ಮನುಷ್ಯ ತಾನು ನೆಮ್ಮದಿಯಾಗಿರಲು ಪ್ರಕೃತಿಯ ವಿರುದ್ಧ ಮಾಡುವ ಸಣ್ಣ ತಪ್ಪುಗಳು ಕೆಲವೊಮ್ಮೆ ಸರಿಪಡಿಸಲಾಗದ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ. ತೆಲಂಗಾಣದ ಮುಲುಗು ಜಿಲ್ಲೆಯ ಗೋವಿಂದರಾವ್ (Telangana Boy Dies) ಪೇಟ ಮಂಡಲ ಕೇಂದ್ರದ ಎನ್ಟಿಆರ್ ಕಾಲೋನಿಯಲ್ಲಿ ಇಂತದ್ದೇ ಒಂದು ಘೋರ ಘಟನೆ ನಡೆದಿದೆ. ಮಂಗಗಳ ಹಾವಳಿಯಿಂದ ಮುಕ್ತಿ ಪಡೆಯಲು ಯಾರೋ ಹೂಡಿದ ಸಂಚು, ಇಂದು ನಾಲ್ಕು ವರ್ಷದ ಪುಟ್ಟ ಬಾಲಕನ ಪ್ರಾಣವನ್ನೇ ಬಲಿಪಡೆದಿದೆ.

Telangana Boy Dies – ಅಷ್ಟಕ್ಕೂ ನಡೆದಿದ್ದೇನು?
ಸ್ಥಳೀಯ ಆರ್.ಎಂ.ಪಿ ವೈದ್ಯರಾದ ಶ್ರವಣ್ ಎಂಬುವವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದನು. ಮನೆಯವರ ಕಣ್ಣಮಣಿಯಾಗಿದ್ದ ನಾಲ್ಕು ವರ್ಷದ ಅಶ್ವಿನಿ ನಂದನ್, ಆಟವಾಡುತ್ತಾ ತನ್ನ ಸ್ನೇಹಿತರೊಂದಿಗೆ ಮನೆಯ ಮುಂದಿರುವ ಪಲ್ಲೆ ಪ್ರಕೃತಿ ವನಕ್ಕೆ ಹೋಗಿದ್ದನು. ಅಲ್ಲಿ ಕೋತಿಗಳನ್ನು ಕೊಲ್ಲಲೆಂದೇ ವಿಷದ ಗುಳಿಗೆಗಳನ್ನು ಬೆರೆಸಿ ತಯಾರಿಸಿದ ಬಾಲಾಮೃತದ ಉಂಡೆಗಳನ್ನು ಇಡಲಾಗಿತ್ತು. ಪಾಪ, ಅದು ಮೃತ್ಯುವಿನ ರೂಪದಲ್ಲಿ ಬಂದ ವಿಷದ ಲಡ್ಡು ಎಂದು ಅರಿಯದ ಆ ಮಗು, ಅದನ್ನು ತಿನ್ನಬಹುದಾದ (Telangana Boy Dies) ಪ್ರಸಾದವೆಂದು ಭಾವಿಸಿ ಸೇವಿಸಿದ್ದಾನೆ. ಅವನ ಜೊತೆಗಿದ್ದ ಇನ್ನುಳಿದ ಮಕ್ಕಳು ಅದರಲ್ಲಿ ಏನೋ ಬೆರೆಸಲಾಗಿದೆ ಎಂದು ಸಂಶಯಗೊಂಡು ಬಿಸಾಡಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಬಾಲಕ
ವಿಷದ ಲಡ್ಡು ಸೇವಿಸಿದ ತಕ್ಷಣ ಅಶ್ವಿನಿ ನಂದನ್ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಮಗುವಿನ ಪರಿಸ್ಥಿತಿ ಕಂಡು ಗಾಬರಿಗೊಂಡ ಪೋಷಕರು ತಕ್ಷಣವೇ ಆತನನ್ನು ವಾರಂಗಲ್ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿಷವು ಮಗುವಿನ ದೇಹವಿಡೀ ಹರಡಿದ್ದರಿಂದ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ (Telangana Boy Dies) ಸಾವನ್ನಪ್ಪಿದ್ದಾನೆ. ಕೇವಲ ನಾಲ್ಕು ವರ್ಷಕ್ಕೆ ಆ ಬಾಲಕನ ನೂರಾರು ಕನಸುಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ. Read this also : ‘ನನ್ನನ್ನು ಉಳಿಸಿ ಅಂಕಲ್!’: ಒಂದೇ ಒಂದು ಪೇರಲ ಹಣ್ಣು ಕೀಳಿದ್ದಕ್ಕೆ 4 ವರ್ಷದ ಬಾಲಕಿಯನ್ನು ಸರಪಳಿಯಿಂದ ಕಟ್ಟಿಹಾಕಿದ ನಿವೃತ್ತ ಯೋಧ!
ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು
ಈ ದಾರುಣ ಘಟನೆಗೆ ಗ್ರಾಮ ಪಂಚಾಯತ್ ಸಿಬ್ಬಂದಿಯೇ ನೇರ ಕಾರಣ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಮಂಗಗಳನ್ನು ಹತೋಟಿ ಮಾಡಲು ಇಂತಹ ಅಪಾಯಕಾರಿ ವಿಷದ ಗುಳಿಗೆಗಳನ್ನು ಸಾರ್ವಜನಿಕ ಉದ್ಯಾನವನದಲ್ಲಿ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಕೋತಿಗಳನ್ನು ಹತೋಟಿ ಮಾಡಲು ಸಾಕಷ್ಟು ಮಾರ್ಗಗಳಿದ್ದರೂ, ಇಂತಹ ಅಮಾನವೀಯ ಕೃತ್ಯಕ್ಕೆ ಕೈ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು (Telangana Boy Dies) ಪ್ರಾಣಿ ಪ್ರೇಮಿಗಳು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪೊಲೀಸ್ ತನಿಖೆ ಮತ್ತು ಮುಂದಿನ ಕ್ರಮ
ಮಗುವನ್ನು ಕಳೆದುಕೊಂಡ ಪೋಷಕರ (Telangana Boy Dies) ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕೃತ್ಯದಲ್ಲಿ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಕೇವಲ ಒಂದು ಅಪಘಾತವಲ್ಲ, ಬೇಜವಾಬ್ದಾರಿತನದ ಪರಮಾವಧಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಮತ್ತು ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸುವುದು ಅನಿವಾರ್ಯವಾಗಿದೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
