ಪವಿತ್ರವಾದ ತಂದೆ-ಮಗಳ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ಆಂಧ್ರಪ್ರದೇಶದ ಮಾರ್ಕಾಪುರ ಜಿಲ್ಲೆಯಲ್ಲಿ ಸಂಭವಿಸಿದೆ. ತನ್ನ ಅಕ್ರಮ (Father Kills Daughter) ಸಂಬಂಧದ ವಿಷಯ ಯಾರಿಗೂ ತಿಳಿಯಬಾರದು ಎಂಬ ಸ್ವಾರ್ಥಕ್ಕಾಗಿ ಸ್ವಂತ ಮಗಳನ್ನೇ ಪ್ರಿಯತಮೆಯೊಂದಿಗೆ ಸೇರಿ ತಂದೆಯೊಬ್ಬ ಹತ್ಯೆ ಮಾಡಿರುವ ಘೋರ ಘಟನೆ ತ್ರಿಪುರಾಂತಕಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದು ಕೇವಲ ಒಂದು ಕೊಲೆಯಲ್ಲ, ನಂಬಿಕೆಯ ಕತ್ತು ಹಿಸುಕಿದ ಘಟನೆಯಾಗಿದೆ.

Father Kills Daughter – ವಿವಾಹೇತರ ಸಂಬಂಧ ಮತ್ತು ಹುಟ್ಟಿಕೊಂಡ ಭಯ
ತ್ರಿಪುರಾಂತಕಂ ಗ್ರಾಮದ ನಿವಾಸಿಯಾದ ಮೋಟುಕಟ್ಲ ಶಿವಾರೆಡ್ಡಿ ಎಂಬಾತ ಕಳೆದ ಕೆಲವು ಸಮಯದಿಂದ ಬಾಜಿಬೀ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಷಯ ಶಿವಾರೆಡ್ಡಿಯ ಮಗಳಾದ ತುಳಸಿ ವಂದನಾಳಿಗೆ ತಿಳಿಯಿತು. ತನ್ನ ತಂದೆಯ ಈ ನಡವಳಿಕೆಯನ್ನು ಮಗಳು ಗಮನಿಸುತ್ತಿರುವುದು ಶಿವಾರೆಡ್ಡಿಗೆ ನುಂಗಲಾರದ ತುತ್ತಾಯಿತು. ಮಗಳು ಈ ವಿಷಯವನ್ನು ತನ್ನ ತಾಯಿ ಈಶ್ವರಮ್ಮ ಅಥವಾ ಇತರ ಸಂಬಂಧಿಕರಿಗೆ ತಿಳಿಸಿದರೆ ತನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಆತ ಭಯಗೊಂಡಿದ್ದನು. ಇದೇ ಕಾರಣಕ್ಕೆ ಮಗಳನ್ನೇ ಲೋಕದಿಂದ ಕಳುಹಿಸಲು ಆತ ನಿರ್ಧರಿಸಿದನು.
ಪ್ರಿಯತಮೆಯ ಮನೆಯಲ್ಲಿ ನಡೆದ ಭೀಕರ ಹತ್ಯೆ
ಮಗಳನ್ನು ಕೊಲ್ಲಲು ಶಿವಾರೆಡ್ಡಿ ತನ್ನ ಪ್ರಿಯತಮೆ ಬಾಜಿಬೀ ಜೊತೆಗೂಡಿ ಪಕ್ಕಾ ಸ್ಕೆಚ್ ಹಾಕಿದ್ದನು. ಯೋಜನೆಯಂತೆ ಮಗಳನ್ನು ಬಾಜಿಬೀ ಮನೆಗೆ ಕರೆದೊಯ್ದ ಇಬ್ಬರೂ ಸೇರಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ. ಬಾಲಕಿಯ (Father Kills Daughter) ಬಾಯಿಗೆ ಬಟ್ಟೆ ತುರುಕಿ ಆಕೆ ಕಿರುಚದಂತೆ ತಡೆದಿದ್ದಾರೆ. ನಂತರ ಕೈಕಾಲುಗಳನ್ನು ಕಟ್ಟಿ ಹಾಕಿ, ಕಬ್ಬಿಣದ ತಂತಿಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಮಗಳ ಪ್ರಾಣ ಹೋಗುವವರೆಗೂ ಆ ಕಟುಕ ತಂದೆಗೆ ಮರುಕವೇ ಉಂಟಾಗಲಿಲ್ಲ ಎಂಬುದು ದುರದೃಷ್ಟಕರ.
ಮಗಳ ಶವ ಕಂಡು ತಾಯಿಯ ಆಕ್ರಂದನ
ಮಗಳು ಮನೆಯಲ್ಲಿ ಕಾಣದಿದ್ದಾಗ ಆತಂಕಕ್ಕೊಳಗಾದ ತಾಯಿ ಈಶ್ವರಮ್ಮ ಹಾಗೂ ಸಂಬಂಧಿಕರು ಅಕ್ಕಪಕ್ಕದ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪಕ್ಕದ ಮನೆಯಾದ ಬಾಜಿಬೀ ಮನೆಗೆ ಬೀಗ ಹಾಕಿರುವುದನ್ನು (Father Kills Daughter) ಕಂಡು ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ತುಳಸಿ ನಿರ್ಜೀವವಾಗಿ ಬಿದ್ದಿರುವುದನ್ನು ಕಂಡು ತಾಯಿ ಕಣ್ಣೀರು ಹಾಕಿದ ದೃಶ್ಯ ನೋಡಿದವರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ಕೂಡಲೇ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

Read this also : ಕ್ಷಣಿಕ ಸುಖಕ್ಕೆ ಅನಾಥರಾದ ಮಕ್ಕಳು: ಪತಿಯನ್ನು ಮುಗಿಸಿ ಜೈಲು ಪಾಲಾದ ರಾಕ್ಷಸಿ ತಾಯಿ!
ಪೊಲೀಸ್ ತನಿಖೆ ಮತ್ತು ಆರೋಪಿಗಳ ಬಂಧನ
ದೂರು ದಾಖಲಿಸಿಕೊಂಡ (Father Kills Daughter) ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಶಿವಾರೆಡ್ಡಿ ಮತ್ತು ಆತನ ಪ್ರಿಯತಮೆಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ವೇಳೆ ಇಬ್ಬರೂ ಸೇರಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಪೊಲೀಸರು ಆರೋಪಿ ಶಿವಾರೆಡ್ಡಿಯನ್ನು ಠಾಣೆಗೆ ಕರೆದೊಯ್ಯುವಾಗ ಮೃತ ಬಾಲಕಿಯ ಚಿಕ್ಕಮ್ಮ ಆಕ್ರೋಶ ತಡೆಯಲಾಗದೆ ಆತನನ್ನು ಚಪ್ಪಲಿಯಿಂದ ಹೊಡೆಯುತ್ತಾ ಪೊಲೀಸ್ ಠಾಣೆಯವರೆಗೂ ಹಿಂಬಾಲಿಸಿದರು. ಸದ್ಯ ಪೊಲೀಸರು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
