Indian Army – ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಅವರು ಅತ್ಯಂತ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ರಾಜಸ್ಥಾನದ ಅನೂಪ್ಗಢದಲ್ಲಿ ಯೋಧರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವು ಕೂಡಲೇ ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ, ಜಾಗತಿಕ ಭೌಗೋಳಿಕ ನಕ್ಷೆಯಿಂದಲೇ ಪಾಕಿಸ್ತಾನವನ್ನು ಅಳಿಸಿಹಾಕಲಾಗುವುದು ಎಂದು ಗುಡುಗಿದ್ದಾರೆ.

Indian Army – ಆಪರೇಷನ್ ಸಿಂಧೂರ್ 2.0 ಸುಳಿವು
ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆ ಇದು ಕೇವಲ ಮಾತಲ್ಲ, ಅದರ ಹಿಂದೆ ದೃಢವಾದ ಸೇನಾ ಕ್ರಮದ ಸೂಚನೆಯಿದೆ. ದ್ವಿವೇದಿ ಅವರು, “ಪಾಕಿಸ್ತಾನ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಯಸಿದರೆ, ಅದು ಈ ಕೂಡಲೇ ಭಯೋತ್ಪಾದನೆಯನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು. ಹಿಂದಿನ ಆಪರೇಷನ್ ಸಿಂಧೂರ್ 1.0 (Operation Sindoor 1.0) ಸಮಯದಲ್ಲಿ ನಾವು ತೋರಿದ ಸಂಯಮವನ್ನು ಈ ಬಾರಿ ಖಂಡಿತಾ ತೋರಿಸುವುದಿಲ್ಲ. ಈ ಬಾರಿ ನಮ್ಮ ನಡೆ ಪಾಕಿಸ್ತಾನವು ತಾನು ಭೂಪಟದಲ್ಲಿ ಇರಬೇಕೋ ಬೇಡವೋ ಎಂದು ಯೋಚಿಸುವಂತೆ ಮಾಡುತ್ತದೆ” ಎಂದಿದ್ದಾರೆ. ಶೀಘ್ರದಲ್ಲೇ ಯೋಧರಿಗೆ ಮತ್ತೆ ಶತ್ರುಗಳ ಮೇಲೆ ಆಕ್ರಮಣ ಮಾಡುವ ಅವಕಾಶ ಸಿಗಲಿದೆ ಎಂದು ಹೇಳುವ ಮೂಲಕ, ಸೈನಿಕರು ಪ್ರತಿ ಕ್ಷಣವೂ ಸರ್ವ ಸನ್ನದ್ಧರಾಗಿರಿ ಎಂದು ಸೂಚಿಸಿದ್ದಾರೆ.
Indian Army – ಆಪರೇಷನ್ ಸಿಂಧೂರ್ನಲ್ಲಿ ಪಾಕಿಸ್ತಾನಕ್ಕೆ ಭಾರೀ ನಷ್ಟ!
ಜನರಲ್ ದ್ವಿವೇದಿ ಅವರ ಈ ಕಠಿಣ ಎಚ್ಚರಿಕೆ ನೀಡುವ ಮುನ್ನ, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆಯ ವಿವರಗಳನ್ನು ನೆನಪಿಸಿದ್ದಾರೆ. ಭಾರತೀಯ ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ನೀಡಿದ ಮಾಹಿತಿಯ ಪ್ರಕಾರ, ಆಪರೇಷನ್ ಸಿಂಧೂರ್ ವೇಳೆ ಭಾರತದ ಪಡೆಗಳು ಪಾಕಿಸ್ತಾನದ 4 ರಿಂದ 6 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿವೆ. Read this also : ಆಪರೇಷನ್ ಸಿಂಧೂರ್- ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯ ದಿಟ್ಟ ಪ್ರತೀಕಾರ…!

ವಿಡಿಯೋ ಇಲ್ಲಿದೆ ನೋಡಿ : Click here
Indian Army – ಪತನಗೊಂಡ ಪ್ರಮುಖ ವಿಮಾನಗಳು ಯಾವುವು?
ಪತನಗೊಂಡ ವಿಮಾನಗಳಲ್ಲಿ ಅಮೆರಿಕ ನಿರ್ಮಿತ ಎಫ್-16 (F-16) ಮತ್ತು ಚೀನಾ ನಿರ್ಮಿತ ಜೆಎಫ್-17 (JF-17) ಫೈಟರ್ ಜೆಟ್ಗಳು ಸೇರಿವೆ. ಇದರ ಜೊತೆಗೆ, ಬಹುಶಃ ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ (AEW&C) ಸೇರಿದಂತೆ ಒಂದು ‘ದೊಡ್ಡ ಹಕ್ಕಿ’ಯೂ (Big Bird) ನಾಶವಾಗಿದೆ. ಈ ಮೂಲಕ ಪಾಕಿಸ್ತಾನದ ವಾಯುಪಡೆಗೆ ಭಾರೀ ಆಘಾತವುಂಟಾಗಿತ್ತು.
