ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮದುವೆಯ ಸಂಭ್ರಮದ ನಡುವೆಯೇ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಮಂಗಳಮುಖಿಯರ ಗುಂಪೊಂದು ಹಣಕ್ಕಾಗಿ ಮದುವೆ ಮಂಟಪದಲ್ಲೇ ರಂಪಾಟ ನಡೆಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ದೊಡ್ಡದಾಗಿ ಮದುವೆ ಮಾಡ್ಕೋತೀರಿ, (Transgender Money Demand) ಹತ್ತು ಸಾವಿರ ಕೊಡೋ ಯೋಗ್ಯತೆ ಇಲ್ವಾ?” ಎಂದು ಮನೆಯವರನ್ನು ಅವಾಚ್ಯವಾಗಿ ನಿಂದಿಸಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

Transgender Money Demand – ಸಂಭ್ರಮದ ನಡುವೆ ಸುನಾಮಿಯಂತೆ ನುಗ್ಗಿದ ಕಿರಿಕಿರಿ
ಚಿಕ್ಕಮಗಳೂರಿನ ಪ್ರಸಿದ್ಧ ರಂಗಣ್ಣನ ಛತ್ರದಲ್ಲಿ ಮದುವೆ ಸಮಾರಂಭ ಸಡಗರದಿಂದ ನಡೆಯುತ್ತಿತ್ತು. ಹಸೆಮಣೆ ಏರಿದ್ದ ವಧು-ವರರಿಗೆ ನೆಂಟರಿಷ್ಟರು ಹರಸುತ್ತಿದ್ದ ಆ ಕ್ಷಣದಲ್ಲಿ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಮದುವೆ ಮನೆಗೆ ಮಂಗಳಮುಖಿಯರು ಬಂದರೆ ಶುಭ ಕೋರಿ ಹೋಗುವುದು ವಾಡಿಕೆ. ಅದರಂತೆ ಮನೆಯವರು ಗೌರವದಿಂದ 500 ರೂಪಾಯಿ ನೀಡಲು ಮುಂದಾಗಿದ್ದಾರೆ. ಆದರೆ, ಆ ಮೊತ್ತವನ್ನು ನೋಡಿ ಕೆಂಡಾಮಂಡಲವಾದ ಮಂಗಳಮುಖಿಯರು ಅಸಲಿ ಆಟ ಶುರು ಮಾಡಿದ್ದಾರೆ.
₹500 ಬೇಡ, ₹10,000 ಬೇಕೇ ಬೇಕು!
ಬಂದಿದ್ದ ಮಂಗಳಮುಖಿಯರು ಕೇವಲ 500 ರೂಪಾಯಿ ಪಡೆಯಲು ನಿರಾಕರಿಸಿ, ಬರೋಬ್ಬರಿ 10,000 ರೂಪಾಯಿ ನೀಡಲೇಬೇಕು ಎಂದು ಪಟ್ಟು ಹಿಡಿದರು. ಮದುವೆ ಮನೆಯವರು ಅಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದಿದ್ದೇ ತಡ, ಮಂಟಪದ ಮೇಲೆಯೇ ಅಸಭ್ಯ ವರ್ತನೆ ತೋರಿದ್ದಾರೆ. ಜೋರಾಗಿ ಕಿರುಚಾಡುತ್ತಾ, ವಧು-ವರರ (Transgender Money Demand) ಸಮ್ಮುಖದಲ್ಲೇ ಮನೆಯವರನ್ನು ಏಕವಚನದಲ್ಲಿ ನಿಂದಿಸಿ ಅವಮಾನ ಮಾಡಿದ್ದಾರೆ. Read this also : ಪ್ರೀತಿಗಾಗಿ ಪ್ರಾಣ ಪಣಕ್ಕಿಟ್ಟ ‘ರೋಮಿಯೋ’: ಹೈ-ವೋಲ್ಟೇಜ್ ವೈರ್ ಹಿಡಿದು ಈತ ಮಾಡಿದ ಹಂಗಾಮಾ ಅಷ್ಟಿಷ್ಟಲ್ಲ– ವೈರಲ್ ಆದ ವಿಡಿಯೋ..!
ಬೆದರಿಕೆ ಹಾಕಿದ ಮಂಗಳಮುಖಿಯರು
ಮಂಗಳಮುಖಿಯರ ಈ ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿದ ಅತಿಥಿಗಳಿಗೂ ಅವರು ಬಿಡಲಿಲ್ಲ. “ದಮ್ಮಿದ್ದರೆ ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇವೆ” ಎಂದು ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದಾರೆ. ಮದುವೆ ಮಂಟಪದಲ್ಲಿ ಗದ್ದಲ ಸೃಷ್ಟಿಸಿದ್ದರಿಂದ ಸಂಭ್ರಮದಿಂದ ನಡೆಯಬೇಕಿದ್ದ ಕಾರ್ಯಕ್ರಮ ಕೆಲಕಾಲ ಸ್ಥಗಿತಗೊಂಡಿತು.(Transgender Money Demand) ಹೆಣ್ಣುಮಕ್ಕಳು ಹಾಗೂ ಹಿರಿಯರು ಈ ಅಸಭ್ಯ ವರ್ತನೆಯಿಂದ ಆತಂಕಕ್ಕೊಳಗಾದ ಪ್ರಸಂಗ ನಡೆಯಿತು.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು (Transgender Money Demand) ಬಂದು ಹಣಕ್ಕಾಗಿ ಪೀಡಿಸುವುದು, ದಬ್ಬಾಳಿಕೆ ನಡೆಸುವುದು ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಚಿಕ್ಕಮಗಳೂರಿನ ಈ ಘಟನೆಯ ವಿಡಿಯೋಗಳು ಈಗ ವೈರಲ್ ಆಗಿದ್ದು, “ಹರಸಲು ಬರಬೇಕಾದವರು ಹೀಗೆ ಹಣಕ್ಕಾಗಿ ಪೀಡಿಸುವುದು ಎಷ್ಟರ ಮಟ್ಟಿಗೆ ಸರಿ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ರೀತಿಯ ಕಿರುಕುಳ ನೀಡುವವರ ವಿರುದ್ಧ ಕಠಿಣ ಪೊಲೀಸ್ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
