Anti Drug Day – ಇಂದಿನ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದರಿಂದ ತಮ್ಮ ಆರೋಗ್ಯ ನಾಶವಾಗುವುದರ ಜೊತೆಗೆ ಇಡೀ ಕುಟುಂಬವೇ ನಾಶವಾಗುತ್ತದೆ ಎಂದು ಗುಡಿಬಂಡೆ ಜೆಎಂಎಫ್ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ದ ದಿನದ ಅಂಗವಾಗಿ ಅರಿವು ನೆರವು ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
Anti Drug Day – ಯುವಕರೇ ಎಚ್ಚರ! ಮಾದಕ ವ್ಯಸನದಿಂದ ಭವಿಷ್ಯ ಹಾಳು
ಯುವಜನತೆ ದೇಶದ ಆಸ್ತಿ. ಆದರೆ ಇಂದಿನ ಯುವಜನತೆ ತಪ್ಪು ಹಾದಿಗಳನ್ನು ಹಿಡಿದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಾದಕ ವಸ್ತುಗಳ ವ್ಯಸನಿಗಳಾಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಪ್ರಾಣವನ್ನು ಕಳೆದುಕೊಂಡು ತಮ್ಮನ್ನು ನಂಬಿಕೊಂಡಿರುವ ಕುಟುಂಬವನ್ನು ಬೀದಿಗೆ ತರುತ್ತಿದ್ದಾರೆ. ಸಾಮಾನ್ಯವಾಗಿ ಡ್ರಗ್ಸ್ ಎಂದ ಕೂಡಲೇ ಗಾಂಜಾ, ಆಫೀಮು ಎಂದುಕೊಳ್ಳುತ್ತಿರಾ. ಆದರೆ ಡ್ರಗ್ಸ್ ಗಳಲ್ಲಿ ಅನೇಕ ವಿಧಗಳಿವೆ. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಾದ ತಾವು ಅರಿವು ಪಡೆದುಕೊಂಡು ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
Anti Drug Day – ದೇಶದ ಅಭಿವೃದ್ಧಿಗೆ ಮಾರಕ ಮಾದಕ ವ್ಯಸನ
ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ಅಕ್ಷಯ್ ಮಾತನಾಡಿ, ಮಾದಕ ವಸ್ತುಗಳು ಸೇವನೆಯಿಂದ ತಮ್ಮ ಆರೋಗ್ಯ ನಾಶವಾಗುತ್ತದೆ. ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ತಮ್ಮ ಉಜ್ವಲವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ದೇಶದ ಅಭಿವೃದ್ದಿಗೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಈಗಾಗಲೇ ಮಾದಕ ವಸ್ತುಗಳ ಸೇವನೆಯ ಕುರಿತು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಸಹ ಈ ಕುರಿತು ಅರಿವು ಪಡೆದುಕೊಂಡು ಜಾಗೃತರಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಎಲ್ಲರ ಜೊತೆಗೆ ಕೈಜೋಡಿಸಬೇಕು ಎಂದರು.
Read this also : ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಬೇಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ: ಗಣೇಶ್
Anti Drug Day – ಮಾದಕ ವ್ಯಸನ ವಿರೋಧಿ ಪ್ರತಿಜ್ಞೆ
ಕಾರ್ಯಕ್ರಮದ ಅಂಗವಾಗಿ ಮಾದಕವಸ್ತು ದುರುಪಯೋಗ ವಿರುದ್ದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು ಜೊತೆಗೆ ಸೂಚನ ಫಲಕದಲ್ಲಿ ಸಹಿ ಹಾಕುವ ಮೂಲಕ ಮಾದಕ ವಸ್ತುಗಳನ್ನು ವಿರೋಧಿಸುವ ಬಗ್ಗೆ ಶಪಥ ಸ್ವೀಕರಿಸಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ಕಾಲೇಜಿನ ಪ್ರಾಂಶುಪಾಲ ರವೀಂದ್ರ, ಪೊಲೀಸ್ ಪಿ.ಎಸ್.ಐ ಗಣೇಶ್, ಆರೋಗ್ಯ ನಿರೀಕ್ಷಕ ನರಸಿಂಹಯ್ಯ ಸೇರಿದಂತೆ ವಕೀಲರು ಕಾಲೇಜಿನ ಸಿಬ್ಬಂದಿ ವರ್ಗ ಹಾಜರಿದ್ದರು.