Monday, June 30, 2025
HomeStateCP Yogeshwar: ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ್ರಾ ಅಭ್ಯರ್ಥಿ ಸಿಪಿ ಯೋಗೇಶ್ವರ್?

CP Yogeshwar: ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ್ರಾ ಅಭ್ಯರ್ಥಿ ಸಿಪಿ ಯೋಗೇಶ್ವರ್?

CP Yogeshwar – ಕರ್ನಾಟಕ ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕದನವಾಗಿದ್ದ ಚನ್ನಪಟ್ಟಣದಲ್ಲಿ ಮತದಾನ ಮುಗಿದಿದ್ದು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಸದ್ಯ ಎಲ್ಲರ ಚಿತ್ತ ಈ ಕ್ಷೇತ್ರದ ರಿಸಲ್ಟ್ ಮೇಲೆ ಬಿದಿದ್ದೆ. ಚನ್ನಪಟ್ಟಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಸಿಪಿ ಯೋಗೇಶ್ವರ್‍ (CP Yogeshwar)  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಮಾತನಾಡಿರುವ ಮಾತುಗಳನ್ನು ಕೇಳಿದರೇ ಫಲಿತಾಂಶ ಬರುವುದಕ್ಕೂ ಮುನ್ನಾ ಸೋಲನ್ನು ಒಪ್ಪಿಕೊಂಡರೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಚೆನ್ನಪಟ್ಟಣದಲ್ಲಿ ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಗೆಲ್ಲುತ್ತಾರೆ. ಬಿಜೆಪಿ-ಜೆಡಿಎಸ್ ಕೆಲಸ ತುಂಬಾನೆ ವರ್ಕೌಟ್ ಆಗಿದೆ. ಜೊತೆಗೆ ಜಮೀರ್‍ ಅಹಮದ್ ಕರಿಯ ಕುಮಾರಸ್ವಾಮಿ ಎಂಬ ಹೇಳಿಕೆ ಸೋಲಿನ ಕಾರಣವಾಗಬಹುದು ಎಂಬರ್ಥದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

CP Yogeshwar press meet about election 0

ಚನ್ನಪಟ್ಟಣದ (CP Yogeshwar) ಕಾಂಗ್ರೇಸ್ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಅದರಲ್ಲೂ ಸಿಎಂ, ಡಿಸಿಎಂ, ಸಚಿವರು ಹಾಗೂ ಡಿ.ಕೆ.ಸುರೇಶ್ ರವರಿಗೆ ಧನ್ಯವಾದ ತಿಳಿಸುತ್ತೇನೆ. ತನ್ನ ಮೊಮ್ಮಗ ಗೆಲ್ಲಲೇ ಬೇಕು ಅಂತಾ ದೇವೇಗೌಡರು ಹೋರಾಟಿದ್ದಾರೆ. ಕ್ಷೇತ್ರದಲ್ಲಿ ಸಮಬಲದ ಹೋರಾಟ ಅನ್ನಿಸುತ್ತದೆ. ಕೆಲವರ ಮಾತುಗಳು ಜನರ ಭಾವನೆಗೆ ಘಾಸಿಯಾಗಬಹುದು. ಸಚಿವ ಜಮೀರ್‍ ಆಡಿದ ಮಾತಿನಿಂದ ಮುಸ್ಲೀಂರ ಮತಗಳು ಬಂದರೂ, ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅಂತಾ ಅನ್ನಿಸುತ್ತದೆ ಎಂದು ಜಮೀರ್‍ ಅಹಮದ್ ಖಾನ್ ಕರಿಯಾ ಕುಮಾರಸ್ವಾಮಿ ಎಂಬ ಹೇಳಿಕೆಯ ಕುರಿತು ಅಸಮಾಧಾನ ಹೊರಹಾಕಿದರು.

ಇನ್ನೂ ಚನ್ನಪಟ್ಟಣದಲ್ಲಿ (CP Yogeshwar)  ಬಿಜೆಪಿ-ಜೆಡಿಎಸ್ ಕೆಲಸ ಚೆನ್ನಾಗಿಯೇ ವರ್ಕೌಟ್ ಆಗಿದೆ. ಇಲ್ಲಿ ನಾವೇ ಬಿಜೆಪಿ ಕಾರ್ಯಕರ್ತರನ್ನು ಕಟ್ಟಿದ್ದೇವೆ. ಇದುವರೆಗೂ ತೆಗೆದುಕೊಂಡಿರುವ ಗರಿಷ್ಟ ಮತಗಳು 85 ಸಾವಿರ. ಈ ಬಾರಿ ಗೆಲ್ಲಬೇಕಾದರೇ 1 ಲಕ್ಷ ಮತ ತೆಗೆದುಕೊಳ್ಳಬೇಕು. ನಾನು ಸೋತಿದ್ದೇನೆ ಅಂತಾ ಹೇಳ್ತಾಇಲ್ಲ. ಈ ಬಾರಿ ಸಮಬಲದ ಹೋರಾಟ ಇರುತ್ತದೆ. (CP Yogeshwar)  ಒಕ್ಕಲಿಗ ಮತ ಕ್ರೋಢಿಕರಣ ಆಗಿದ್ದರೇ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ನಿಖಿಲ್ ಕುಮಾರಸ್ವಾಮಿ ಆರ್ಭಟ ಸಹ ಜೋರಾಗಿತ್ತು. ಜೊತೆಗೆ ಅವರ ಸಮುದಾಯದ ಜನರು ಕ್ಷೇತ್ರದಲ್ಲಿದ್ದುಕೊಂಡು ಕೆಲಸ ಮಾಡಿದರು. ನಾನು ಸೇರಿದಂತೆ ಡಿ.ಕೆ.ಶಿವಕುಮಾರ್‍, ಡಿ.ಕೆ.ಸುರೇಶ್ ರವರೂ ಒಕ್ಕಲಿಗರಾಗಿದ್ದರೂ ನಮ್ಮ ಜನ ಇನ್ನೂ ಅವರಿಗೆ ಅಂಟಿಕೊಂಡು ಕೂತಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸಿ.ಪಿ.ಯೋಗೇಶ್ವರ್‍ ರವರ (CP Yogeshwar)  ಮಾತುಗಳನ್ನು ಕೇಳಿದರೇ ಅವರು ಪರೋಕ್ಷವಾಗಿ ಸೋಲಿನ ಸುಳಿವು ಕೊಟ್ಟಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular