ವಿಧಿಯಾಟ ಅಂದ್ರೆ ಇದೇ ಇರಬೇಕು ನೋಡಿ. ಸಾವು ಯಾರನ್ನು, ಯಾವಾಗ, ಹೇಗೆ ಬೆನ್ನಟ್ಟುತ್ತದೆ ಎಂದು ಊಹಿಸುವುದೂ ಅಸಾಧ್ಯ. ಜಾರ್ಖಂಡ್ನಲ್ಲಿ ನಡೆದ ಆ ಒಂದು ವಿಮಾನ (Jharkhand Air Ambulance Crash) ದುರಂತದ ಹಿಂದೆ ಕೇವಲ ತಾಂತ್ರಿಕ ಕಾರಣಗಳಿಲ್ಲ, ಅದರ ಹಿಂದೆ ಒಂದು ಕುಟುಂಬದ ನೂರು ಕನಸುಗಳು, ಹರಕೆಗಳು ಮತ್ತು ಕಣ್ಣೀರಿನ ಕಥೆಯಿದೆ. ಒಬ್ಬರನ್ನು ಬದುಕಿಸಿಕೊಳ್ಳಲು ನಡೆಸಿದ ಕೊನೆಯ ಪ್ರಯತ್ನವು ಏಳು ಜನರ ಸಾವಿನೊಂದಿಗೆ ಅಂತ್ಯವಾಗಿರುವುದು ನಿಜಕ್ಕೂ ದುರಂತದ ಪರಮಾವಧಿ ಎಂದು ಹೇಳಬಹುದಾಗಿದೆ.

Jharkhand Air Ambulance Crash – ಬದುಕಿನ ಭರವಸೆಗಾಗಿ ಮಾಡಿದ್ದ 7.5 ಲಕ್ಷ ರೂಪಾಯಿ ಸಾಲ
ಜಾರ್ಖಂಡ್ನ ಲತೇಹಾರ್ ಜಿಲ್ಲೆಯ ಸಂಜಯ್ ಕುಮಾರ್ ಶಾ ಎಂಬುವವರು ಹೋಟೆಲ್ ನಡೆಸುತ್ತಿದ್ದರು. ಕಳೆದ ಸೋಮವಾರ ಶಾರ್ಟ್ ಸರ್ಕ್ಯೂಟ್ನಿಂದ ಅವರ ಹೋಟೆಲ್ಗೆ ಬೆಂಕಿ ಬಿದ್ದಾಗ, ಸಂಜಯ್ ಅವರ ದೇಹ ಶೇಕಡಾ 65 ರಷ್ಟು ಸುಟ್ಟು ಹೋಗಿತ್ತು. ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಈ ವೇಳೆ ದೆಹಲಿಯ ಪ್ರತಿಷ್ಠಿತ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ಕೈಯಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ, ಹೇಗಾದರೂ ಮಾಡಿ ಮನುಷ್ಯ ಉಳಿಯಲಿ ಎಂದು ಅವರ ಕುಟುಂಬದವರು ಸಂಬಂಧಿಕರಿಂದ 7.5 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದು ಏರ್ ಆಂಬುಲೆನ್ಸ್ ಬುಕ್ ಮಾಡಿದ್ದರು. ಸಂಜಯ್ ಬದುಕಿ ಬರುತ್ತಾರೆಂಬ ನಂಬಿಕೆಯಿಂದ ಅವರ ಪತ್ನಿ ಅರ್ಚನಾ ದೇವಿ ಕೂಡ ಜೊತೆಯಾಗಿದ್ದರು.
ಕನಸು ಹೊತ್ತು ಹಾರಿದ ವಿಮಾನ ಕಾಡಿನ ಪಾಲಾದ ಕರಾಳ ಕ್ಷಣ
ರೆಡ್ಬರ್ಡ್ ಏರ್ವೇಸ್ನ ಬೀಚ್ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ಸಂಜೆ 7.11 ಕ್ಕೆ ರಾಂಚಿಯಿಂದ ಟೇಕಾಫ್ ಆಗಿತ್ತು. ದೆಹಲಿಗೆ ತಲುಪಿ ಹೊಸ ಜೀವನ ಆರಂಭಿಸುವ ಕನಸು ಅವರದ್ದಾಗಿತ್ತು. ಆದರೆ ವಿಮಾನ ಹಾರಾಟ ಆರಂಭಿಸಿದ ಕೇವಲ 20 ನಿಮಿಷದಲ್ಲೇ ರಾಡಾರ್ನಿಂದ ಸಂಪರ್ಕ ಕಳೆದುಕೊಂಡಿತು. ಹವಾಮಾನ ವೈಪರೀತ್ಯದಿಂದಾಗಿ ಚತ್ರಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ (Jharkhand Air Ambulance Crash) ವಿಮಾನ ಪತನಗೊಂಡಿತು. ಈ ಘೋರ ಅಪಘಾತದಲ್ಲಿ ಸಂಜಯ್ ಕುಮಾರ್ ಶಾ, ಅವರ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಹಾಗೂ ಕ್ಯಾಪ್ಟನ್ ಸವ್ರಜ್ದೀಪ್ ಸಿಂಗ್ ಸಾವನ್ನಪ್ಪಿದರು. Read this also : ಬಿಸಿಲಿಗೆ ಬೇಸತ್ತು AC ಮೇಲೆ ಮಲಗಿದ ಬೃಹತ್ ಹಾವು! ವಿಲೆ ಪಾರ್ಲೆಯಲ್ಲಿ ನಡೆದ ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಾ..!
ಅನಾಥರಾದ ಮಕ್ಕಳು ಮತ್ತು ನೊಂದ ಹೆತ್ತವರ ಆಕ್ರೋಶ
ಈ ಘಟನೆಯು ಸಂಜಯ್ ಅವರ ಇಬ್ಬರು ಪುಟ್ಟ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಒಂದು ವೇಳೆ ರಾಂಚಿಯಲ್ಲಿಯೇ ಉತ್ತಮ ವೈದ್ಯಕೀಯ ಸೌಲಭ್ಯವಿದ್ದಿದ್ದರೆ ನಾವು ಯಾಕೆ ಅಷ್ಟೊಂದು ಹಣ ಸಾಲ ಮಾಡಿ ವಿಮಾನದಲ್ಲಿ ಹೋಗಬೇಕಿತ್ತು ಎಂದು ಅವರ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಮೃತಪಟ್ಟ ಯುವ ವೈದ್ಯ ಡಾ. ವಿಕಾಸ್ ಕುಮಾರ್ ಗುಪ್ತಾ ಅವರ ತಂದೆಯ (Jharkhand Air Ambulance Crash) ಕಥೆ ಕೇಳಿದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ. ಮಗನನ್ನು ವೈದ್ಯನನ್ನಾಗಿ ಮಾಡಲು ತನ್ನೆಲ್ಲಾ ಭೂಮಿಯನ್ನು ಮಾರಿದ್ದ ಆ ತಂದೆಗೆ ಇಂದು ಮಗನೂ ಇಲ್ಲ, ಆಸ್ತಿಯೂ ಇಲ್ಲ. ಒಡಿಶಾದ ಕಟಕ್ನಲ್ಲಿ ಎಂಬಿಬಿಎಸ್ ಮುಗಿಸಿ ಜನರ ಸೇವೆ ಮಾಡುತ್ತಿದ್ದ ಮಗ ಇಂದು ಹೆಣವಾಗಿ ಮರಳಿದ್ದಾನೆ.

ಒಂದು ಕ್ಷಣದಲ್ಲಿ ಕಮರಿ ಹೋದ ನೂರಾರು ಆಸೆಗಳು
ಸಂಜಯ್ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ (Jharkhand Air Ambulance Crash) ಹೋಗಿದ್ದ ಅಣ್ಣ ವಿಜಯ್ ಶಾ ಅವರು ಮನೆಗೆ ತಲುಪುವಷ್ಟರಲ್ಲಿ ಟಿವಿಯಲ್ಲಿ ಈ ಸುದ್ದಿ ಪ್ರಸಾರವಾಗುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಕೈಬೀಸಿ ಕಳುಹಿಸಿದವರೇ ಈಗ ಶವವಾಗಿ ಮನೆಗೆ ಬರುತ್ತಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲು ಆ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಒಬ್ಬ ರೋಗಿಯನ್ನು ಉಳಿಸಿಕೊಳ್ಳಲು ಹೋಗಿ ಏಳು ಜೀವಗಳು ಬಲಿಯಾದ ಈ ಕರುಣಾಜನಕ ಕಥೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
