ಹೆತ್ತವರು ಮಕ್ಕಳ ಏಳಿಗೆಗಾಗಿ ಇಡೀ ಜೀವನವನ್ನೇ ಸವೆಸುತ್ತಾರೆ. ಆದರೆ, ಅದೇ ಮಕ್ಕಳು ತಮಗೆ ಇಷ್ಟವಿಲ್ಲದ ಹಾದಿ ಹಿಡಿದಾಗ ಆ ನೋವು ಆಕ್ರೋಶವಾಗಿ ಸ್ಫೋಟಗೊಳ್ಳುತ್ತದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಿಲ್ಲಾರಿ ಕುಪ್ಪಂ ಗ್ರಾಮದಲ್ಲಿ ಇಂತಹದ್ದೇ ಒಂದು ಕರುಣಾಜನಕ ಘಟನೆ ನಡೆದಿದೆ. ಪ್ರೀತಿಗಾಗಿ (Love Marriage) ಮನೆಯವರನ್ನು ಎದುರು ಹಾಕಿಕೊಂಡ ಮಗಳ ವಿರುದ್ಧ ಹೆತ್ತವರು ತೆಗೆದುಕೊಂಡ ನಿರ್ಧಾರ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
Love Marriage – ಪ್ರೀತಿ ಮತ್ತು ಸಂಪ್ರದಾಯದ ನಡುವೆ ಶುರುವಾದ ಸಂಘರ್ಷ
ಸುಬ್ರಹ್ಮಣ್ಯಂ ರೆಡ್ಡಿ ಮತ್ತು ಉಷಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಕಿರಿಯ ಮಗಳು ಹೇಮಪ್ರಿಯ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಳು. ಇದೇ ವೇಳೆ ಆಕೆಗೆ ಅದೇ ಗ್ರಾಮದ ಕಿಶೋರ್ ಎಂಬ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಮಗಳ ಈ ಪ್ರೇಮ ವಿಷಯ ಪೋಷಕರಿಗೆ ತಿಳಿದಾಗ ಮನೆಯಲ್ಲಿ ಭಿನ್ನಾಭಿಪ್ರಾಯ ಶುರುವಾಯಿತು. ಇಬ್ಬರ (Love Marriage) ಜಾತಿ ಒಂದೇ ಆಗಿದ್ದರೂ, ಮಗಳು ಇನ್ನೂ ಓದುತ್ತಿದ್ದಾಳೆ ಮತ್ತು ಹಿರಿಯ ಮಗಳ ಮದುವೆಗೂ ಮುನ್ನವೇ ಈಕೆ ಮದುವೆಯಾಗುವುದು ಸರಿಯಲ್ಲ ಎಂಬುದು ಪೋಷಕರ ವಾದವಾಗಿತ್ತು.
ಹೆತ್ತವರನ್ನು ಬಿಟ್ಟು ಪ್ರಿಯಕರನ ಕೈಹಿಡಿದ ಮಗಳು
ಪೋಷಕರು ಮದುವೆಗೆ ಒಪ್ಪದಿದ್ದಾಗ ಹೇಮಪ್ರಿಯ ಒಂದು ಕಠಿಣ ನಿರ್ಧಾರ ತೆಗೆದುಕೊಂಡಳು. ಕಳೆದ ಫೆಬ್ರವರಿ 4ರಂದು ಮನೆಯಿಂದ ಯಾರಿಗೂ ಹೇಳದೆ ಹೊರಬಂದ ಆಕೆ, ಕಾಣಿಪಾಕಂ ದೇವಾಲಯದಲ್ಲಿ ತನ್ನ (Love Marriage) ಪ್ರಿಯಕರ ಕಿಶೋರ್ನನ್ನು ವಿವಾಹವಾದಳು. ಈ ವಿಷಯ ತಿಳಿದ ಪೋಷಕರು ಮಾನಸಿಕವಾಗಿ ಜರ್ಜರಿತರಾದರು. ಅತಿಯಾದ ಪ್ರೀತಿಯಿಂದ ಸಾಕಿದ ಮಗಳು ತಮಗೆ ಮುಖಭಂಗ ಮಾಡಿದ್ದಾಳೆ ಎಂಬ ನೋವು ಅವರನ್ನು ಕಾಡತೊಡಗಿತು. Read this also : ಹೆತ್ತ ತಾಯಿಯನ್ನೇ ಮೃಗೀಯವಾಗಿ ಥಳಿಸಿದ ಪಾಪಿ ಮಗ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮಗನ ಅಸಲಿ ಕ್ರೌರ್ಯ!
ಬದುಕಿರುವ ಮಗಳ ಫೋಟೋ ಇಟ್ಟು ಶಾಸ್ತ್ರೋಕ್ತ ಕರ್ಮಕಾಂಡ
ಮಗಳ ವರ್ತನೆಯಿಂದ ಆಘಾತಕ್ಕೊಳಗಾದ ಸುಬ್ರಹ್ಮಣ್ಯಂ ದಂಪತಿ ವಿಚಿತ್ರ ನಿರ್ಧಾರವೊಂದನ್ನು ಕೈಗೊಂಡರು. “ನಮ್ಮ ಮಾತು ಕೇಳದ ಮಗಳು ನಮಗೆ ಸತ್ತಂತೆಯೇ” ಎಂದು ಘೋಷಿಸಿದ ಅವರು, ಗ್ರಾಮಸ್ಥರ ಸಮ್ಮುಖದಲ್ಲಿ ಮಗಳ ಫೋಟೋಗೆ ಹಾರ ಹಾಕಿ ಶ್ರಾದ್ಧ ವಿಧಿವಿಧಾನಗಳನ್ನು ನೆರವೇರಿಸಿದರು. (Love Marriage) ಮಗಳು ಬದುಕಿದ್ದರೂ ಆಕೆಗೆ ಉತ್ತರಕ್ರಿಯೆಗಳನ್ನು ಮಾಡಿ, ಬಂಧು-ಮಿತ್ರರಿಗೆ ‘ಕರ್ಮ ಭೋಜನ’ವನ್ನೂ ಹಾಕಿಸಿದರು. ಈ ದೃಶ್ಯ ಕಂಡು ಗ್ರಾಮಸ್ಥರು ಮರುಗಿದರೂ, ಪೋಷಕರು ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ.
ಬದಲಾಗದ ಪೋಷಕರ ನಿರ್ಧಾರ ಮತ್ತು ಸಮಾಜದ ಚರ್ಚೆ
ಬದುಕಿರುವ (Love Marriage) ಮಗಳಿಗೆ ಇಂತಹ ಅಂತ್ಯಕ್ರಿಯೆಯ ಶಾಸ್ತ್ರಗಳನ್ನು ಮಾಡುವುದು ಸರಿಯಲ್ಲ ಎಂದು ಸುತ್ತಮುತ್ತಲ ಜನ ಎಷ್ಟೇ ತಿಳಿಹೇಳಿದರೂ ದಂಪತಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆಕೆ ತಮಗೆ ಸತ್ತಿದ್ದಾಳೆ, ಇನ್ಮುಂದೆ ಆಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕಣ್ಣೀರಿಡುತ್ತಲೇ ಆಕ್ರೋಶ ವ್ಯಕ್ತಪಡಿಸಿದರು. ಪ್ರೀತಿ ಮತ್ತು ಕುಟುಂಬದ ಗೌರವದ ನಡುವಿನ ಈ ಸಂಘರ್ಷ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.


