HomeStateCrime News : ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ್ಲಾ ವಿವಾಹಿತೆ? ಪತಿ ಸೇರಿ ಮೂವರ ವಿರುದ್ಧ ಎಫ್‌.ಐ.ಆರ್...

Crime News : ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ್ಲಾ ವಿವಾಹಿತೆ? ಪತಿ ಸೇರಿ ಮೂವರ ವಿರುದ್ಧ ಎಫ್‌.ಐ.ಆರ್ ದಾಖಲು

25 ವರ್ಷದ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತೆಯನ್ನು (Crime News) ವರಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಈ ಸಂಬಂಧ ಗುಡಿಬಂಡೆ ವ್ಯಾಪ್ತಿಯ ಪರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಿಣೆಗಾಗಿ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

Crime news report of 25-year-old married woman Varalakshmi who died after alleged dowry harassment in Chikkaballapur

Crime News – ಘಟನೆಯ ವಿವರ

ಮೃತ ವರಲಕ್ಷ್ಮಿಯ ತಂದೆ ನರಸಿಂಹಪ್ಪ (ಪಾಪನಾಯಕನಹಳ್ಳಿ, ಬಾಗೇಪಲ್ಲಿ ತಾಲೂಕು) ನೀಡಿರುವ ದೂರಿನ ಪ್ರಕಾರ, ಕಳೆದ 3 ವರ್ಷಗಳ ಹಿಂದೆ ಆರ್. ಚೊಕ್ಕನಹಳ್ಳಿ ಗ್ರಾಮದ ಗಂಗಪ್ಪ ಅವರ ಪುತ್ರ ಗಂಗರಾಜು ಜೊತೆ ವರಲಕ್ಷ್ಮಿಯ ವಿವಾಹ ನಡೆದಿತ್ತು. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ನೀಡಲಾಗಿತ್ತಂತೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸೈಟ್ ಖರೀದಿಸಲು ತವರು ಮನೆಯಿಂದ ಹಣ ತರುವಂತೆ ಪತಿ ಗಂಗರಾಜು, ಮಾವ ಗಂಗಪ್ಪ ಹಾಗೂ ಅತ್ತೆ ನರಸಮ್ಮ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಹಣ ತರದಿದ್ದರೆ ದೈಹಿಕ ಹಲ್ಲೆ ನಡೆಸಿ (Crime News) ವರಲಕ್ಷ್ಮಿಯನ್ನು ತವರು ಮನೆಗೆ ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾವಿನ ಸುತ್ತ ಅನುಮಾನ

ಮಾರ್ಚ್ 7 ರಂದು ಸಹ ಹಣ ತರಲು ಒತ್ತಾಯಿಸಿ ಪತಿ ಹಾಗೂ ಅತ್ತೆ-ಮಾವ ವರಲಕ್ಷ್ಮಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಮಾರ್ಚ್ 8ರಂದು ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ (Crime News) ವರಲಕ್ಷ್ಮಿಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲಕ್ಷ್ಮಿನಾರಾಯಣಪ್ಪ ಅವರು ನರಸಿಂಹಪ್ಪ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

Crime news report of 25-year-old married woman Varalakshmi who died after alleged dowry harassment in Chikkaballapur

ಇದನ್ನೂ ಓದಿ : ಪ್ರೀತಿ ನಂಬಿ ಮತಾಂತರಗೊಂಡ ಮಹಿಳೆಗೆ ಪತಿಯಿಂದಲೇ ವಂಚನೆ; ಶ್ರೀದೇವಿ ಈಗ ಹಬೀಬಾ ಆದ ಕರುಣಾಜನಕ ಕಥೆ!

ತಕ್ಷಣ ಆಸ್ಪತ್ರೆಗೆ ಧಾವಿಸಿದ ತಂದೆ ನರಸಿಂಹಪ್ಪ ಅವರು ನೋಡಿದಾಗ ವರಲಕ್ಷ್ಮಿ ಮೃತಪಟ್ಟಿರುವುದು ತಿಳಿದುಬಂದಿದೆ. ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ತಮ್ಮ ಮಗಳನ್ನು (Crime News) ಕೊಲೆ ಮಾಡಲಾಗಿದೆ ಎಂದು ನರಸಿಂಹಪ್ಪ ಗಂಭೀರ ಆರೋಪ ಮಾಡಿದ್ದಾರೆ.  ಈ ಕುರಿತು ತಂದೆಯ ದೂರಿನ ಆಧಾರದ ಮೇಲೆ ಪರೇಸಂದ್ರ ಪೊಲೀಸರು ಪ್ರಮುಖ ಆರೋಪಿಗಳಾದ ಗಂಗರಾಜು (ಪತಿ), ಗಂಗಪ್ಪ (ಮಾವ) ಮತ್ತು ನರಸಮ್ಮ (ಅತ್ತೆ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular