ಸಿನಿಮಾಗಳಲ್ಲಿ ನಾವು ನೋಡುವಂತಹ ಭೀಕರ ಕೊಲೆ ಪ್ರಕರಣಗಳು ಇತ್ತೀಚೆಗೆ ನಿಜ ಜೀವನದಲ್ಲೂ ಮರುಕಳಿಸುತ್ತಿರುವುದು ಆತಂಕಕಾರಿ. ಉತ್ತರ ಪ್ರದೇಶದ ಚಂದೌಸಿಯಲ್ಲಿ ಅಂತಹದ್ದೇ ಒಂದು ಮೈ ಜುಂ ಎನ್ನಿಸುವ ಘಟನೆ ನಡೆದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಅಮಾನುಷವಾಗಿ ಹತ್ಯೆ (Crime) ಮಾಡಿದ್ದಾಳೆ. ಕೊಲೆ ಮಾಡಿದ್ದು ಮಾತ್ರವಲ್ಲದೆ, ಸಾಕ್ಷ್ಯ ನಾಶಪಡಿಸಲು ಪತಿಯ ಶವವನ್ನು ವುಡ್ ಗ್ರೈಂಡರ್ನಲ್ಲಿ (ಮರ ಕತ್ತರಿಸುವ ಯಂತ್ರ) ಹಾಕಿ ರುಬ್ಬಿ ಚರಂಡಿಗೆ ಎಸೆದಿರುವ ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ.

Crime – ನಿಗೂಢವಾಗಿ ನಾಪತ್ತೆಯಾಗಿದ್ದ ರಾಹುಲ್
ಉತ್ತರ ಪ್ರದೇಶದ ಚಂದೌಸಿಯ ಮೊಹಲ್ಲಾ ಚುನ್ನಿ ನಿವಾಸಿಯಾದ ರಾಹುಲ್ (38) ಎಂಬುವವರು ನವೆಂಬರ್ 18 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ರೂಬಿ ನವೆಂಬರ್ 18 ರಂದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನ್ನ ಪತಿ ಕಾಣೆಯಾಗಿದ್ದಾರೆ ಎಂದು ನಾಟಕವಾಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಪೊಲೀಸರಿಗೆ ಸುಳಿವು ನೀಡಿದ ಆ ‘ಹಚ್ಚೆ’ (Tattoo)
ಡಿಸೆಂಬರ್ 15 ರಂದು ಈದ್ಗಾ ಪ್ರದೇಶದ ಚರಂಡಿಯೊಂದರಲ್ಲಿ ವಿರೂಪಗೊಂಡ ಶವವೊಂದು ಪತ್ತೆಯಾಯಿತು. ಆ ಶವಕ್ಕೆ ತಲೆ, ಕೈ ಮತ್ತು ಕಾಲುಗಳಿರಲಿಲ್ಲ. ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಗುರುತು ಹಿಡಿಯುವುದು ಕಷ್ಟವಾಗಿತ್ತು. ಆದರೆ, ಪೊಲೀಸರು ಸೂಕ್ಷ್ಮವಾಗಿ ಗಮನಿಸಿದಾಗ ಶವದ ಮೇಲೆ ‘ರಾಹುಲ್’ ಎಂಬ ಹೆಸರು ಹಚ್ಚೆ ಹಾಕಿಸಿಕೊಂಡಿರುವುದು ಕಂಡುಬಂದಿತು. ತಕ್ಷಣ ಹತ್ತಿರದ ಠಾಣೆಗಳ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದಾಗ ಅದು ರೂಬಿ ನೀಡಿದ್ದ ದೂರಿನಲ್ಲಿದ್ದ ರಾಹುಲ್ ಇರಬಹುದು ಎಂಬ (Crime) ಅನುಮಾನ ಪೊಲೀಸರಿಗೆ ಮೂಡಿತು.
ಅಕ್ರಮ ಸಂಬಂಧವೇ ಕೊಲೆಗೆ ಕಾರಣ!
ಪೊಲೀಸರು ತಾಂತ್ರಿಕ ತನಿಖೆ ಮತ್ತು ರಾಹುಲ್ ಅವರ ಮೊಬೈಲ್ ಫೋನ್ ಲೊಕೇಶನ್ ಆಧರಿಸಿ ತನಿಖೆ ಚುರುಕುಗೊಳಿಸಿದರು. ಪತ್ನಿ ರೂಬಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ರೂಬಿ ಹಾಗೂ ಗೌರವ್ ಎಂಬಾತನ ನಡುವೆ ಅಕ್ರಮ ಸಂಬಂಧವಿತ್ತು. ಇದನ್ನು ರಾಹುಲ್ ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು. ತನ್ನ ಸಂಬಂಧಕ್ಕೆ (Crime) ಅಡ್ಡಿಯಾಗುತ್ತಿದ್ದ ಪತಿಯನ್ನು ಮುಗಿಸಲು ರೂಬಿ ಮತ್ತು ಆಕೆಯ ಪ್ರಿಯಕರ ಸಂಚು ರೂಪಿಸಿದ್ದರು. Read this also : ಅನೈತಿಕ ಸಂಬಂಧಕ್ಕೆ ‘ಗುಡ್ ಬೈ’ ಹೇಳಿದ್ದೇ ತಪ್ಪಾಯ್ತಾ? ಪ್ರಿಯಕರನ ಮೇಲೆ ಗ್ಯಾಂಗ್ ಕಟ್ಟಿ ಹಲ್ಲೆ ನಡೆಸಿದ ಮಹಿಳೆ!
“ರಾಹುಲ್ ಮೇಲೆ ಕಬ್ಬಿಣದ ರಾಡ್ ಮತ್ತು ಕುಟ್ಟಾಣಿಯಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು. ನಂತರ ಮೃತದೇಹವನ್ನು ಸಾಗಿಸಲು ಸುಲಭವಾಗಲಿ ಎಂದು ವುಡ್ ಗ್ರೈಂಡರ್ ತಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದೆವು” ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ದೈತ್ಯ ಗ್ರೈಂಡರ್ನಲ್ಲಿ ಶವ ಸಂಸ್ಕಾರ!
ಆರೋಪಿಗಳು ಎಸಗಿದ ಕೃತ್ಯ ಅತ್ಯಂತ ಭಯಾನಕವಾಗಿದೆ. ಶವವನ್ನು ತುಂಡು ಮಾಡಿದ ಬಳಿಕ ಗ್ರೈಂಡರ್ನಲ್ಲಿ ಹಾಕಿ ರುಬ್ಬಿದ್ದರು. ದೇಹದ ಕೆಲವು ಭಾಗಗಳನ್ನು ಸ್ಥಳೀಯ ಚರಂಡಿಗೆ ಎಸೆದಿದ್ದರೆ, ಉಳಿದ ಭಾಗಗಳನ್ನು ರಾಜ್ಘಾಟ್ಗೆ ತೆಗೆದುಕೊಂಡು ಹೋಗಿ ಪವಿತ್ರ ಗಂಗಾ ನದಿಗೆ ಎಸೆದಿದ್ದರು. ಪೊಲೀಸರು ಈಗ ಕೊಲೆಗೆ ಬಳಸಿದ ಗ್ರೈಂಡರ್, (Crime) ಸುತ್ತಿಗೆ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದಿನ ಕ್ರಮವೇನು?
ಸದ್ಯ ಪೊಲೀಸರು ಆರೋಪಿಗಳಾದ ರೂಬಿ ಮತ್ತು ಗೌರವ್ನನ್ನು ಬಂಧಿಸಿ (Crime) ಜೈಲಿಗಟ್ಟಿದ್ದಾರೆ. ಮೃತರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ರಾಹುಲ್ ಅವರ ಮಕ್ಕಳ ಡಿಎನ್ಎ ಜೊತೆ ಹೋಲಿಕೆ ಮಾಡಿ ವೈಜ್ಞಾನಿಕವಾಗಿ ಗುರುತು ಖಚಿತಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ.
