Pradeep Eshwar: ಸಿಎಂ ಸಾಹೇಬರ ಒಂದು ಕೂದಲು ಕಿತ್ತುಕೊಳ್ಳೋಕೆ ಆಗೊಲ್ಲ ಎಂದು ಸವಾಲಾಕಿದ ಶಾಸಕ ಪ್ರದೀಪ್….!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಸಿಲುಕಿಸಲು ಇಡಿ ಹಾಗೂ ಕೇಂದ್ರ ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ, ಆದರೆ ಸಿಎಂ ಸಿದ್ದರಾಮಯ್ಯನವರ ಒಂದು ಕೂದಲು ಸಹ ಟಚ್ ಮಾಡೋಕೆ ನಿಮ್ಮ ಕೈಯಲ್ಲಾಗಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಕೇಂದ್ರ ಬಿಜೆಪಿ ವಿರುದ್ದ ಗುಡುಗಿದ್ದಾರೆ.

Pradeep Eshwar comments about ED 0

ಈ ಕುರಿತು ವಿಧಾನಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar), ರಾಜ್ಯದಲ್ಲಿ ವಾಲ್ಮೀಕಿ ನಿಗಮ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ನವರ ಹೆಸರು ಸಿಲುಕಿಸಲು ಕೇಂದ್ರ ಬಿಜೆಪಿ ಕುತಂತ್ರ ಮಾಡುತ್ತಿದೆ. ಕೇಂದ್ರದ ಬಿಜೆಪಿಯವರು ರಾಜ್ಯಕ್ಕೆ ಕಳಂಕ ತರಲು ಹೊರಟಿದ್ದಾರೆ. ಇಡಿ ಅಧಿಕಾರಿಗಳು ಕಲ್ಲೇಶ್ ರವರನ್ನು ಇಡಿ ವಿಚಾರಣೆಗೆ ಕರೆದು, ಸಿಎಂ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಒಂದು ಕೂದಲ್ಲನ್ನೂ ಕೇಂದ್ರದ ನಾಯಕರು ಟಚ್ ಮಾಡೋದಕ್ಕು ಸಾಧ್ಯವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಾದ ಕಣ್ಣನ್ ಹಾಗೂ ಮನೋಜ್ ಮಿತ್ತಲ್ ರವರುಗಳು ಕಲ್ಲೇಶ್ ರವರಿಗೆ 17 ಪ್ರಶ್ನೆ ತುಂಬಲು ಕೊಡುತ್ತಾರೆ. ಸಿಎಂ ರವರ ಹೆಸರು ಹೇಳುವಂತೆ ಒತ್ತಡ ಹಾಕುತ್ತಾರೆ. ನಾವು ಹೇಳಿದಂಗೆ ಕೇಳದೇ ಇದ್ದರೇ ಶಿಕ್ಷೆ ಆಗೋತರ ಮಾಡ್ತೀವಿ ಅಂತಾ ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ವಿರುದ್ದ ವಿಲ್ಸನ್ ಗಾರ್ಡನ್ ಸ್ಟೇಷನ್ ಗೆ ದೂರು ನೀಡಲಾಗಿದೆ. ಕೇಂದ್ರದ ಬಿಜೆಪಿ ನಾಯಕರು ಹಿಂದುಳಿದ ವರ್ಗಗಗಳ ನಾಯಕರಾದ ಸಿದ್ದರಾಮಯ್ಯನವರಿಗೆ ತೇಜೋವದೆ ಮಾಡಲು ಮುಂದಾಗಿದ್ದಾರೆ. ಆದರೆ ಅವರ ಒಂದು ಕೂದಲನ್ನು ಕೀಳಲು ಸಾಧ್ಯವಿಲ್ಲ (Pradeep Eshwar) ಎಂದು ಸವಾಲು ಹಾಕಿದರು.

Leave a Comment

Your email address will not be published. Required fields are marked *

Scroll to Top