ಸಾಮಾನ್ಯವಾಗಿ ಮನೆಯೇ ಮೊದಲ ಪಾಠಶಾಲೆ, ಪತ್ನಿಯೇ ಹಿತೈಷಿ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ಮಾಡಿರೋ ಕೆಲಸ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ. ತನ್ನ ಸುಖ-ದುಃಖದಲ್ಲಿ ಭಾಗಿಯಾಗಬೇಕಿದ್ದ ಪತಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಘಟನೆಯೊಂದು ಹರಿಯಾಣದ ಸೋನಿಪತ್ ನಲ್ಲಿ ನಡೆದಿದೆ. ನಿದ್ದೆಯಲ್ಲಿದ್ದಾಗಲೇ ಗಂಡನ ಪ್ರಾಣ (Crime) ತೆಗೆದ ಈ ‘ಕಿರಾತಕಿ’ ಪತ್ನಿಯ ಕೃತ್ಯ ಈಗ ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

Crime – ಘಟನೆಯ ವಿವರ
ಸೋನಿಪತ್ನ ಕಾಕಾನ ಗ್ರಾಮದ ನಿವಾಸಿ ರಾಮ್ ಕಿಷನ್, ಕಳೆದ ಒಂದು ವರ್ಷದಿಂದ ಆಶೀರ್ವಾದ್ ಗಾರ್ಡನ್ನಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಸರಿತಾ ಮತ್ತು ಇಬ್ಬರು ಮಕ್ಕಳೊಂದಿಗೆ ಸುಂದರ ಸಂಸಾರ ಅವರದ್ದಾಗಿತ್ತು. ಆದರೆ ಈ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಪತ್ನಿ ಸರಿತಾಳ ಅನೈತಿಕ ಸಂಬಂಧದಿಂದ ಎನ್ನಲಾಗುತ್ತಿದೆ. ಕಳೆದ ಸೋಮವಾರ (ಜನವರಿ 05) ರಾತ್ರಿ ಎಂದಿನಂತೆ ದಂಪತಿಗಳ ನಡುವೆ ಜಗಳ ನಡೆದಿದೆ. ಹಣದ ವಿಚಾರವಾಗಿ ಶುರುವಾದ ವಾಗ್ವಾದ ಕೊನೆಯಲ್ಲಿ ರಕ್ತಪಾತಕ್ಕೆ ದಾರಿ ಮಾಡಿಕೊಟ್ಟಿದೆ.
ಕೊಲೆ ನಡೆದ ರೀತಿ ಅತ್ಯಂತ ಭಯಾನಕ!
ಪೊಲೀಸ್ ಮೂಲಗಳ ಪ್ರಕಾರ, ರಾತ್ರಿ ಊಟ ಮುಗಿಸಿ ರಾಮ್ ಕಿಷನ್ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಸರಿತಾ, ಮೊದಲು ಪತಿಯ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಆತ ತಪ್ಪಿಸಿಕೊಳ್ಳಬಾರದು ಎಂಬ ಕ್ರೂರ ಉದ್ದೇಶದಿಂದ ಆತನ ಗುಪ್ತಾಂಗವನ್ನು ಬಲವಾಗಿ ನುಜ್ಜುಗುಜ್ಜು ಮಾಡಿದ್ದಾಳೆ. ತೀವ್ರ (Crime) ರಕ್ತಸ್ರಾವ ಮತ್ತು ಉಸಿರುಗಟ್ಟುವಿಕೆಯಿಂದ ರಾಮ್ ಕಿಷನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕೊಲೆ ಮಾಡಿದ ನಂತರವೂ ಏನೂ ಅರಿಯದವಳಂತೆ ನಟನೆ!
ಈ ಪ್ರಕರಣದಲ್ಲಿ ಎಲ್ಲರಿಗೂ ಆಶ್ಚರ್ಯ ತಂದ ವಿಷಯವೆಂದರೆ ಸರಿತಾಳ ವರ್ತನೆ. ಪತಿಯನ್ನು ಕೊಂದ ನಂತರವೂ ಆಕೆ ಸ್ವಲ್ಪವೂ ಭಯಪಡದೆ, ಬೆಳಿಗ್ಗೆ ಎದ್ದು ಅತ್ತೆಗೆ ಮತ್ತು ಮಕ್ಕಳಿಗೆ ಟೀ ಮಾಡಿಕೊಟ್ಟಿದ್ದಾಳೆ. “ಅವರು ತಡವಾಗಿ ಏಳುತ್ತಾರೆ, ತೊಂದರೆ ಕೊಡಬೇಡಿ” ಎಂದು ಹೇಳಿ ಮಕ್ಕಳನ್ನು ಕರೆದುಕೊಂಡು ಮನೆಯಿಂದ (Crime) ಹೊರಟು ಹೋಗಿದ್ದಾಳೆ. ಹಿರಿಯ ಮಗನನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಆಕೆ ನಾಪತ್ತೆಯಾಗಿದ್ದಾಳೆ. ಮಗ ಕುನಾಲ್ ತನ್ನ ತಂದೆಯನ್ನು ಎಬ್ಬಿಸಲು ಹೋದಾಗ ರಾಮ್ ಕಿಷನ್ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಹಣಕ್ಕಾಗಿ ನಡೆದ ಕೊಲೆಯೇ?
ರಾಮ್ ಕಿಷನ್ ಬಳಿ ಸುಮಾರು 5 ಲಕ್ಷ ರೂಪಾಯಿ ಹಣವಿತ್ತು ಮತ್ತು ಅವರು ಹೊಸ ಕಾರು ಖರೀದಿಸುವ ತಯಾರಿಯಲ್ಲಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಣದ ಆಸೆಗಾಗಿ ಅಥವಾ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂಬ ಕಾರಣಕ್ಕೆ ಸರಿತಾ ಈ ಕೃತ್ಯ ಎಸಗಿರಬಹುದು ಎಂದು ಸಂಶಯ (Crime) ವ್ಯಕ್ತಪಡಿಸಲಾಗಿದೆ. Read this also : ಪ್ರೀತಿಸಿದವನೇ ಕೈಕೊಟ್ಟನೆಂದು ಪ್ರಾಣಬಿಟ್ಟಳಾ ನಿಖಿತಾ? ಪ್ರಿಯಕರನ ಮನೆಯಲ್ಲೇ ಹಾಸನದ ಯುವತಿ ಸಾವು..!

ಪೊಲೀಸರು ಹೇಳಿದ್ದಿಷ್ಟು
“ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರಿತಾ ಒಬ್ಬಳೇ ಈ ಕೃತ್ಯ ಎಸಗಲು ಸಾಧ್ಯವಿಲ್ಲ, ಇದರಲ್ಲಿ ಬೇರೆಯವರ ಕೈವಾಡವೂ ಇರಬಹುದು ಎಂಬ ಅನುಮಾನವಿದೆ. (Crime) ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದೇವೆ” ಎಂದು ಎಸಿಪಿ ಅಮಿತ್ ಧಂಖರ್ ತಿಳಿಸಿದ್ದಾರೆ.
ಸಮಾಜದಲ್ಲಿ ಸಂಬಂಧಗಳ ಮೌಲ್ಯ ಕುಸಿಯುತ್ತಿರುವುದಕ್ಕೆ ಇಂತಹ ಘಟನೆಗಳೇ ಸಾಕ್ಷಿ. ತನ್ನ ಮಗುವಿನ ತಂದೆ, ತನ್ನ ಬಾಳ ಸಂಗಾತಿ ಎಂಬ ಕನಿಷ್ಠ ಕನಿಕರವೂ ಇಲ್ಲದೆ ಸರಿತಾ ಮಾಡಿದ ಈ ಕೃತ್ಯ ನಿಜಕ್ಕೂ ಖಂಡನೀಯ. ಸದ್ಯಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
