Friday, February 13, 2026
HomeStateSSLC Students Motivation : "ಕನಸು ದೊಡ್ಡದಾಗಿರಲಿ, ಅದನ್ನು ನನಸಾಗಿಸುವ ಛಲ ನಿಮ್ಮದಾಗಿರಲಿ": ವಿದ್ಯಾರ್ಥಿಗಳಿಗೆ ಶಾಸಕ...

SSLC Students Motivation : “ಕನಸು ದೊಡ್ಡದಾಗಿರಲಿ, ಅದನ್ನು ನನಸಾಗಿಸುವ ಛಲ ನಿಮ್ಮದಾಗಿರಲಿ”: ವಿದ್ಯಾರ್ಥಿಗಳಿಗೆ ಶಾಸಕ ಸುಬ್ಬಾರೆಡ್ಡಿ ಕರೆ

ವಿದ್ಯಾರ್ಥಿಗಳು ಬಾಲ್ಯದಲ್ಲೇ ಮೊಬೈಲ್ ವ್ಯಾಮೋಹ ಅಥವಾ ಪ್ರೇಮಪಾಶಕ್ಕೆ ಬಿದ್ದರೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇಂದಿನ ಮಕ್ಕಳು ಸಿನಿಮಾಗಳನ್ನು ಹೆಚ್ಚು ಅನುಕರಿಸುತ್ತಿದ್ದಾರೆ, (SSLC Students Motivation) ಆದರೆ ಜೀವನದಲ್ಲಿ ಮುಂದೆ ಬರಬೇಕೆಂಬ ಛಲದಿಂದ ಓದಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.

SSLC students motivation program conducted at government school in Gudibande, Chikkaballapur district, Karnataka

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ 10ನೇ ತರಗತಿ ವಿದ್ಯಾರ್ಥಿಗಳ ‘ಪ್ರೇರಣಾ‘ ಹಾಗೂ ‘ಸಂಜೆ ತರಗತಿಗಳ’ (SSLC Students Motivation) ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

SSLC Students Motivation – ಎಸ್‌ಎಸ್‌ಎಲ್‌ಸಿ ಜೀವನದ ಪ್ರಮುಖ ಘಟ್ಟ

ಎಸ್‌ಎಸ್‌ಎಲ್‌ಸಿ ಎಂಬುದು ನಮ್ಮ ಜೀವನದ ದಿಕ್ಕನ್ನೇ ಬದಲಿಸುವ ಅತ್ಯಂತ ಪ್ರಮುಖ ಘಟ್ಟವಾಗಿದೆ ಎಂದು ಬಣ್ಣಿಸಿದ ಶಾಸಕರು, ಹಿಂದೆಲ್ಲಾ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಸಮಾಜ ಕೀಳಾಗಿ ನೋಡುತ್ತಿತ್ತು ಎಂದು ಸ್ಮರಿಸಿದರು. ಇಂದು ಸರ್ಕಾರ ಸಾಕಷ್ಟು ಶೈಕ್ಷಣಿಕ ಅವಕಾಶಗಳನ್ನು ನೀಡುತ್ತಿದೆ, ಅವುಗಳನ್ನು ವಿದ್ಯಾರ್ಥಿಗಳು ಇಷ್ಟಪಟ್ಟು ಬಳಸಿಕೊಳ್ಳಬೇಕು. ಪೋಷಕರ ಅಥವಾ ಶಿಕ್ಷಕರ ಭಯಕ್ಕೆ ಓದಬಾರದು, ಬದಲಾಗಿ ಸ್ವಾವಲಂಬಿಯಾಗಿ ಬದುಕುವ ಕನಸು ಕಂಡು ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

SSLC students motivation program conducted at government school in Gudibande, Chikkaballapur district, Karnataka

ಪೋಷಕರ ಗೌರವ ಉಳಿಸುವ ಜವಾಬ್ದಾರಿ ನಿಮ್ಮದು

ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಸಿನಿಮಾದ ಹಾಡುಗಳು ಮಕ್ಕಳಿಗೆ ನೆನಪಿರುವಂತೆ ಓದಿದ ಪಾಠಗಳು ನೆನಪಿರುವುದಿಲ್ಲ ಎಂದು ಶಾಸಕರು ಮಾರ್ಮಿಕವಾಗಿ ನುಡಿದರು. ನೀವು ಉತ್ತಮ ಅಂಕ ಗಳಿಸಿದರೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಉಚಿತ ಪ್ರವೇಶ ಪಡೆಯಬಹುದು. ಒಂದು ವೇಳೆ ಕಡಿಮೆ ಅಂಕ ಪಡೆದರೆ ನಿಮ್ಮ ಪೋಷಕರು ಬೇರೆಯವರ ಮುಂದೆ ಸೀಟಿಗಾಗಿ ಕೈಚಾಚುವ ಪರಿಸ್ಥಿತಿ ಬರುತ್ತದೆ. ಅಂತಹ ಮುಜುಗರದ ಸ್ಥಿತಿಗೆ ಪೋಷಕರನ್ನು ತರಬೇಡಿ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮೇಲೆ ಸದಾ ನಿಗಾ ಇಟ್ಟು ಅವರನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಆಶಿಸಿದರು. Read this also : ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿಯಿರುವ 419 ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನ.

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ ಡಾ.ಜಿ. ಪ್ರಭು

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಜಿ. ಪ್ರಭು ಅವರು, ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತದಲ್ಲಿ ಇಂದು ಶಿಕ್ಷಣಕ್ಕೆ ಹೆಚ್ಚಿನ (SSLC Students Motivation)  ಪ್ರೋತ್ಸಾಹ ಸಿಗುತ್ತಿದೆ ಎಂದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿದರೆ ಶಿಕ್ಷಣದ ಮೂಲಕ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.

SSLC students motivation program conducted at government school in Gudibande, Chikkaballapur district, Karnataka
ಸೌಲಭ್ಯಗಳ ಸದ್ಬಳಕೆಗೆ ಜಿಲ್ಲಾಧಿಕಾರಿಗಳ ಕರೆ

ಇಂದಿನ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಮ್ಮ ಕಾಲದಲ್ಲಿ ಇಂದಿನಂತಹ ಸುಸಜ್ಜಿತ ವಸತಿ ಶಾಲೆಗಳಾಗಲಿ ಅಥವಾ ಶೈಕ್ಷಣಿಕ ಸೌಲಭ್ಯಗಳಾಗಲಿ ಇರಲಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು (SSLC Students Motivation) ಉತ್ತಮ ಸಾಧನೆ ಮಾಡಿದರೆ ಉನ್ನತ ವ್ಯಾಸಂಗ ಹಾಗೂ ಗೌರವಯುತ ಉದ್ಯೋಗ ಸುಲಭವಾಗಿ ಲಭಿಸುತ್ತದೆ. ಶಿಕ್ಷಕರು ಸಹ ಮಕ್ಕಳನ್ನು ತಮ್ಮ ಸ್ವಂತ ಮಗುವಿನಂತೆ ಕಂಡು ಅವರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗಣ್ಯರ ಉಪಸ್ಥಿತಿ

ಈ ಸಮಯದಲ್ಲಿ (SSLC Students Motivation) ಶಿಕ್ಷಣ ಇಲಾಖೆಯ ಡಿಡಿಪಿಐ ರಮೇಶ್, ತಹಸೀಲ್ದಾರ್‍ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ,  ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಪಪಂ ಮುಖ್ಯಾಧಿಕಾರಿ ಆರತಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಗಳ ಶಿಕ್ಷಕರು ಸೇರಿದಂತೆ ಹಲವರು ಇದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular