಂದು ರಾತ್ರಿ

ರವೀಂದ್ರನಿಗೆ ಕೈಲಾಸಪುರದ ವಿವಾಹಿತ ಮಹಿಳೆ ಮೌನಿಕಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು. ಭಾನುವಾರ ರವೀಂದ್ರನ ಪತ್ನಿ ತನ್ನ ತವರಿಗೆ ಹೋಗಿದ್ದರಿಂದ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆತ ತನ್ನ ಪ್ರೇಯಸಿ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದನು. ರಾತ್ರಿಯವರೆಗೂ ಇಬ್ಬರ ನಡುವೆ ಎಲ್ಲವೂ ಸುಸೂತ್ರವಾಗಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

Read this also : ಕಲಬುರಗಿಯಲ್ಲಿ ಪತ್ನಿಯ ಕತ್ತು ಸೀಳಿ, ಹೆಣದ ಮೇಲೆ ಕಾರು ಹರಿಸಿದ ರಾಕ್ಷಸ ಪತಿ!

ಹಣದ ವಿಚಾರಕ್ಕೆ ಶುರುವಾದ ಮಾರಣಾಂತಿಕ ಜಗಳ

ಅರ್ಧರಾತ್ರಿ ಕಳೆದಂತೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಶುರುವಾಗಿದೆ. ಮೌನಿಕಾ ರವೀಂದ್ರನ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದ್ದು, ಇದೇ ವಿಚಾರವಾಗಿ ಗಲಾಟೆ ವಿಕೋಪಕ್ಕೆ ಹೋಗಿದೆ. ಕೋಪೋದ್ರಿಕ್ತನಾದ ರವೀಂದ್ರ ಮನೆಯಲ್ಲಿದ್ದ ಚಾಕುವಿನಿಂದ ಮೌನಿಕಾಳನ್ನು ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ಆಕೆ ಪ್ರಾಣಬಿಟ್ಟ ನಂತರ (Visakhapatnam Murder Case) ಸಾಕ್ಷ್ಯ ನಾಶಪಡಿಸಲು ಮುಂದಾದ ರವೀಂದ್ರ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ.

ದೇಹದ ಭಾಗಗಳನ್ನು ಫ್ರಿಜ್‌ನಲ್ಲಿ ಅಡಗಿಸಿದ ಪಾಪಿ

ಮೌನಿಕಾಳ ಮೃತದೇಹವನ್ನು ರವೀಂದ್ರ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ದೇಹದ ಅರ್ಧ ಭಾಗವನ್ನು ಯಾರಿಗೂ ಸಂಶಯ ಬರದಂತೆ ಫ್ರಿಜ್‌ನಲ್ಲಿ ತುರುಕಿದ್ದಾನೆ. ಉಳಿದ ಭಾಗಗಳನ್ನು ಒಂದು ಮೂಟೆಯಲ್ಲಿ ಕಟ್ಟಿ ಮನೆಯ ಮೂಲೆಯೊಂದರಲ್ಲಿ ಬಚ್ಚಿಟ್ಟಿದ್ದನು. ಕಾಲು ಮತ್ತು ತಲೆಯ ಭಾಗವನ್ನು ಪೆಂದುರ್ತಿ ದಾರಪಾಲಂ ಎಂಬ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ (Visakhapatnam Murder Case) ಸುಟ್ಟು ಹಾಕಿದ್ದಾನೆ ಎಂದು ತಿಳಿದುಬಂದಿದೆ. Read this also : ಕ್ಷಣಿಕ ಸುಖಕ್ಕೆ ಅನಾಥರಾದ ಮಕ್ಕಳು: ಪತಿಯನ್ನು ಮುಗಿಸಿ ಜೈಲು ಪಾಲಾದ ರಾಕ್ಷಸಿ ತಾಯಿ!

Visakhapatnam Murder Case where a man hid a woman’s body in a refrigerator after killing her

ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ

ಇಷ್ಟೆಲ್ಲಾ ಘೋರ ಕೃತ್ಯ (Visakhapatnam Murder Case) ಎಸಗಿದ ನಂತರ ರವೀಂದ್ರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ವಿಷಯ ಕೇಳಿ ದಬಾಯಿಸಿದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೌನಿಕಾ ತನ್ನನ್ನು ಹಣಕ್ಕಾಗಿ ತೀವ್ರವಾಗಿ ಪೀಡಿಸುತ್ತಿದ್ದಳು ಮತ್ತು ಆ ಕಿರುಕುಳ ಸಹಿಸಲಾರದೆ ಆಕೆಯನ್ನು ಕೊಲೆ ಮಾಡಿದ್ದಾಗಿ ರವೀಂದ್ರ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

by Baluhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular