Sunday, June 1, 2025
HomeStateSad News: ಮದುವೆಯಾಗುತ್ತಿರುವ ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹೃದಯಾಘಾತ…!

Sad News: ಮದುವೆಯಾಗುತ್ತಿರುವ ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹೃದಯಾಘಾತ…!

Sad News – ಹುಟ್ಟು ನಿಶ್ಚಿತ, ಸಾವು ಖಚಿತ ಎಂದು ಹೇಳಲಾಗುತ್ತದೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂಬುದುನ್ನು ಹೇಳೋಕೆ ಸಾಧ್ಯವೇ ಇಲ್ಲ. ಇತ್ತೀಚಿಗೆ ಖುಷಿಯಲ್ಲಿರುವಾಗಲೇ ಕುಸಿದು ಬಿದ್ದು ಅನೇಕರು (Sad News) ಸಾವನ್ನಪ್ಪಿದ್ದಾರೆ. ಸಂತೋಷದಿಂದ ಕುಣಿಯುತ್ತಿರುವಾಗ ಹೃದಯಾಘಾತವಾಗಿ ಸತ್ತಿರುವ ಘಟನೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯಾಗುತ್ತಿರುವ ಖುಷಿಯಲ್ಲಿದ್ದ ವರನಿಗೆ (Sad News) ಮದುವೆಯ ಚಪ್ಪರದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.

ಬೆಳಗಾವಿಯ (Belagavi)ಅಥಣಿ ತಾಲೂಕಿನ ಝಂಜರವಾಡ ಎಂಬ ಗ್ರಾಮದಲ್ಲಿ ಈ ದುರ್ಘಟನೆ (Sad News) ನಡೆದಿದೆ. ನಾಳೆ ಬೆಳಗಾದರೇ ಮದುವೆಯ ಖುಷಿಯಲ್ಲಿದ್ದ ವರ, ತನ್ನ ಮದುವೆ ಸಿದ್ದತೆಗಳನ್ನು (Sad News) ನೋಡುತ್ತಾ ಚಪ್ಪರದ ಕೆಳಗೆ ನಿಂತುಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಈ ಸಮಯದಲ್ಲಿ ಹೃದಯಾಘಾತವಾಗಿ ವರ ಮೃತಪಟ್ಟಿದ್ದಾನೆ. ಇನ್ನೇನು ಮದುವೆಗೆ ಒಂದು ದಿನ ಬಾಕಿಯಿರುವಾಗಲೇ (Sad News) ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಝಂಜರವಾಡ ಗ್ರಾಮದ ನಿವಾಸಿ (Sad News) ಸದಾಶಿವ ರಾಮಪ್ಪ ಹೋಸಲ್ಕಾರ (31) ಎಂದು ಗುರ್ತಿಸಲಾಗಿದೆ.

ಸೆ.5 ರಂದು ಮೃತನಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಮದುವೆ ದಿನಾಂಕ ನಿಗಧಿ ಮಾಡಿದ್ದರು. ಮದುವೆಯ ಕೆಲಸದ ಸಂಬಂಧ ದೂರವಾಣಿಯಲ್ಲಿ ಹೆಚ್ಚು ಮಾತನಾಡಿದ್ದಾನೆ. ಇದಾದ ಬಳಿಕ ಯುವತಿಯೊಂದಿಗೂ ಸಹ ಯುವಕ ಮದುವೆಯ ಸಿದ್ದತೆಯ ಬಗ್ಗೆ ಮಾತನಾಡಿದ್ದಾನೆ. ಪೋನ್ ನಲ್ಲಿ ಮಾತನಾಡುತ್ತಿರುವಾಗಲೇ ಯುವಕನಿಗೆ (Sad News)  ಹೃದಯಘಾತ ಸಂಭವಿಸಿದೆ. ಸ್ಥಳದಲ್ಲಿಯೇ ಯುವಕ ಮೃತಪಟ್ಟಿದ್ದಾನೆ. ಇನ್ನೂ ಮನೆಗೆ ಆಸರೆಯಾಗಿದ್ದ ಮಗನನ್ನು (Sad News) ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆ ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ. (Sad News) ಯುವಕನಿಗೆ ಹೃದಯಾಘಾತವಾದ ಕೂಡಲೇ ಅಥಣಿ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಯುವಕ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular