ಮನುಷ್ಯನ ಅತಿಯಾದ ಆಸೆ ಮತ್ತು ಮಿತಿಮೀರಿದ ಸಾಲದ ವ್ಯಾಮೋಹ ಎಷ್ಟು ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದ ಈ ಬರ್ಬರ ಹತ್ಯೆಯೇ ಸಾಕ್ಷಿ. ಸಾಲದ ವಿಚಾರವಾಗಿ ಉಂಟಾದ ಸಣ್ಣ ತಕರಾರು, ಇಂದು (Crime News) ಇಬ್ಬರು ಹಸುಗೂಸುಗಳನ್ನು ಅನಾಥರನ್ನಾಗಿಸಿದೆ ಹಾಗೂ ಒಂದು ಸುಂದರ ಸಂಸಾರವನ್ನು ಬೀದಿಗೆ ತಂದಿದೆ. ನಂಬಿದ ಪತಿಯೇ ಕ್ರೂರಿಯಾಗಿ ಪತ್ನಿಯ ಕತ್ತು ಸೀಳಿದ ಘಟನೆ ಇಡೀ ನಗರವನ್ನು ಕಂಗೆಡಿಸಿದೆ.

Crime News – ನಡೆದಿದ್ದೇನು? ಸಾಲದ ಸುಳಿ ಮತ್ತು ಮನೆಯ ಕದನ
ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಇರ್ಫಾನ್ ಮತ್ತು ಮಾಸಬ್ಬಿ ದಂಪತಿ ವಾಸವಾಗಿದ್ದರು. ಇರ್ಫಾನ್ ಗಾರೆ ಕೆಲಸ ಮಾಡಿಕೊಂಡಿದ್ದರೂ, ಮಿತಿಮೀರಿದ ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಸಂಸಾರ ನಡೆಸಲು ಹೆಂಡತಿಯ ಒಡವೆಗಳನ್ನೇ ಅಡವಿಟ್ಟಿದ್ದ ಈತನಿಗೆ, ಹಣದ ಹಪಾಹಪಿ ಮಾತ್ರ ಕಡಿಮೆಯಾಗಿರಲಿಲ್ಲ.
ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಮಾಸಬ್ಬಿಯ ಸಹೋದರ 20 ಸಾವಿರ ರೂಪಾಯಿ ನೀಡಿದ್ದರೂ ಸಹ, ಇರ್ಫಾನ್ಗೆ ಮಾತ್ರ ತೃಪ್ತಿಯಿರಲಿಲ್ಲ. ಸೋಮವಾರ ಮತ್ತೆ ಹಣಕ್ಕಾಗಿ ಕಿರಿಕ್ ಶುರು ಮಾಡಿದ ಇರ್ಫಾನ್, ಜಗಳ ತಾರಕಕ್ಕೇರಿದಾಗ ಸಮಾಧಾನ ಕಳೆದುಕೊಂಡು ಪತ್ನಿಯ ಕತ್ತು ಸೀಳಿದ್ದಾನೆ.
ಜೀವ ಉಳಿಸಿ ಎಂದು ಬೇಡಿದರೂ ಕರಗಲಿಲ್ಲ ಮನ!
ಈ ಘಟನೆಯ ಅತ್ಯಂತ ಭಯಾನಕ ಕ್ಷಣವೆಂದರೆ, ಕತ್ತು ಸೀಳಿಸಿಕೊಂಡ ಸ್ಥಿತಿಯಲ್ಲೇ ಮಾಸಬ್ಬಿ ತನ್ನ ಪ್ರಾಣ ಉಳಿಸಿಕೊಳ್ಳಲು ರಕ್ತದ ಮಡುವಿನಲ್ಲಿ ಮನೆಯಿಂದ ಹೊರಗೆ ಓಡಿಬಂದಿದ್ದಾಳೆ. ಅಕ್ಷರಶಃ ಜೀವ ಭಿಕ್ಷೆಗಾಗಿ ಅಂಗಲಾಚಿದ್ದಾಳೆ. ಆದರೆ, ಕಣ್ಣು ಮಣ್ಣಾಗಿದ್ದ ಇರ್ಫಾನ್, ಆಕೆಯನ್ನು ಹಿಂಬಾಲಿಸಿ ರಸ್ತೆಯಲ್ಲೇ ಮತ್ತೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. Read this also : ಮದುವೆ ಮಂಟಪಕ್ಕೆ ಹೊರಟಿದ್ದ ವರನಿಗೆ ಚಾಕು ಇರಿತ: ಕಣ್ಣೀರು ಹಾಕಿದ್ದ ವಧುವೇ ಅಸಲಿ ವಿಲನ್! ಕೊಳ್ಳೇಗಾಲದ ಕೇಸ್ಗೆ ಬಿಗ್ ಟ್ವಿಸ್ಟ್…!
ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೃತ್ಯ ಎಸಗಿದ ನಂತರ ಆರೋಪಿ ಇರ್ಫಾನ್ ನೇರವಾಗಿ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಗೋಕುಲ್ ರೋಡ್ (Crime News) ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅನಾಥರಾದ ಮಕ್ಕಳು: ಯಾರು ಹೊಣೆ?
ಈ ಘಟನೆಯಿಂದಾಗಿ ಇಡೀ ಏರಿಯಾವೇ ಸ್ತಬ್ದವಾಗಿದೆ. ಹಸಿಬಿಸಿ ಮಾಂಸದ ಮುದ್ದೆಯಂತಿರುವ ಇಬ್ಬರು ಮಕ್ಕಳಿಗೆ ತಮ್ಮ ತಾಯಿ ಇನ್ನಿಲ್ಲ, (Crime News) ತಂದೆ ಕೊಲೆಗಡುಕ ಎಂಬ ಕಹಿ ಸತ್ಯ ಇನ್ನೂ ಅರಿವಾಗಿಲ್ಲ. ಸಾಲದ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಬದಲು ಆಕ್ರೋಶಕ್ಕೆ ಬಲಿಯಾದ ಇರ್ಫಾನ್, ತನ್ನ ಸುಂದರ ಸಂಸಾರವನ್ನು ತಾನೇ ಸ್ಮಶಾನ ಮಾಡಿಕೊಂಡಿದ್ದಾನೆ.
