Siddaramaiah – ನೀರಿನ ದರ ಏರಿಕೆ ಮಾಡ್ತೀವಿ, ಬಸ್ ದರ ಏರಿಕೆ ಮಾಡ್ತೀವಿ ಅಂತಾ ಹೇಳಿದ್ವಾ ಎಂದ ಸಿಎಂ ಸಿದ್ದು…!

Siddaramaiah – ಇತ್ತೀಚಿಗಷ್ಟೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‍ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ (water price hike) ಮಾಡುವ ಬಗ್ಗೆ ಮಾತನಾಡಿದ್ದರು, ಇದರ ಜೊತೆಗೆ ಬಸ್ ಟಿಕೆಟ್ ದರ ಏರಿಕೆಯ ಬಗ್ಗೆ ಸಹ ಸರ್ಕಾರ ಮುಂದಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೀಗ ಈ ಕುರಿತು ಸಿಎಂ (Siddaramaiah) ಸಿದ್ದರಾಮ್ಯಯ ಮಾತನಾಡಿದ್ದು, ಜಲಮಂಡಳಿ ನಷ್ಟದಲ್ಲಿದೆ. ಈ ಕಾರಣದಿಂದ ನೀರಿನ ದರ ಏರಿಕೆ ಮಾಡುತ್ತಿದ್ದೆವೆ. ಆದರೆ ಬಸ್ ದರ ಏರಿಕೆ ಮಾಡ್ತೀವಿ ಅಂತಾ ನಾವು ಎಲ್ಲೂ ಹೇಳಿಲ್ಲ ಎಂದು ಸಿಎಂ (Siddaramaiah) ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿದ (Siddaramaiah) ಸಿದ್ದರಾಮಯ್ಯ ಜಲಮಂಡಳಿ ನಷ್ಟದಲ್ಲಿರುವ ಕಾರಣದಿಂದ ನೀರಿನ ದರ ಹೆಚ್ಚು ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ಇನ್ನೂ ಏರಿಕೆ ಮಾಡಿಲ್ಲ. ಸುಮಾರು ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಆ‌ದ್ದರಿಂದ ನೀರಿನ ದರ ಏರಿಕೆ ಮಾಡುತ್ತಿದ್ದೇವೆ. ಬಸ್ ದರ ಏರಿಕೆಯ ಬಗ್ಗೆ ನಾವು ಎಲ್ಲಿ ಹೇಳಿದ್ದೇವೆ. (Siddaramaiah) ನಮಗೆ ಅದು ಗೊತ್ತೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದೇ ಸಮಯದಲ್ಲಿ ಕೆಪಿಎಸ್ ಸಿ ಪರೀಕ್ಷೆಯ ಬಗ್ಗೆ ಸಹ ಮಾತನಾಡಿದ್ದಾರೆ. (Siddaramaiah) ಕೆಲವರು ಪರೀಕ್ಷೆಯನ್ನು ಮುಂದಕ್ಕೆ ಹಾಕಬೇಕು ಎಂದು ಹೇಳುತ್ತಿದ್ದಾರೆ. ಆದರೆ ನಾವು ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದಿದ್ದಾರೆ.

ಕೆಪಿಎಸ್ ಸಿ ಯಲ್ಲಿ ಯಾವುದೇ (Siddaramaiah)  ಗೊಂದಲವಿಲ್ಲ. ಆ.27 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಕೆಲವರು ಪರೀಕ್ಷೆಯನ್ನು ಮುಂದೂಡಬೇಕೆಂದು ಹೇಳುತ್ತಿದ್ದಾರೆ. ಆದರೆ (Siddaramaiah) ನಾವು ಪರೀಕ್ಷೆಯನ್ನು ಮುಂದೂಡುವುದಿಲ್ಲ. ಒಂದು ಪತ್ರಿಕೆಯನ್ನು ಮಾತ್ರ ಮುಂದೂಡಿಕೆ ಮಾಡುತ್ತೇವೆ.  ಈ ಹಿಂದೆ ಆ.25ಕ್ಕೆ ಕೆಎಎಸ್​ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. (Siddaramaiah) ಆದರೆ ಅಂದು ಐಪಿಬಿಎಸ್​ ಪರೀಕ್ಷೆ ಇರುವ ಕಾರಣದಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿತ್ತು. ಇದೀಗ ಆ.27 ರಂದು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Scroll to Top