ನಂಬಿಕೆ ಎಂಬುದು ಇಂದಿನ ಕಾಲದಲ್ಲಿ ಅದೆಷ್ಟು ಅಸುರಕ್ಷಿತ ಎಂಬುದಕ್ಕೆ ಗುಜರಾತ್ನ ಪಾಲನ್ಪುರ ದಲ್ಲಿ ನಡೆದ ಈ ಘೋರ ಘಟನೆಯೇ ಸಾಕ್ಷಿ. ಬರೋಬ್ಬರಿ 15 ವರ್ಷಗಳ ಕಾಲ ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಸ್ವಂತ ಮಗಳಂತೆ (Palanpur Murder Case) ನಂಬಿದ ಮಾಲೀಕಳಿಗೆ ಸಿಕ್ಕಿದ್ದು ಮಾತ್ರ ಸಾವು! ಹಣ ಮತ್ತು ಒಡವೆಯ ವ್ಯಾಮೋಹ ಮನುಷ್ಯನನ್ನು ಎಷ್ಟರಮಟ್ಟಿಗೆ ಕುರುಡು ಮಾಡುತ್ತದೆ ಎಂಬುದಕ್ಕೆ ಈ ಕೊಲೆ ಪ್ರಕರಣ ಕನ್ನಡಿ ಹಿಡಿದಿದೆ. ಏನಿದು ಘಟನೆ? ಇಲ್ಲಿದೆ ಪೂರ್ಣ ವಿವರ.

Palanpur Murder Case – ಸ್ನೇಹ ಮತ್ತು ವ್ಯವಹಾರದ ನಡುವೆ ಬೆಳೆದ ಕ್ರೂರ ಬುದ್ಧಿ
ಪಾಲನ್ಪುರದ ನಿವಾಸಿ ಶಾಂತಿ ಬೆನ್ ಅಕೇಡಿವಾಲಾ ಅವರ ಮನೆಯಲ್ಲಿ ರೇಖಾ ರಾಥೋಡ್ ಎಂಬಾಕೆ ಕಳೆದ 15 ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದರು. ಕಾಲಕ್ರಮೇಣ ಇವರಿಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ರೇಖಾ ತನ್ನ ಪೀಠೋಪಕರಣ ವ್ಯವಹಾರವನ್ನು ಪ್ರಾರಂಭಿಸಿದಾಗ, ಶಾಂತಿ ಬೆನ್ ಅವರು ಆಕೆಗೆ ನೆರವಾಗಲು ದೊಡ್ಡ ಮೊತ್ತದ ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಸಾಲವಾಗಿ ನೀಡಿದ್ದರು. ಆದರೆ ಈ ಸಹಾಯವೇ ಮುಂದೆ ಅವರ ಪ್ರಾಣಕ್ಕೆ ಸಂಚಕಾರ ತರುತ್ತದೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.
ಹತ್ಯೆಗೆ ಸ್ಕೆಚ್ ಹಾಕಿದ ಕಿರಾತಕಿ ರೇಖಾ
ಶಾಂತಿ ಬೆನ್ ಅವರು ತಾನು ನೀಡಿದ್ದ ಹಣ ಮತ್ತು ಒಡವೆಗಳನ್ನು ವಾಪಸ್ ಕೇಳಲು ಶುರು ಮಾಡಿದಾಗ, ರೇಖಾ ಅವರ ಮನಸ್ಸಿನಲ್ಲಿ ಕ್ರೂರ ಆಲೋಚನೆಗಳು ಮೂಡಿದವು. ಸಾಲ ತೀರಿಸುವ ಬದಲು ಸಾಲ (Palanpur Murder Case) ನೀಡಿದವರನ್ನೇ ಮುಗಿಸಿಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸಿದ ಆಕೆ, ಮಾರ್ಚ್ 22 ರಂದು ಭೀಕರ ಸಂಚು ರೂಪಿಸಿದ್ದಳು. ಅಂದು ರಾತ್ರಿ ಶಾಂತಿ ಬೆನ್ ಅವರನ್ನು ಭೇಟಿಯಾಗುವ ನೆಪದಲ್ಲಿ ತನ್ನ ಪೀಠೋಪಕರಣಗಳ ಅಂಗಡಿಗೆ ರೇಖಾ ಕರೆಸಿಕೊಂಡಿದ್ದಳು. Read this also : ಕಾಮದ ಅಮಲು, ಪತಿಯ ಕೊಲೆಗೆ ಸುಪಾರಿ: ಯಾದಗಿರಿಯ ‘ಕಿರಾತಕಿ’ ಪತ್ನಿಯ ಅಸಲಿ ಆಟ ಬಯಲು!
ಪೀಠೋಪಕರಣ ಅಂಗಡಿಯ ನೆಲಮಾಳಿಗೆಯಲ್ಲಿ ನಡೆದ ಬರ್ಬರ ಕೃತ್ಯ
ಪೊಲೀಸ್ ವರದಿಗಳ ಪ್ರಕಾರ, ರೇಖಾ ಮತ್ತು ಆಕೆಯ ನಾಲ್ವರು ಸಹಾಯಕರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಕೊಲೆ ಮಾಡುವ ಮೊದಲು ಆರೋಪಿಗಳು ಮಾದಕ ದ್ರವ್ಯ ಸೇವಿಸಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಮಾಲೀಕಿಯನ್ನು ಕ್ರೂರವಾಗಿ ಕೊಂದ ನಂತರ, ಅಪರಾಧದ ಸಾಕ್ಷ್ಯವನ್ನು ಅಳಿಸಲು ಅವರ ಶವವನ್ನು ಒಂದು (Palanpur Murder Case) ದೊಡ್ಡ ಗೋಣಿ ಚೀಲದಲ್ಲಿ ತುಂಬಲಾಗಿತ್ತು. ನಂತರ ಆ ಶವವನ್ನು ಪಾಲನ್ಪುರದ ಶೋ ರೂಂ ಒಂದರ ನೆಲಮಾಳಿಗೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಕುಟುಂಬದವರ ಹೋರಾಟ ಮತ್ತು ಪೊಲೀಸರ ಕ್ರಮ
ಶಾಂತಿ ಬೆನ್ ಅವರು (Palanpur Murder Case) ನಾಪತ್ತೆಯಾದ ನಂತರ ಅವರ ಕುಟುಂಬದವರು ದೂರು ನೀಡಿದ್ದರು. ಪೊಲೀಸರು ತೀವ್ರ ಹುಡುಕಾಟ ನಡೆಸಿದಾಗ ಈ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಕುಪಿತಗೊಂಡ ಶಾಂತಿ ಬೆನ್ ಅವರ ಮಗಳು ನ್ಯಾನ್ಸಿ ಮತ್ತು ಸಹೋದರಿ ಕೈಲಾಶ್ ಬೆನ್, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ರೇಖಾ ರಾಥೋಡ್ ಮತ್ತು ಆಕೆಯ ಒಬ್ಬ ಸಹಾಯಕ ಸದ್ಯ ಪೊಲೀಸರ ವಶದಲ್ಲಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.
