ಭಕ್ತಿ ಎನ್ನುವುದು ಕೇವಲ ಪೂಜೆಗೆ ಸೀಮಿತವಾಗದೆ, ಅದು ಮನುಷ್ಯನ ಸಂಸ್ಕಾರ ಮತ್ತು ಸಮಾಜದ ಸೌಹಾರ್ದತೆಗೆ ದಾರಿಯಾಗಬೇಕು ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಈ ಕಾರ್ಯಕ್ರಮ (Shiva Bilvarchane) ಸಾಕ್ಷಿಯಾಯಿತು. ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಮೂಹಿಕ ಶಿವ ಬಿಲ್ವಾರ್ಚನಾ ಪೂಜಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಸಾಮೂಹಿಕ ಶಿವ ಬಿಲ್ವಾರ್ಚನೆ’ ಮತ್ತು ಧಾರ್ಮಿಕ ಸಭೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.

Shiva Bilvarchane – “ದುಡ್ಡಿದ್ದರೆ ಸಾಲದು, ಸಂಸ್ಕಾರವಿರಲಿ”: ಶ್ರೀ ನರೋತ್ತಮಾನಂದ ಸ್ವಾಮೀಜಿ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಾಗೇಪಲ್ಲಿಯ ಆನಂದಾಶ್ರಮದ ಶ್ರೀ ಶ್ರೀ ಶ್ರೀ ನರೋತ್ತಮಾನಂದ ಸ್ವಾಮೀಜಿ ಅವರು ತಮ್ಮ ಆಶೀರ್ವಚನದ ಮೂಲಕ ನೆರೆದಿದ್ದ ಭಕ್ತರ ಮನ ಗೆದ್ದರು. “ಇಂದಿನ ಕಾಲದಲ್ಲಿ ಕೇವಲ ವಿದ್ಯೆ ಅಥವಾ ಪದವಿ ಇದ್ದರೆ ಸಾಲದು, ಅದರ ಜೊತೆಗೆ ವಿನಯ, ತಾಳ್ಮೆ ಮತ್ತು ಉತ್ತಮ ಸಂಸ್ಕಾರವಿದ್ದಾಗ ಮಾತ್ರ ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯ. ಅನೇಕರ ಬಳಿ ಕೋಟ್ಯಂತರ ಹಣವಿರಬಹುದು, ಆದರೆ ಸಂಸ್ಕಾರವಿಲ್ಲದಿದ್ದರೆ ಆ ಹಣಕ್ಕೆ ಬೆಲೆಯಿಲ್ಲ. ಸಂಸ್ಕಾರವೇ ನಮ್ಮ ವ್ಯಕ್ತಿತ್ವದ ಕನ್ನಡಿ. ನಾವೆಲ್ಲರೂ ಸಂಸ್ಕಾರಯುತ ಜೀವನ ನಡೆಸಿ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ” ಎಂದು ಅವರು ಕರೆ ನೀಡಿದರು.
ಮನೆಮನ ಬೆಳಗಿದ ಧರ್ಮಸ್ಥಳ ಯೋಜನೆ: ಜಿಲ್ಲಾ ನಿರ್ದೇಶಕ ಪ್ರಶಾಂತ್
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಮಾತನಾಡಿ, “ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ಈ ಸಂಸ್ಥೆಯು ಇಂದು ಲಕ್ಷಾಂತರ ಕುಟುಂಬಗಳಲ್ಲಿ (Shiva Bilvarchane) ಹೊಸ ಭರವಸೆ ಮೂಡಿಸಿದೆ. ಜಾತಿ-ಮತದ ಭೇದವಿಲ್ಲದೆ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಈ ಯೋಜನೆಗೆ ಪ್ರತಿಯೊಬ್ಬ ಸದಸ್ಯರೂ ಮಾಲೀಕರೇ” ಎಂದು ಯೋಜನೆಯ ಮಹತ್ವವನ್ನು ವಿವರಿಸಿದರು.

ಸೌಹಾರ್ದತೆಯ ಪ್ರತಿರೂಪವಾಗಿ ಗುಡಿಬಂಡೆ
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದು ಅಲ್ಲಿ ಕಂಡುಬಂದ ಸೌಹಾರ್ದತೆ. ಪೂಜಾ ಸಮಿತಿಯ ಸದಸ್ಯರಾದ ಅಪ್ಸರ್ ಪಾಷಾ ಅವರು ಮಾತನಾಡಿ, “ಗುಡಿಬಂಡೆಯಲ್ಲಿ ನಾವು ಮೊದಲಿನಿಂದಲೂ (Shiva Bilvarchane) ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ಧರ್ಮಸ್ಥಳ ಸಂಸ್ಥೆಯು ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ನಡುವಿನ ಈ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು. Read this also : ಲಿಂಗ ರೂಪವಲ್ಲ, ಇಲ್ಲಿ ಶಿವನು ಮನುಷ್ಯ ರೂಪದಲ್ಲಿ ದರ್ಶನ ನೀಡುತ್ತಾನೆ! ಹೇಮಾವತಿ ಶಿವನ ವಿಗ್ರಹದ ಅಪರೂಪದ ವೈಶಿಷ್ಟ್ಯಗಳು..!
ಕಾರ್ಯಕ್ರಮದ ಗಣ್ಯರು
ಈ ಧಾರ್ಮಿಕ ಕಾರ್ಯಕ್ರಮದಲ್ಲಿ (Shiva Bilvarchane) ಪೂಜಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಪತಿ, ಜಿಲ್ಲಾ ಜನ ಜಾಗೃತಿ ವೇದಿಕೆಯ ಡಿ.ಎಲ್. ಪರಿಮಳ, ಧರ್ಮಸ್ಥಳ ಯೋಜನೆಯ ವಿನಾಯಕ ಪೈ ಸೇರಿದಂತೆ ಪ್ರಮುಖರಾದ ಬುಲೆಟ್ ಶ್ರೀನಿವಾಸ್, ಜಿ. ರಾಜೇಶ್, ಸುಬ್ಬಾರಾಯಪ್ಪ, ಆದಿನಾರಾಯಣಪ್ಪ, ಬಷೀರ್ ಅಹ್ಮದ್, ಮುನಿರಾಜು ಹಾಗೂ ಯೋಜನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
