ಪವಿತ್ರ ರಂಜಾನ್ ಹಬ್ಬವೆಂದರೆ ಕೇವಲ ಹಬ್ಬದ ಆಚರಣೆಯಷ್ಟೇ ಅಲ್ಲ, ಅದು ಶಿಸ್ತು, ಭಕ್ತಿ ಮತ್ತು ದಾನಧರ್ಮಗಳ ಸಂಗಮ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಈ ಬಾರಿಯ ರಂಜಾನ್ (Ramadan 2026) ಹಬ್ಬವು ಅತ್ಯಂತ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಜರುಗಿತು. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ, ಪರಿಸರ ಪ್ರೇಮದ ಮೂಲಕ ಸಮಾಜಕ್ಕೆ ಮಾದರಿ ಸಂದೇಶ ನೀಡಿದರು.

Ramadan 2026 – ಶ್ರದ್ಧಾಭಕ್ತಿಯ ಸಾಮೂಹಿಕ ಪ್ರಾರ್ಥನೆ
ಒಂದು ತಿಂಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡಿದ್ದ ಮುಸ್ಲಿಂ ಬಾಂಧವರು, ಇಂದು ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಅತ್ಯಂತ ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ನಮಾಜ್ ಬಂಡೆಯ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಬೃಹತ್ ಮೆರವಣಿಗೆಯ ಮೂಲಕ ತೆರಳಿದರು. ಬಳಿಕ ಜಾಮಿಯಾ ಮಸೀದಿಯ ಮೌಲ್ವಿಗಳು ರಂಜಾನ್ ಹಬ್ಬದ ಮಹತ್ವ ಮತ್ತು ಧಾರ್ಮಿಕ ಶಿಸ್ತಿನ ಬಗ್ಗೆ ಬೋಧನೆ ಮಾಡಿದರು. ಪ್ರಾರ್ಥನೆಯ ನಂತರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡ ಜನತೆ, ತಮ್ಮ ಹಿರಿಯರ ಸಮಾಧಿಗಳ ಬಳಿ ತೆರಳಿ ಗೌರವ ಸಲ್ಲಿಸಿದರು.
ಹಬ್ಬದ ಸಂಭ್ರಮಕ್ಕೆ ಹಸಿರಿನ ಮೆರುಗು
ಈ ಬಾರಿಯೂ ಸಹ ಜಿಲ್ಲಾ ಪರಿಸರ ವೇದಿಕೆಯ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ರಾಜಬೀದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಕೋಮು ಸೌಹಾರ್ದತೆಯ (Ramadan 2026) ಸಂದೇಶವನ್ನು ಸಾರಲಾಯಿತು. ರಂಜಾನ್ ಮುಸ್ಲಿಮರ ಪವಿತ್ರ ಹಬ್ಬ. ಇಂದು ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಒಗ್ಗೂಡಿ ಗಿಡ ನೆಟ್ಟು ಹಬ್ಬ ಆಚರಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಸಂತೋಷ ತಂದಿದೆ, ಎಂದು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಿಯಾಜ್ ಪಾಶ ಅವರು ತಮ್ಮ ಸಂತೋಷ ಹಂಚಿಕೊಂಡರು.
ಸಮಾಜಕ್ಕೆ ಮಾದರಿ ಸಂದೇಶ
ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರಾದ ಡಾ. ಗುಂಪುಮರದ ಆನಂದ್ ಮಾತನಾಡಿ, ಪರಿಸರ ವೇದಿಕೆಯು ಪ್ರತಿ ಹಬ್ಬದ ಸಂದರ್ಭದಲ್ಲೂ ಗಿಡ ನೆಡುವ ಮೂಲಕ (Ramadan 2026) ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ. ಇಂದು ಎಲ್ಲರೂ ಅಣ್ಣ-ತಮ್ಮಂದಿರಂತೆ ಸಸಿ ನೆಟ್ಟಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ ಎಂದರು. Read this also : ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆ! ತಪ್ಪಿದರೆ ಬೀಳುತ್ತೆ ₹10,000 ದಂಡ!

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು
ಈ ಸಂಭ್ರಮದ (Ramadan 2026) ಕ್ಷಣಗಳಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ದ್ವಾರಕಾನಾಥ ನಾಯ್ಡು, ಮಾಜಿ ಉಪಾಧ್ಯಕ್ಷ ಎಂ.ಎನ್. ರಾಜಣ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಕಾರ್ಯದರ್ಶಿ ಜಿ.ವಿ.ಶ್ರೀನಾಥ್, ಜಿಲ್ಲಾ ಸಮಿತಿ ಸದಸ್ಯ ಜಿ.ರಾಜೇಶ್ ಹಾಗೂ ಮುಖಂಡರಾದ ಕರವೇ ಶ್ರೀನಿವಾಸ್ ಯಾದವ್, ಅಬ್ಜಲ್, ಇರ್ಫಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
