Crime : ವಿದೇಶದಿಂದ ರಹಸ್ಯವಾಗಿ ಬಂದು ಹೆತ್ತ ತಾಯಿಯನ್ನೇ ಕೊಂದ ಮಗ! ಹರಿಯಾಣದ ಈ ಘಟನೆ ಕೇಳಿದ್ರೆ ಬೆಚ್ಚಿಬೀಳ್ತೀರಾ..!

ಹೆತ್ತ ತಾಯಿ ಮಗನ ಏಳಿಗೆಗಾಗಿ ಏನೆಲ್ಲಾ ಕಷ್ಟಪಡುತ್ತಾಳೆ. ಮಗ ಹಾದಿ ತಪ್ಪಬಾರದು ಎಂದು ಬುದ್ಧಿ ಹೇಳುವುದು ತಾಯಿಯ ಕರ್ತವ್ಯ. ಆದರೆ, ಅದೇ ಬುದ್ಧಿಮಾತು ಮಗನ ಪಾಲಿಗೆ ದ್ವೇಷದ ಕಿಚ್ಚು ಹಚ್ಚುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹರಿಯಾಣದ ಯಮುನಾನಗರದಲ್ಲಿ ನಡೆದ ಈ ಘಟನೆ (Crime) ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಂಗ್ಲೆಂಡ್‌ನಲ್ಲಿದ್ದಾನೆ ಅಂದುಕೊಂಡಿದ್ದ ಮಗ, ರಹಸ್ಯವಾಗಿ ಭಾರತಕ್ಕೆ ಬಂದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ.

A shocking crime in Yamunanagar, Haryana, where a son allegedly murdered his mother after secretly returning from England.

Crime – ಅಸಲಿಗೆ ನಡೆದಿದ್ದೇನು?

ಕಳೆದ ಡಿಸೆಂಬರ್ 24ರಂದು ಶ್ಯಾಮ್‌ಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಅಸಹಜ ಸಾವು ಎಂದು ಕಂಡರೂ, ಪೊಲೀಸರಿಗೆ ಕೆಲವು ಅನುಮಾನಗಳು ಕಾಡಿದ್ದವು. ಪ್ರಕರಣದ ಗಾಂಭೀರ್ಯ ಅರಿತ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಹೊರಬಿದ್ದ ಸತ್ಯ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ತಾಯಿಯನ್ನು ಕೊಂದಿದ್ದು ಮತ್ಯಾರೋ ಅಲ್ಲ, ಆಕೆಯ ಪ್ರೀತಿಯ ಮಗ ಗೋಮಿತ್ ರಥಿ.

ಪ್ರೀತಿ ಮತ್ತು ಹಗೆತನದ ಕಥೆ

ಗೋಮಿತ್ ರಥಿ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಈ ಸಂಬಂಧಕ್ಕೆ ತಾಯಿ ಬಲ್ಜಿಂದರ್ ಕೌರ್ ಅವರ ತೀವ್ರ ವಿರೋಧವಿತ್ತು. ಮಗ ಹಾದಿ ತಪ್ಪುತ್ತಿದ್ದಾನೆ ಎಂದು ಭಾವಿಸಿದ ಪೋಷಕರು, ಆತನನ್ನು ಪ್ರೇಯಸಿಯಿಂದ ದೂರ ಮಾಡಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಸ್ಟಡಿ ವೀಸಾ ನೀಡಿ ಇಂಗ್ಲೆಂಡ್‌ನ ಓದಲು ಕಳುಹಿಸಿದ್ದರು. ಇಂಗ್ಲೆಂಡ್‌ನಲ್ಲಿ ಓದುತ್ತಾ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದ ಗೋಮಿತ್ ಮನಸ್ಸಿನಲ್ಲಿ ತಾಯಿಯ ಮೇಲಿನ ದ್ವೇಷ ಮಾತ್ರ ಕಡಿಮೆ (Crime) ಆಗಿರಲಿಲ್ಲ.

ಇಂಗ್ಲೆಂಡ್‌ನಿಂದ ರಹಸ್ಯವಾಗಿ ಬಂದ ‘ಕಿಲರ್’ ಮಗ

ತನ್ನ ಪ್ರೀತಿಗೆ ತಾಯಿ ಅಡ್ಡವಾಗಿದ್ದಾಳೆ ಎಂಬ ಹಗೆತನದಲ್ಲಿದ್ದ ಗೋಮಿತ್, ಯಾರಿಗೂ ತಿಳಿಸದಂತೆ ಡಿಸೆಂಬರ್ 18ರಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ವಿಮಾನವೇರಿದ್ದ. ಈ ವಿಚಾರ ಕೇವಲ ಆತನ ಸ್ನೇಹಿತ ಪಂಕಜ್ ಎಂಬುವವನಿಗೆ ಮಾತ್ರ ತಿಳಿದಿತ್ತು. ಇವರಿಬ್ಬರೂ ಸೇರಿ ತಾಯಿಯನ್ನು ಮುಗಿಸಲು ಸಂಚು (Crime) ರೂಪಿಸಿದ್ದರು. Read this also : ಮಂಗಳೂರು ಟೆಕ್ಕಿ (Mangaluru Techie Sharmila) ಶರ್ಮಿಳಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಶಾರ್ಟ್ ಸರ್ಕ್ಯೂಟ್ ಅಲ್ಲ ಅದು ‘ಸೈಲೆಂಟ್’ ಕೊಲೆ!

ಕೊಲೆ ನಡೆದ ಭೀಕರ ಹಾದಿ:
  • ರಹಸ್ಯ ಆಗಮನ: ಭಾರತಕ್ಕೆ ಬಂದ ಗೋಮಿತ್ ಮನೆಯವರ ಕಣ್ಣಿಗೆ ಬೀಳದೆ ಅಡಗಿಕೊಂಡಿದ್ದ.
  • ಸಂಚು: ಡಿಸೆಂಬರ್ 24ರ ರಾತ್ರಿ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ ಗೋಮಿತ್, ತಾಯಿ ಒಬ್ಬರೇ ಇದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾನೆ.
  • ಸಾಕ್ಷ್ಯ ನಾಶ: ಇದೊಂದು ಅಪಘಾತ ಎಂದು ಬಿಂಬಿಸಲು ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದಿದ್ದ.

A shocking crime in Yamunanagar, Haryana, where a son allegedly murdered his mother after secretly returning from England.

ಪೊಲೀಸರ ಚಾಣಾಕ್ಷತನಕ್ಕೆ ಸಿಕ್ಕಿಬಿದ್ದ ಆರೋಪಿಗಳು

ಯಾರಿಗೂ ತಿಳಿಯದಂತೆ ಕೊಲೆ ಮಾಡಿ ತಾನು ಸೇಫ್ ಎಂದು ಗೋಮಿತ್ ಭಾವಿಸಿದ್ದ. ಆದರೆ ವಿಶೇಷ ತನಿಖಾ ತಂಡ (SIT) ತಾಂತ್ರಿಕ ಸಾಕ್ಷ್ಯಗಳು, ಮೊಬೈಲ್ ಫೋನ್ ಲೊಕೇಶನ್ ಟ್ರ್ಯಾಕಿಂಗ್ ಮತ್ತು ಕಾಲ್ ಡಿಟೇಲ್ಸ್ (CDR) ಪರಿಶೀಲಿಸಿದಾಗ ಗೋಮಿತ್ ಭಾರತದಲ್ಲಿದ್ದ ವಿಚಾರ ಬಯಲಾಗಿದೆ. ತಕ್ಷಣವೇ (Crime) ಗೋಮಿತ್ ಮತ್ತು ಆತನಿಗೆ ಸಹಕರಿಸಿದ ಸ್ನೇಹಿತ ಪಂಕಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಹೆತ್ತ ತಾಯಿ ಮಗನ ಒಳ್ಳೆಯದಕ್ಕಾಗಿಯೇ ವಿದೇಶಕ್ಕೆ ಕಳುಹಿಸಿದ್ದರು, ಆದರೆ ಅದೇ ಮಗ ಯಮನಂತೆ ಬಂದು ಪ್ರಾಣ ತೆಗೆದಿರುವುದು ಮಾತ್ರ ವಿಪರ್ಯಾಸ.

Leave a Comment

Your email address will not be published. Required fields are marked *

Scroll to Top