HomeNationalMother Attacks Children Telangana : ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ಮಕ್ಕಳ ಮೇಲೆಯೇ ಕತ್ತಿಯಿಂದ ಹಲ್ಲೆ...

Mother Attacks Children Telangana : ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ಮಕ್ಕಳ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿದ ತಾಯಿ, ಮಗಳು ಸಾವು!

ಹೆತ್ತ ತಾಯಿಯೇ ಮೃತ್ಯುವಿನ ರೂಪ ತಾಳಿದ ಘಟನೆಯೊಂದು ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತನ್ನಿಬ್ಬರು (Mother Attacks Children Telangana) ಮಕ್ಕಳ ಮೇಲೆ ಕತ್ತಿಯಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 14 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Mother attacks children Telangana incident where daughter dies and son escapes in Yadadri Bhuvanagiri district

Mother Attacks Children Telangana – ಅಸಲಿಗೆ ನಡೆದಿದ್ದೇನು?

ಜೈನಪಲ್ಲಿ ಗ್ರಾಮದ ನರೇಂದರ್ ರೆಡ್ಡಿ ಮತ್ತು ನೀಲಿಮಾ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಕೃತಿಕಾ (14) ಎಂಬ ಮಗಳು ಮತ್ತು ಅಕ್ಷಿತ್ ರೆಡ್ಡಿ (11) ಎಂಬ ಮಗನಿದ್ದಾನೆ. ಮೇಲ್ನೋಟಕ್ಕೆ ಸುಖಿ ಸಂಸಾರದಂತೆ ಕಂಡರೂ, ಕಳೆದ ಕೆಲವು ಸಮಯದಿಂದ ನೀಲಿಮಾ ಅವರು ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ (Mental Health Issues) ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ಜೈನಪಲ್ಲಿಯಿಂದ ತುಕ್ಕಾಪುರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಶನಿವಾರ ರಾತ್ರಿ ಕುಟುಂಬದವರೆಲ್ಲರೂ ಊಟ ಮಾಡಿ ಮಲಗಿದ ನಂತರ, ಮುಂಜಾನೆಯ ವೇಳೆಗೆ ನೀಲಿಮಾ ದಿಢೀರ್ ಆಗಿ ಕತ್ತಿ ಹಿಡಿದು ಮಕ್ಕಳ ಮೇಲೆ ದಾಳಿ ಮಾಡಿದ್ದಾರೆ.

ಅತಿಯಾದ ಶಿಸ್ತು ಮತ್ತು ಮಾನಸಿಕ ಒತ್ತಡ

ನೀಲಿಮಾ ಅವರ ವರ್ತನೆಯ ಬಗ್ಗೆ ಅವರ ಬಂಧುಗಳು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನೀಲಿಮಾ ತನ್ನ ಮಕ್ಕಳ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿದ್ದರು ಮತ್ತು ಅದನ್ನು ಶಿಸ್ತಿನ ಹೆಸರಿನಲ್ಲಿ ಹೇರುತ್ತಿದ್ದರು. ಮಕ್ಕಳು ಟಿವಿ ನೋಡುವುದು ಅಥವಾ ಮೊಬೈಲ್ ಬಳಸುವುದನ್ನು ಅವರು ಸಂಪೂರ್ಣವಾಗಿ ಇಷ್ಟಪಡುತ್ತಿರಲಿಲ್ಲ. ಕೇವಲ (Mother Attacks Children Telangana) ಸಾವಯವ ಆಹಾರವನ್ನು ಮಾತ್ರ ಸೇವಿಸಬೇಕೆಂದು ಮಕ್ಕಳ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ತಾವು ಅಂದುಕೊಂಡ ಕೆಲಸವನ್ನು ತಕ್ಷಣವೇ ಮಾಡಬೇಕೆಂಬ ಅವರ ಹಠಮಾರಿ ಗುಣದಿಂದ ಮಕ್ಕಳು ಸಾಕಷ್ಟು ಇಕ್ಕಟ್ಟಿಗೆ ಸಿಲುಕುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

Read this also : ಇವಳೆಂತಾ ತಾಯಿ? ಸ್ಕೂಟರ್ ಡಿಕ್ಕಿಯಲ್ಲಿ ಪುಟ್ಟ ಮಗುವನ್ನು ಹಾಕಿ ಗಾಡಿ ಓಡಿಸಿದ ಮಹಿಳೆ, ವೈರಲ್ ಆದ ವಿಡಿಯೋ…!

ರಕ್ತಸಿಕ್ತವಾದ ಮುಂಜಾನೆ ಮತ್ತು ಆತ್ಮಹತ್ಯೆ ಯತ್ನ

ಶನಿವಾರ ಸಂಜೆ ಪತಿ ನರೇಂದರ್ ರೆಡ್ಡಿ ಅವರು ಪತ್ನಿ ಮತ್ತು ಮಕ್ಕಳನ್ನು ತುಕ್ಕಾಪುರದಲ್ಲಿ ಬಿಟ್ಟು ಹೋಗಿದ್ದರು. ಭಾನುವಾರ ಮುಂಜಾನೆ ಎಲ್ಲರೂ ನಿದ್ರೆಯಲ್ಲಿದ್ದಾಗ ನೀಲಿಮಾ ದಿಢೀರ್ ಆಗಿ ಕತ್ತಿ ಹಿಡಿದು ಮಕ್ಕಳ ಮೇಲೆ ದಾಳಿ ಮಾಡಿದ್ದಾರೆ. ತಾಯಿ ನಡೆಸಿದ ಈ ಅನಿರೀಕ್ಷಿತ ಹಲ್ಲೆಯಿಂದಾಗಿ ಮಗಳು ಕೃತಿಕಾ ತೀವ್ರವಾಗಿ ಗಾಯಗೊಂಡು (Mother Attacks Children Telangana) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತದನಂತರ ಮಗ ಅಕ್ಷಿತ್ ರೆಡ್ಡಿ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಆತ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಹೊರಗೆ ಬಂದು ಕಿರುಚಾಡಿದ್ದಾನೆ. ಅವನ ಆರ್ತನಾದ ಕೇಳಿ ಸ್ಥಳೀಯರು ಮತ್ತು ಮನೆಯವರು ಓಡಿ ಬರುವಷ್ಟರಲ್ಲಿ ನೀಲಿಮಾ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Mother attacks children Telangana incident where daughter dies and son escapes in Yadadri Bhuvanagiri district

ಪೋಲಿಸ್ ತನಿಖೆ ಮತ್ತು ಪ್ರಸ್ತುತ ಸ್ಥಿತಿ

ಪ್ರಸ್ತುತ ನೀಲಿಮಾ ಅವರ ಸ್ಥಿತಿ (Mother Attacks Children Telangana) ಚಿಂತಾಜನಕವಾಗಿದ್ದು, ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೀಲಿಮಾ ಅವರ ಸಹೋದರ ನೀಡಿದ ಮಾಹಿತಿ ಪ್ರಕಾರ, ಆಕೆ ಕಳೆದ ಕೆಲವು ದಿನಗಳಿಂದ ಮತಿಭ್ರಮಣೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular