ಪ್ರೀತಿ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅದೇ ಪ್ರೀತಿ ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಬಹುದು ಎಂಬುದಕ್ಕೆ ಮುಂಬೈನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಪ್ರೀತಿಸಿದವನೇ ಕಾಲಬೆನ್ನಿಗೆ ಬಿದ್ದು ಹಾರ್ಟ್ ಗೆದ್ದಿದ್ದ, ಆದರೆ ಕೊನೆಗೆ ಅದೇ ಹೃದಯಕ್ಕೆ ಗುಂಡಿಕ್ಕಿ ಕೊಂದಿದ್ದಾನೆ. ಇದು ಕೇವಲ ಪ್ರೀತಿಯ ಕತೆಯಲ್ಲ, (Mumbai Love Triangle Murder) ನಂಬಿಕೆ ದ್ರೋಹ ಮತ್ತು ಮರಣಾಂತಿಕ ‘ಲವ್ ಟ್ರಯಾಂಗಲ್’ನ ಕರಾಳ ಮುಖ.

Mumbai Love Triangle Murder – ಮಧ್ಯಾಹ್ನದ ವೇಳೆ ನಡೆದ ಭೀಕರ ಕೃತ್ಯ
ಮುಂಬೈನ ಗೋವಂಡಿಯ ಶಿವಾಜಿ ನಗರದಲ್ಲಿ ಈ ಮನಕಲಕುವ ಘಟನೆ ನಡೆದಿದೆ. 19 ವರ್ಷದ ಶಿಫಾ ಎಂಬ ಯುವತಿ ಫೆಬ್ರವರಿ 10ರ ಮಂಗಳವಾರ ಮಧ್ಯಾಹ್ನ ಟೀ ಕುಡಿಯಲೆಂದು ತನ್ನ ಮನೆಯಿಂದ ಹೊರಗೆ ಬಂದಿದ್ದಳು. ಈ ವೇಳೆ ಹಂತಕರು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಸಹ, ತೀವ್ರವಾಗಿ ಗಾಯಗೊಂಡಿದ್ದ ಶಿಫಾ ಬದುಕುಳಿಯಲಿಲ್ಲ.
ಪ್ರೀತಿಯ ಹೆಸರಲ್ಲಿ ನಡೆದ ಮಹಾ ವಂಚನೆ
ಶಿಫಾ 23 ವರ್ಷದ ಯುವಕನೊಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಆದರೆ, ಆತನಿಗೆ ಈಗಾಗಲೇ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಇತ್ತು ಎಂಬ ಕಹಿ ಸತ್ಯ ಆಕೆಗೆ ತಿಳಿದಿರಲಿಲ್ಲ. ಈ ಲವ್ ಸ್ಟೋರಿ ಮೊದಲ ಪ್ರೇಯಸಿಗೆ ತಿಳಿಯುತ್ತಿದ್ದಂತೆ ವಿವಾದ ಶುರುವಾಗಿದೆ. ತನ್ನ ಮೊದಲ ಪ್ರೇಯಸಿಯನ್ನು ಸಮಾಧಾನಪಡಿಸಲು (Mumbai Love Triangle Murder) ಹೋದ ಈ ಕ್ರೂರಿ ಪ್ರಿಯತಮ, ಶಿಫಾ ತನ್ನ ಬೆನ್ನ ಹಿಂದೆ ಬಿದ್ದಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಮೊದಲ ಪ್ರೇಯಸಿ ಶಿಫಾಳನ್ನು ಮುಗಿಸುವಂತೆ ಸೂಚಿಸಿದ್ದಾಳೆ. ಕೊನೆಗೆ ಮೊದಲ ಪ್ರೇಯಸಿಯ ಮೇಲಿನ ವ್ಯಾಮೋಹಕ್ಕೆ ಬಿದ್ದ ಈ ಯುವಕ, ತನಗೆ ಹೃದಯ ನೀಡಿದ್ದ ಶಿಫಾಳನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ. Read this also : ಮಗಳೇ ಮನೆಗೆ ಬಾ ಎಂದು ಗೋಳಾಡಿದ ತಾಯಿ; ತಿರುಗಿ ನೋಡದೆ ಪ್ರಿಯಕರನ ಕೈ ಹಿಡಿದ ಮಗಳು…!
ಮೃತದೇಹದ ಮೇಲಿದ್ದ ಭೀಕರ ಗಾಯದ ಗುರುತುಗಳು
ಪೊಲೀಸರ ಮಾಹಿತಿಯ ಪ್ರಕಾರ, ಶಿಫಾಳ ತಲೆ, ಕೆನ್ನೆ ಮತ್ತು ಕುತ್ತಿಗೆಯ ಭಾಗಕ್ಕೆ ಗುಂಡು ತಗುಲಿದೆ. ಇದರಿಂದಾಗಿ ಆಕೆಯ ಸ್ಥಿತಿ ಸ್ಥಳದಲ್ಲೇ ಗಂಭೀರವಾಗಿತ್ತು. ಶಿಫಾ ಗೋವಂಡಿಯ ಕಮಲಾ ರಾಮನ್ ನಗರದಲ್ಲಿ ತನ್ನ ಪೋಷಕರು ಮತ್ತು ಇಬ್ಬರು ಸಹೋದರರೊಂದಿಗೆ ವಾಸವಾಗಿದ್ದಳು. ಆಕೆಯ ತಂದೆ ಕಟ್ಟಡ (Mumbai Love Triangle Murder) ನಿರ್ಮಾಣ ಕ್ಷೇತ್ರದಲ್ಲಿ ಸಣ್ಣ ಗುತ್ತಿಗೆದಾರರಾಗಿದ್ದಾರೆ. ತನ್ನ ಮುದ್ದಿನ ಮಗಳನ್ನು ಕಳೆದುಕೊಂಡಿರುವ ಇಡೀ ಕುಟುಂಬ ಈಗ ಆಘಾತದಲ್ಲಿದೆ.

ಆರೋಪಿಗಳ ಬಂಧನ ಮತ್ತು ತನಿಖೆ ಚುರುಕು
ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ಈಗಾಗಲೇ ಶಿಫಾಳ 23 ವರ್ಷದ ಬಾಯ್ಫ್ರೆಂಡ್ ಮತ್ತು ಆತನೊಂದಿಗೆ ಸಂಬಂಧದಲ್ಲಿದ್ದ 25 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. (Mumbai Love Triangle Murder) ವಲಯ ಡಿಸಿಪಿ ಸಮೀರ್ ಶೇಖ್ ಅವರು ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಕೊಲೆಗೆ ಬಳಸಿದ ಆಯುಧದ ಮೂಲ, ಡಿಜಿಟಲ್ ಸಾಕ್ಷ್ಯಗಳು, ಕಾಲ್ ರೆಕಾರ್ಡ್ ಮತ್ತು ಲೊಕೇಶನ್ ಡೇಟಾವನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿದಿದೆ.
