PSI Wife – ಬೆಂಗಳೂರಿನ HBR ಲೇಔಟ್ನಲ್ಲಿ (HBR Layout Bengaluru) ನಡೆದ ಒಂದು ದುರದೃಷ್ಟಕರ ಘಟನೆಯಲ್ಲಿ ಸಬ್ ಇನ್ಸ್ಪೆಕ್ಟರ್ (PSI) ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಅವರ ಪತ್ನಿ ಶಾಲಿನಿ (Shalini Suicide News) ಅವರೇ ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ಈ ಘಟನೆ ನಡೆದಿದ್ದು, ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
PSI Wife – ಹೈಸ್ಕೂಲ್ ಪ್ರೀತಿ, ಮೊದಲ ಪತಿಗೆ ಡಿವೋರ್ಸ್: ಶಾಲಿನಿ ಕಥೆ ಏನು?
ಶಾಲಿನಿ ಮತ್ತು PSI ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಇವರು ಹೈಸ್ಕೂಲ್ನಲ್ಲಿ ಟ್ಯೂಷನ್ ಸ್ನೇಹಿತರಾಗಿದ್ದರು. ನಂತರ ಶಾಲಿನಿ MSc ಪದವಿ ಪಡೆದರೆ, ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು. ಬೆಂಗಳೂರಿನಲ್ಲಿ ನಾಗರಾಜ್ PSI ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ಗೆ ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದ ಶಾಲಿನಿ, ಅವರ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದ್ದರು. ಇದೇ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು.
ನಾಗರಾಜ್ ಅವರನ್ನು ಮದುವೆಯಾಗಲು ಶಾಲಿನಿ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಶಾಲಿನಿಗೆ ಈಗಾಗಲೇ 7 ವರ್ಷದ ಮಗುವಿದೆ ಎಂಬುದು ಗಮನಿಸಬೇಕಾದ ಅಂಶ. ಇಷ್ಟೆಲ್ಲಾ ತ್ಯಾಗ ಮಾಡಿ ಪ್ರೀತಿಸಿದ ವ್ಯಕ್ತಿಗಾಗಿ ಎರಡನೇ ಮದುವೆಯಾಗಿದ್ದರೂ, ಶಾಲಿನಿ ಯಾಕೆ ಈ ನಿರ್ಧಾರಕ್ಕೆ ಬಂದರು ಎಂಬುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ.
PSI Wife – ಪ್ರೀತಿ, ಮೋಸ ಮತ್ತು ಸಂಸಾರದಲ್ಲಿ ಬಿರುಕು
2020ರಲ್ಲಿ ನಾಗರಾಜ್ PSI ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಶಾಲಿನಿಯನ್ನು ದೂರವಿಡಲು ಶುರು ಮಾಡಿದ್ದರಂತೆ. ಇದರಿಂದ ಬೇಸರಗೊಂಡ ಶಾಲಿನಿ, ಮದುವೆಯಾಗದೆ ಮೋಸ ಮಾಡುತ್ತಿದ್ದಾರೆಂದು ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ವಿರುದ್ಧ ದೂರು ನೀಡಿದ್ದರು. ಆಗ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ನಂತರ, ಶಾಲಿನಿ ಕುಟುಂಬಸ್ಥರ ವಿರೋಧದ ನಡುವೆಯೂ 2024ರ ಆಗಸ್ಟ್ನಲ್ಲಿ ನಾಗರಾಜ್ ಮತ್ತು ಶಾಲಿನಿ ಮದುವೆಯಾಗಿದ್ದು, HBR ಲೇಔಟ್ನಲ್ಲಿ ವಾಸವಾಗಿದ್ದರು.
PSI Wife – ಮನಸ್ತಾಪ, ಆತ್ಮಹತ್ಯೆ ಯತ್ನ ಮತ್ತು ದುರಂತ ಅಂತ್ಯ
ಆದರೆ, ಕಳೆದ ಎರಡು ತಿಂಗಳಿಂದ ಶಾಲಿನಿ ಮತ್ತು ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ಬೇಸತ್ತು ನಾಗರಾಜ್ ಬೇರೆಡೆ ವಾಸವಾಗಿದ್ದರು ಎನ್ನಲಾಗಿದೆ. ಪತಿ ಮನೆಗೆ ಬರುತ್ತಿಲ್ಲ ಎಂದು ಕೋಪಗೊಂಡ ಶಾಲಿನಿ ನಿನ್ನೆ ರಾತ್ರಿ ನಾಗರಾಜ್ಗೆ ಕರೆ ಮಾಡಿ, ರೈಲಿಗೆ ಸಿಕ್ಕಿ ಸಾಯುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ಅವರನ್ನು ರಕ್ಷಿಸಿ ಮನೆಗೆ ತಲುಪಿಸಿದ್ದರು. ಆದರೆ, ಹೊಯ್ಸಳ ಸಿಬ್ಬಂದಿ ತೆರಳಿದ ತಕ್ಷಣವೇ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read this also : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!
ಈ ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ PSI ನಾಗರಾಜ್ ಅವರನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿ, ವಿಶ್ವಾಸ, ತ್ಯಾಗಗಳ ಕಥೆಯೊಂದು ಹೀಗೆ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ. ಈ ಪ್ರಕರಣದ ಸಂಪೂರ್ಣ ಸತ್ಯ ಇನ್ನಷ್ಟೇ ಹೊರಬರಬೇಕಿದೆ.