Sunday, June 1, 2025
HomeStateLocal : ವಾಟದಹೊಸಹಳ್ಳಿ ಕೆರೆ ನೀರು ಗೌರಿಬಿದನೂರು ನಗರಕ್ಕೆ ಬಳಕೆಗೆ ಮುಂದಾದರೆ ಉಗ್ರಹೋರಾಟಕ್ಕೆ ಸಿದ್ದ :...

Local : ವಾಟದಹೊಸಹಳ್ಳಿ ಕೆರೆ ನೀರು ಗೌರಿಬಿದನೂರು ನಗರಕ್ಕೆ ಬಳಕೆಗೆ ಮುಂದಾದರೆ ಉಗ್ರಹೋರಾಟಕ್ಕೆ ಸಿದ್ದ : ಗ್ರಾಮಸ್ಥರ ಎಚ್ಚರಿಕೆ

Local – ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ಪಟ್ಟಣದ ಕುಡಿಯುವ ನೀರಿಗೆ ಬಳಸಿಕೊಳ್ಳಲು ಶಾಸಕ ಪುಟ್ಟಸ್ವಾಮಿಗೌಡ ಇತ್ತೀಚೆಗೆ ಗೌರಿಬಿದನೂರು ನಗರಸಭೆಯಲ್ಲಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಾಟದಹೊಸಹಳ್ಳಿ ಕೆರೆ ನೀರು ಅಚ್ಚುಕಟ್ಟುದಾರರ ಸಂಘದ ವತಿಯಿಂದ ಉಗ್ರಹೋರಾಟ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ವಾಟದಹೊಸಹಳ್ಳಿ ಬಂದ್ ಗೆ ಸಹ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Local - Farmers protesting against water diversion from Vatadahosahalli Lake in Gauribidanur

Local – ಗೌರಿಬಿದನೂರು ನಗರಕ್ಕೆ ವಾಟದಹೊಸಹಳ್ಳಿ ಗ್ರಾಮದ ಕೆರೆಯ ನೀರು ಪೂರೈಕೆಗೆ ಆಕ್ರೋಷ

ವಾಟದಹೊಸಹಳ್ಳಿ ಗ್ರಾಮದ ಅಮಾನಿಕೆರೆಯು ಸರಿ ಸುಮಾರು 400ಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಕೆರೆಯಾಗಿದ್ದು, ಈ ಕೆರೆಯ ನೀರಿನಿಂದ ಸುತ್ತಮುತ್ತಲ ಸುಮಾರು 40 ಕ್ಕೂ ಹೆಚ್ಚು ಹಳ್ಳಿಗಳ ಕುಡಿಯುವ ನೀರಿಗೆ ಮತ್ತು ಸಣ್ಣ ಮತ್ತು ಅತಿಸಣ್ಣ ರೈತರು ಜೀವನ ನಡೆಸಲು ಜೀವನಾಧಾರವಾಗಿದ್ದು, ಈ ಕೆರೆಯ ನೀರು ಬಿಟ್ಟರೆ ಆ ಭಾಗದ ರೈತರಿಗೆ ನೀರಿನ ಆಸರೆ ಬೇರೆ ಇರುವುದಿಲ್ಲ. ವಾಟದಹೊಸಹಳ್ಳಿ ಕೆರೆ ಮೂರು ಹಳ್ಳಿಗೆ ಅಲ್ಲ ಸ್ವಾಮಿ, ಇದು 40 ಹಳ್ಳಿಗಳಿಗೆ ಸೇರಿರುವ ಕೆರೆಯಾಗಿದೆ. ಮುದ್ದಲೋಡು ಕೆರೆ, ಗೊಲ್ಲಹಳ್ಳಿ, ಜಿಲ್ಲಾಕುಂಟೆ ಕೆರೆ, ನಕ್ಕಲಹಳ್ಳಿ ಕೆರೆ ಹಾಗೂ ಮಣಿವಾಲ ಕೆರೆಗಳಿಗೆ ನಮ್ಮ ಕೆರೆಯಿಂದಲೇ ನೀರುಹರಿಯುತ್ತದೆ. ಇದನ್ನು ತಿಳಿಯದೆ ಯಾರೋ ಹೇಳಿದ ಮಾತು ಕೇಳಿ ಗೌರಿಬಿದನೂರು ನಗರಕ್ಕೆ ಅವೈಜ್ಞಾನಿಕವಾಗಿ ನೀರು ಸರಬರಾಜು ಮಾಡುತ್ತಿರುವುದು ಖಂಡನೀಯ. ಮೊದಲು ಇದನ್ನು ಕೈ ಬಿಟ್ಟು ಈ ಭಾಗದ ರೈತರಿಗೆ ಅನುಕೂಲ ಆಗವುದ ರೀತಿ ಮಾಡಿ. ಇಲ್ಲವಾದಲ್ಲೆ ನಾವು ಎಲ್ಲದಕ್ಕೂ ಸಿದ್ದವಾಗಿದ್ದೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

Local – ಕೆರೆಯ ನೀರು ಕೃಷಿ ಚಟುವಟಿಕೆಗಳಿಗೆ ಬಳಸುವುದು ವಾಡಿಕೆ

1932ನೇ ಇಸವಿಯಲ್ಲಿ ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆಯ ಕಟ್ಟೆ ಉನ್ನತೀಕರಣ ಮಾಡುವ ಸಮಯದಲ್ಲಿ ಈ ವಾಟದಹೊಸಹಳ್ಳಿಗೆ ಕೆರೆಗೆ ಬರುವ ಪೋಷಕ ಕಾಲುವೆಗೆ ಸಹ ಅಡ್ಡಲಾಗಿ ನೀರು ಬರುವುದಿಲ್ಲ ಎಂಬ ಕಾರಣಕ್ಕೆ ಮೈಸೂರು ಮಹಾರಾಜರ ನೇತೃತ್ವದಲ್ಲಿ ಸಚಿವಾಲಯದಿಂದ ಗುಡಿಬಂಡೆ ಕೆರೆ ತುಂಬಿದಾಗ ಇಂತಷ್ಟು ನೀರು ಬಿಡಬೇಕು ಎಂಬ ಷರತ್ತನ್ನು ವಿಧಿಸಿ ಕೆರೆಯ ಕಟ್ಟೆ ಅಭಿವೃದ್ದಿ ಪಡಿಸಲಾಗಿತ್ತು. ಅದರಂತೆ ಗುಡಿಬಂಡೆ ಅಮಾನಿಬೈರಸಾಗರ ಕೆರೆ ತುಂಬಿದ ಸಮಯದಲ್ಲಿ ವಾಟದಹೊಸಹಳ್ಳಿ ಗ್ರಾಮದ ಅಮಾನಿ ಕೆರೆಗೆ ನೀರನ್ನು ಬಿಡಿಸಿಕೊಂಡು, ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ವಾಡಿಕೆಯಾಗಿದೆ.

2015ರಲ್ಲಿ ಕುಡಿಯುವ ನೀರಿನ ಆಭಾವ ಆದಾಗ ಆಗಿನ ಜಿಲ್ಲಾದಿಕಾರಿಗಳು ಕೆರೆಯ ನೀರನ್ನು ಗೌರೀಬಿದನೂರು ಪಟ್ಟಣಕ್ಕೆ ಕುಡಿಯುವ ನೀರಿಗೆ ಬಳಸಿಕೊಳ್ಳಲು ಆದೇಶ ಮಾಡಿ, ಕೆರೆಯ ತೂಬನ್ನು ಮುಚ್ಚಿದ್ದರು, ಇದನ್ನು ಮನಗೊಂಡ ಆಗಿನ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ಕುಡಿಯುವ ನೀರಿಗೆ ಬಳಸಿಕೊಳ್ಳುವ ಪ್ರಸ್ಥಾಪನೆ ಮಾಡಿದಾಗ ಆ ಸಂದರ್ಭದಲ್ಲಿ ರೈತರು, ಗ್ರಾಮಸ್ಥರು ಹಿರಿಯರು ಸಭೆ ಸೇರಿ ಪ್ರತಿಭಟನೆಗೆ ಮುಂದಾದಾಗ, ಕೆರೆಯ ನೀರಿನ ಪ್ರಸ್ಥಾವನೆ ತಡೆ ಹಿಡಿದು, ಈಗಿನ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆಯ ನೀರನ್ನು ತರುವಲ್ಲಿ ಅನುಮೋದನೆ ಪಡೆದಿದ್ದರು.

Local – ಎತ್ತಿನಹೊಳೆ ನೀರು ಹೇಗೆ ಬರುತ್ತೆ?

ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡರು ಗೌರೀಬಿದನೂರು ನಗರ ಸಭೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ನೀರಿನ ಭವಣೆಯನ್ನು ನೀಗಿಸಲು ವಾಟದಹೊಸಹಳ್ಳಿ ಕೆರೆಯ ನೀರನ್ನು ತರುತ್ತೇನೆ ಎಂದು ಹೇಳಿರುವುದು ಈ ಭಾಗದ ರೈತರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾಟದಹೊಸಹಳ್ಳಿ ಕೆರೆಗೆ ಎತ್ತಿನ ಹೊಳೆ ನೀರು ಹರಿಸುವುದಾಗಿ ಹೇಳಿದ್ದಾರೆ. ಆದರೆ ವಾಟದಹೊಸಹಳ್ಳಿ ಕೆರೆ ಎತ್ತಿನಹೊಳೆ ನೀರು ಹರಿಸುವ ಯೋಜನೆಯಲ್ಲಿ ಇಲ್ಲ. ಯಾವ ರೀತಿ ಎತ್ತಿನ ಹೊಳೆ ನೀರು ಬರುತ್ತದೆ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.

ಕುಡಿಯಲು ಮತ್ತು ರೈತರಿಗೆ ಉಪಯೋಗ: ವಾಟದಹೊಸಹಳ್ಳಿ ಕೆರೆಯಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತಲ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿ ಕುಡಿಯುವ ನೀರಿಗೆ ಮತ್ತು ರೈತರು ಬೆಳೆ ಬೆಳೆಯಲು ಸಹಾಯವಾಗುತ್ತಿದ್ದು, ಈಗ ಈ ಕೆರೆಯ ನೀರನ್ನು ಬೇರೆಡೆಗೆ ಬಳಸಿಕೊಂಡರೆ ಈ ಭಾಗದ ಸಾರ್ವಜನಿಕರು, ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗಿದೆ. ವಾಟದಹೊಸಹಳ್ಳಿ ಕೆರೆಯ ನೀರು ಸುತ್ತಮುತ್ತಲಹಳ್ಳಿಗಳ ಜೀವನಾಡಿಯಾಗಿದ್ದು, ಈಗಾಗಲೇ ಮಳೆ ಕೈಕೊಟ್ಟಿರುವುದರಿಂದ ಈ ನೀರನ್ನು ಬೇರೆಡೆಗೆ ಬಳಸಿಕೊಂಡರೇ ರೈತರು ಸಂಕಷ್ಟಕ್ಕೆ ಸಿಲುಕಬೇಕಾದ ಕಾರಣ ಕೆರೆ ನೀರನ್ನು ಯಾವುದೇ ಕಾರಣಕ್ಕೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು.

Local - Farmers protesting against water diversion from Vatadahosahalli Lake in Gauribidanur

Local – ಉಗ್ರ ಹೋರಾಟದ ಎಚ್ಚರಿಕೆ

ವಾಟದಹೊಸಹಳ್ಳಿ ಕೆರೆ ನೀರು ಗೌರೀಬಿದನೂರು ಪಟ್ಟಣಕ್ಕೆ ಕುಡಿಯುವ ನೀರಿನ ಬಳಸಿಕೊಳ್ಳು ಶಾಸಕ ಪುಟ್ಟಸ್ವಾಮಿ ಗೌಡ ಮುಂದಾಗುತ್ತಿರುವುದನ್ನು ಖಂಡಿಸಿ ಮುಂದಿನ ದಿನಗಳ್ಳಿ ವಾಟದಹೊಸಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ ರೈತರು ಮುಖಂಡರು ಪಕ್ಷಾತೀತವಾಗಿ ಉಗ್ರವಾದ ಹೋರಾಟಗಳನ್ನು ಮಾಡಸಲು ಸಿದ್ದವಾಗಿದ್ದೇವೆ. ಯಾವದೇ ಪ್ರಕರಣಗಳನ್ನು ಹಾಕಿದರೂ ಅದಕ್ಕೂ ಸಹ ಸಿದ್ದವಾಗಿದ್ದೇವ ಎಂದು ಶಾಸಕ ಪುಟ್ಟಸ್ವಾಮಿ ಗೌಡ ಅವರಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

Local – ಈ ಹಿಂದೆ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಮನವಿ

ವಾಟದಹೊಸಹಳ್ಳಿ ಕೆರೆಯ ನೀರನ್ನು ಗೌರೀಬಿದನೂರು ಪಟ್ಟಣಕ್ಕೆ ಬಳಸಿಕೊಳ್ಳದಂತೆ ತಡೆಹಿಡಿಯಲು ವಾಟದಹೊಸಹಳ್ಳಿ ಕೆರೆ ನೀರು ಅಚ್ಚುಕಟ್ಟುದಾರರ ಸಂಘದ ವತಿಯಿಂದ ರೈತ ಸಂಘದ ಅಧ್ಯಕ್ಷ ಮಾಳಪ್ಪ, ರೈತ ಮುಖಂಡ ಕೆಂಪುರಂಗಪ್ಪ, ವಿ.ಎಂ.ಮಂಜುನಾಥ್, ಲಕ್ಷ್ಮಣರೆಡ್ಡಿ, ವೆಂಕಟರೋಣಪ್ಪ ಮತ್ತು ಇತರರರು ಸೇರಿ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಗೌರೀಬಿದನೂರು ತಹಶೀಲ್ದಾರ್ ರವರುಗಳಿಗೆ ಸಹ ಎರಡು ವರ್ಷಗಳ ಹಿಂದೆಯೇ ಮನವಿಯನ್ನು ಸಹ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಾಟದಹೊಸಹಳ್ಳಿ ರೈತಮುಖಂಡರಾದ ವಿವೇಕನಂದರೆಡ್ಡಿ, ಆದಿನಾರಾಯಣರೆಡ್ಡಿ, ಕೆಂಪುರಂಗಪ್ಪ, ಮಂಜುನಾಥ ವಿಸಿಎಂ, ಹರ್ಷವರ್ದನ್ ರೆಡ್ಡಿ, ಅಶ್ವತ್ಥಪ್ಪ, ಎಸ್.ಎಂ. ನವೀನ್, ವಿ.ಸಿ.ನಾಗರಾಜು, ಓಬಳರೆಡ್ಡಿ, ರಾಜನಾಯಕ, ಕೃಷ್ಣಮೂರ್ತಿ, ವಿಜಯ್ ಕುಮಾರ್ ಸೇರಿದಂತೆ ಹಲವು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular