Monday, June 30, 2025
HomeNationalSad News: ಹಬ್ಬದ ದಿನ ದುರಂತ, ಕರ್ವಾ ಚೌತ್ ದಿನ ತಡವಾಗಿ ಬಂದ ಪತಿ ಜೊತೆ...

Sad News: ಹಬ್ಬದ ದಿನ ದುರಂತ, ಕರ್ವಾ ಚೌತ್ ದಿನ ತಡವಾಗಿ ಬಂದ ಪತಿ ಜೊತೆ ಗಲಾಟೆ, ಪತ್ನಿ ಆತ್ಮಹತ್ಯೆ, ಪತಿಯೂ ಆತ್ಮಹತ್ಯೆಗೆ ಶರಣು….!

Sad News – ಸಾವು ಹೇಗೆ ಯಾವಾಗ ಬರುತ್ತೇ ಅಂತಾ ಹೇಳೋಕೆ ಆಗೊಲ್ಲ. ಅದರಲ್ಲೂ ಕೆಲವರು ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಜೈಪುರದಲ್ಲಿ ನಡೆದಿದೆ. ಕರ್ವಾ ಚೌತ್ ದಿನದಂದು ಪತಿ ಮನೆಗೆ ತಡವಾಗಿ ಬಂದ ಕಾರಣದಿಂದ ಕೋಪಗೊಂಡ ಪತ್ನಿ ಆತ್ಮಹತ್ಯೆ (Sad News) ಮಾಡಿಕೊಂಡಿದ್ದಾಳೆ. ಪತ್ನಿಯ ಸಾವನ್ನು ಕಂಡ ಪತಿ ನೋವು ತಾಳಲಾರದೆ ಪತಿಯೂ ನೇಣಿಗೆ ಶರಣಾಗಿದ್ದಾರೆ. ರಾಜಸ್ಥಾನದ ಜೈಪುರ ವ್ಯಾಪ್ತಿಯ ಹರ್ಮಡಾ ಎಂಬಲ್ಲಿ (Sad News) ನಡೆದಿದೆ. ಮೋನಿಕಾ (35) ಘನಶ್ಯಾಮ್ ಬಂಕರ್‍ (38) ರವರು ಮೃತ ದುರ್ದೈವಿಗಳು.

couple sad end on karwa chauth 1

ಮಾಹಿತಿಯ ಪ್ರಕಾರ ಈ ಘಟನೆ ಕಳೆದ ಅ.20 ರಂದು ನಡೆದಿದೆ (Sad News) ಎನ್ನಲಾಗಿದೆ. ಕರ್ವಾ ಚೌತ್ ದಿನದಂದು ಪತಿ ಘನಶ್ಯಾಮ್ ಮನೆಗೆ ತಡವಾಗಿ ಬಂದಿದ್ದಾನೆ. ತಡವಾಗಿ ಬಂದಿದ್ದಕ್ಕೆ ಪತ್ನಿ ಮೋನಿಕಾ ಪತಿ ಘನಶ್ಯಾಮ್ ಜೊತೆಗೆ ಜಗಳವಾಡಿದ್ದಾಳೆ.  ಈ ಸಮಯದಲ್ಲಿ ಪತಿ ಘನಶ್ಯಾಮ್ ಪತ್ನಿಯ ಮನವೊಲಿಸಲು (Sad News) ಪ್ರಯತ್ನಿಸಿದ್ದಾನೆ. ಆದರೂ ಪತ್ನಿ ಮೋನಿಕಾ ಮಾತ್ರ ಕೋಪವನ್ನು ಬಿಡಲಿಲ್ಲ. ಮನೆಯಿಂದ ಹೊರ ಬಂದ ಪತ್ನಿ ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ಕಂಡ ಘನಶ್ಯಾಮ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (Sad News)ಪತ್ನಿಯ ಸಾವನ್ನು ಕಂಡು ಸಹಿಸಿಕೊಳ್ಳಲಾಗದೇ ಆಕೆಯ ಸೀರೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಇನ್ನೂ ಆತ್ಮಹತ್ಯೆಗೆ ಶರಣಾಗುವ ಮುನ್ನ ಘನಶ್ಯಾಮ್ ತನ್ನ (Sad News)ಸಹೋದರನಿಗೆ `ಸಹೋದರ ನಾನು ಸೋತಿದ್ದೇನೆ, ಕ್ಷಮಿಸಿ. ನೀವು ಗಣಪತ್ ಜೀ ಹಾಗೂ ಘನಶ್ಯಾಮ್ ಕಂಡೇಲ್ ಅವರೊಂದಿಗೆ ಮಾತನಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ. ನೀವು ಈಗ ನನ್ನ ಐಡಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿ ಕೊನೆಗೆ ನನ್ನ (Sad News) ಹೆಂಡತಿ ಬರುತ್ತಿರುವ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂದೇಶವನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular