ಮಹಾಶಿವರಾತ್ರಿಯ ಪುಣ್ಯಕಾಲದಲ್ಲಿ ಭಕ್ತರು ಶಿವನ ದರ್ಶನ ಪಡೆದು ಪುನೀತರಾಗುವುದು ಸಾಮಾನ್ಯ. ಆದರೆ, ಶಿವನ ಕಲ್ಯಾಣೋತ್ಸವ ನಡೆಯುವಾಗ ಸ್ವತಃ (Mahashivratri Miracle) ಆ ಪರಶಿವನ ಆಭರಣವಾದ ನಾಗರಾಜನೇ ಪ್ರತ್ಯಕ್ಷನಾಗಿ ದರ್ಶನ ನೀಡಿದರೆ? ಇಂತಹದ್ದೇ ಒಂದು ರೋಚಕ ಮತ್ತು ಭಕ್ತಿಪರವಶ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.

Mahashivratri Miracle – ಶಿವ ಪಾರ್ವತಿಯರ ಕಲ್ಯಾಣೋತ್ಸವದಲ್ಲಿ ನಡೆದ ಅಪರೂಪದ ಘಟನೆ
ತೆಲಂಗಾಣದ ನಿರ್ಮಲ್ ಜಿಲ್ಲೆಯ ದಸ್ತೂರಾಬಾದ್ ಮಂಡಲದ ಗೊಡಿಸೆರ್ಯಾಲ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಅದ್ಭುತ ಸಂಭವಿಸಿದೆ. ಮಹಾಶಿವರಾತ್ರಿಯ ಅಂಗವಾಗಿ ದೇವಾಲಯದಲ್ಲಿ ಶಿವ-ಪಾರ್ವತಿಯರ ಕಲ್ಯಾಣೋತ್ಸವವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿತ್ತು. ವೇದಮಂತ್ರಗಳ ಘೋಷದೊಂದಿಗೆ ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ಆ ಪವಿತ್ರ ಸಮಯದಲ್ಲಿ, ಎಲ್ಲಿಂದಲೋ ಬಂದ ನಾಗರಹಾವೊಂದು ಎಲ್ಲರ ಗಮನ ಸೆಳೆಯಿತು.
ಹೆಡೆಬಿಚ್ಚಿ ಕಲ್ಯಾಣೋತ್ಸವ ವೀಕ್ಷಿಸಿದ ನಾಗೇಂದ್ರ
ಕೇವಲ ಹಾವು ಪ್ರತ್ಯಕ್ಷವಾಗುವುದು ಮಾತ್ರವಲ್ಲದೆ, ಆ ನಾಗಪ್ಪ ದೀರ್ಘಕಾಲದವರೆಗೆ ಫಣಿಯೆತ್ತಿ ಶಾಂತವಾಗಿ ಕುಳಿತು ಕಲ್ಯಾಣೋತ್ಸವದ ವಿಧಿವಿಧಾನಗಳನ್ನು ವೀಕ್ಷಿಸಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ, ಈ ನಾಗರಹಾವು ಯಾವುದೇ ಭಯವಿಲ್ಲದೆ ಶಾಂತವಾಗಿ ಅಲ್ಲಿಯೇ ನೆಲೆಸಿತ್ತು. (Mahashivratri Miracle) ಈ ದೃಶ್ಯವನ್ನು ಕಂಡ ಭಕ್ತರು ಆ ಕ್ಷಣ ಬೆರಗಾಗಿ ಹೋದರು. ಇದನ್ನೂ ಓದಿ : ಲಿಂಗ ರೂಪವಲ್ಲ, ಇಲ್ಲಿ ಶಿವನು ಮನುಷ್ಯ ರೂಪದಲ್ಲಿ ದರ್ಶನ ನೀಡುತ್ತಾನೆ! ಹೇಮಾವತಿ ಶಿವನ ವಿಗ್ರಹದ ಅಪರೂಪದ ವೈಶಿಷ್ಟ್ಯಗಳು..!
ದೈವಿಕ ಪವಾಡ ಎಂದು ಸಂಭ್ರಮಿಸಿದ ಭಕ್ತಸಮೂಹ
ಸಾಮಾನ್ಯವಾಗಿ ಹಾವು ಕಂಡರೆ ಭಯಪಟ್ಟು ಓಡುವ (Mahashivratri Miracle) ಜನರು, ಈ ದೃಶ್ಯ ನೋಡಿ ಭಕ್ತಿಯಿಂದ ಕೈಮುಗಿದಿದ್ದಾರೆ. ಸ್ವತಃ ಆ ಶಿವನೇ ನಾಗೇಂದ್ರನ ರೂಪದಲ್ಲಿ ಬಂದು ತನ್ನ ಕಲ್ಯಾಣವನ್ನು ತಾನೇ ನೋಡುತ್ತಿದ್ದಾನೆ ಎಂದು ಭಕ್ತರು ಪುಳಕಿತರಾದರು. ಸುಮಾರು ಹೊತ್ತು ಕಲ್ಯಾಣೋತ್ಸವದ ಬಳಿಯೇ ಇದ್ದ ಹಾವು, ನಂತರ ಯಾರಿಗೂ ತೊಂದರೆ ನೀಡದೆ ಸಮೀಪದ ಪೊದೆಗಳ ಕಡೆಗೆ ತೆರಳಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್
ಅಲ್ಲಿ ನೆರೆದಿದ್ದ ಭಕ್ತರು ಈ (Mahashivratri Miracle) ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. “ಓಂ ನಮಃ ಶಿವಾಯ” ಎಂಬ ಕಾಮೆಂಟ್ಗಳೊಂದಿಗೆ ಭಕ್ತರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಕಲಿಯುಗದಲ್ಲಿ ಇದು ಶಿವನ ಪವಾಡ ಎಂದು ಅನೇಕರು ನಂಬುತ್ತಿದ್ದಾರೆ.
