ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ತಾಯಿ-ಮಗಳ ದರ್ಪಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು ಕಡೆಗೆ ರೈಲಿನಿಂದಲೇ ಇಳಿಯಬೇಕಾದ (Viral Train Fight Haridwar) ಅಮಾನವೀಯ ಘಟನೆ ನಡೆದಿದೆ. ರೈಲು ಪ್ರಯಾಣ ಅಂದಮೇಲೆ ಅಲ್ಲಿ ನಗು-ನಲಿವು, ಹೊಸ ಪರಿಚಯಗಳು ಇರುವುದು ಸಹಜ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು (Video Here) ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವಂತಿದೆ. ಹರಿದ್ವಾರಕ್ಕೆ ಹೊರಟಿದ್ದ ಕುಟುಂಬವೊಂದು ತಾಯಿ-ಮಗಳ ದರ್ಪಕ್ಕೆ ತುತ್ತಾಗಿ, ಅರ್ಧ ಹಾದಿಯಲ್ಲೇ ರೈಲಿನಿಂದ ಇಳಿಯಬೇಕಾದ ಅಮಾನವೀಯ ಪರಿಸ್ಥಿತಿ ಎದುರಾಗಿದೆ.

Viral Train Fight Haridwar – ಅಸಲಿಗೆ ನಡೆದಿದ್ದೇನು?
ವೈರಲ್ ಆಗಿರುವ ವಿಡಿಯೋದ ಪ್ರಕಾರ, ರೈಲಿನಲ್ಲಿ ಸೀಟು ಹಂಚಿಕೊಳ್ಳುವ ವಿಚಾರವಾಗಿ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ತಾಯಿ ಮತ್ತು ಮಗಳ ಜೋಡಿಯು ಮತ್ತೊಬ್ಬ ಪ್ರಯಾಣಿಕರ ಸೀಟನ್ನು ಆಕ್ರಮಿಸಿಕೊಂಡಿದ್ದರು ಎನ್ನಲಾಗಿದೆ. ಆ ಪ್ರಯಾಣಿಕರು ತಮ್ಮ ಮಗು ಕೂರಬೇಕು ಎಂಬ ಕಾರಣಕ್ಕೆ ದಯವಿಟ್ಟು ಸೀಟು ಬಿಟ್ಟುಕೊಡಿ ಎಂದು ಕೇಳಿದ್ದೇ ತಡ, ಈ ಮಹಿಳೆಯರು ರೌದ್ರಾವತಾರ ತಾಳಿದ್ದಾರೆ. ಕೇವಲ ಬಾಯಿ ಮಾತಿನ ಚಕಮಕಿಗೆ ಸೀಮಿತವಾಗದ ಈ ಗಲಾಟೆ ದೈಹಿಕ ಹಲ್ಲೆಯ ಹಂತಕ್ಕೂ ತಲುಪಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುವುದು ಮತ್ತು ಟಿಕೆಟ್ ಕಲೆಕ್ಟರ್ ಜೊತೆಗೂ ಉದ್ಧಟತನದಿಂದ ವರ್ತಿಸುವುದು ಸ್ಪಷ್ಟವಾಗಿ ದಾಖಲಾಗಿದೆ. ನಮ್ಮ ಮನೆಯಲ್ಲಿ ಎಲ್ಲರೂ ವಕೀಲರಿದ್ದಾರೆ ಎಂದು ಇತರ ಪ್ರಯಾಣಿಕರಿಗೂ ಅವರು ಬೆದರಿಕೆ ಹಾಕಿದ್ದಾರೆ. Read this also : ಶೋಕಿಗೇನು ಕಮ್ಮಿಯಿಲ್ಲ, ಆದ್ರೆ ₹600 ಕೊಡೋಕೆ ಮನಸ್ಸಿಲ್ಲ! ₹600 ಫೇರ್ ನೀಡಲು ಮಹಿಳೆಯ ಕಿರಿಕ್, ವೈರಲ್ ಆದ ವಿಡಿಯೋ…!
ಸಂತ್ರಸ್ತ ಮಹಿಳೆಯ ಕಣ್ಣೀರಿನ ಕಥೆ
ಘಟನೆ ವೈರಲ್ (Video Here) ಆದ ಬೆನ್ನಲ್ಲೇ ತೊಂದರೆಗೆ ಒಳಗಾದ ಕುಟುಂಬದ ಮಹಿಳೆ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗುವಿನ ಮುಂಡನ ಶಾಸ್ತ್ರಕ್ಕಾಗಿ ತಾವು ಹರಿದ್ವಾರಕ್ಕೆ ಹೊರಟಿದ್ದಾಗಿ ಅವರು ತಿಳಿಸಿದ್ದಾರೆ. ಸೀಟು ಕೇಳಿದ್ದಕ್ಕೆ ಅವರು ಕೆಟ್ಟ ಭಾಷೆಯಲ್ಲಿ ನಿಂದಿಸಿ ಹಲ್ಲೆ ಮಾಡಿದರು ಎಂದು ಮಹಿಳೆ ವಿವರಿಸಿದ್ದಾರೆ. ತಾವು ಹೇಗಾದರೂ ಮಾಡಿ ಹರಿದ್ವಾರ ತಲುಪಬೇಕೆಂಬ ಕಾರಣಕ್ಕೆ ಆರಂಭದಲ್ಲಿ ಸುಮ್ಮನಿದ್ದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ತಾಯಿ-ಮಗಳ (Viral Train Fight Haridwar) ಕುಟುಂಬಸ್ಥರು ಸಹರಾನ್ಪುರ ನಿಲ್ದಾಣದಲ್ಲಿ ರೈಲನ್ನು ಹತ್ತಿ, ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಕನ್ಫರ್ಮ್ ಟಿಕೆಟ್ ಇದ್ದರೂ ಸಹ ಆ ಕುಟುಂಬವನ್ನು ಬಲವಂತವಾಗಿ ರೈಲಿನಿಂದ ಕೆಳಕ್ಕೆ ಇಳಿಸಲಾಗಿದೆ ಎಂದು ಸಂತ್ರಸ್ತೆ ಗಂಭೀರವಾಗಿ ಆರೋಪಿಸಿದ್ದಾರೆ.

ಪೊಲೀಸರ ವಿರುದ್ಧವೂ ಕೇಳಿಬಂದಿದೆ ಗಂಭೀರ ಆರೋಪ
ನ್ಯಾಯ ಸಿಗಬೇಕಾದ ಜಾಗದಲ್ಲೂ ಈ ಕುಟುಂಬಕ್ಕೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಂತ್ರಸ್ತ ಮಹಿಳೆಯ ಪ್ರಕಾರ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಪ್ರಕರಣವು ಯಮುನಾ ನಗರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಪೊಲೀಸರು ಜಾರಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಎದುರಾಳಿ ಪಾರ್ಟಿ (Viral Train Fight Haridwar) ಹಾಕಿರುವ ಸುಳ್ಳು ಕೇಸ್ ಹಿಂಪಡೆಯಲು 15,000 ರೂಪಾಯಿ ಲಂಚ ಕೇಳಿದ್ದಾರೆ ಎಂದು ಮಹಿಳೆ ವಿಡಿಯೋದಲ್ಲಿ ದೂರಿದ್ದಾರೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಕಾನೂನು ಕೈಗೆತ್ತಿಕೊಳ್ಳುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
