Telangana : ಗೋವಿನ ಕಣ್ಣು-ಕೊಂಬು ಕಿತ್ತು, ರಕ್ತಾಭಿಷೇಕ, ಕ್ಷುದ್ರ ಪೂಜೆಗಾಗಿ ಮೂಕ ಪ್ರಾಣಿಯ ಬಲಿ? ಅಮಾವಾಸ್ಯೆಗೂ ಮುನ್ನ ನಡೆದ ಕರಾಳ ಘಟನೆ..!

Telangana – ಅಮಾವಾಸ್ಯೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನಡುಕ ಹುಟ್ಟಿಸುವಂತಹ ಘಟನೆಯೊಂದು ತೆಲಂಗಾಣದ ಜನಗಾಮ ಜಿಲ್ಲೆಯ ಚಿಲುಕೂರು ಮಂಡಲದ ಶ್ರೀಪತಿಪಲ್ಲಿ ಗ್ರಾಮದಲ್ಲಿ ನಡೆದಿದೆ. ರಾತ್ರೋರಾತ್ರಿ ಜಾನುವಾರು ಕೊಟ್ಟಿಗೆಗೆ ನುಗ್ಗಿದ ದುಷ್ಕರ್ಮಿಗಳು, ಹಸುವೊಂದರ ಕಣ್ಣು ಮತ್ತು ಕೊಂಬನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ. ಮೂಕ ಪ್ರಾಣಿಯ ರಕ್ತದಿಂದಲೇ ಗ್ರಾಮದ ದೇವಸ್ಥಾನದ ಮುಂದೆ ರಕ್ತಾಭಿಷೇಕ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.

Cow Brutally Injured for Occult Ritual Near Uppalamma Temple in Telangana

Telangana – ಕ್ರೌರ್ಯಕ್ಕೆ ಬಲಿಯಾದ ಗೋವು: ಕ್ಷುದ್ರ ಪೂಜೆ ಶಂಕೆ

ಗ್ರಾಮದ ರೈತ ವೆಂಕಟೇಶ್ ಅವರು ತಮ್ಮ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು. ಆದರೆ, ಮರುದಿನ ಬೆಳಗ್ಗೆ ಹೋಗಿ ನೋಡಿದಾಗ, ಒಂದು ಹಸು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಹಸುವಿನ ದೇಹವನ್ನು ಪರಿಶೀಲಿಸಿದಾಗ, ಎಡಭಾಗದ ಕೊಂಬು ಮತ್ತು ಎಡಗಣ್ಣನ್ನು ಚೂಪಾದ ಆಯುಧದಿಂದ ಕತ್ತರಿಸಿ ತೆಗೆದುಕೊಂಡು ಹೋಗಿರುವ ಕುರುಹುಗಳು ಕಂಡುಬಂದಿವೆ. ಜೊತೆಗೆ, ದುಷ್ಕರ್ಮಿಗಳು ಹಸುವಿನ ಸ್ವಲ್ಪ ರಕ್ತವನ್ನೂ ಸಂಗ್ರಹಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Telangana – ಉಪ್ಪಲಮ್ಮ ದೇಗುಲದ ಮುಂದೆ ರಕ್ತಾಭಿಷೇಕ

ಕ್ರೌರ್ಯಕ್ಕೆ ಬಲಿಯಾದ ಹಸುವಿನ ಒಂದು ಕಣ್ಣು, ಒಂದು ಕೊಂಬು ಹಾಗೂ ರಕ್ತವನ್ನು ತೆಗೆದುಕೊಂಡು ಹೋಗಿದ್ದ ದುಷ್ಕರ್ಮಿಗಳು, ಅದನ್ನು ಗ್ರಾಮದ ಹೊರವಲಯದಲ್ಲಿರುವ ಉಪ್ಪಲಮ್ಮ ದೇವಿಯ ದೇಗುಲದ ಮುಂದೆ ಸುರಿದು ರಕ್ತಾಭಿಷೇಕ ಮಾಡಿದ್ದಾರೆ. ಇದನ್ನು ನೋಡಿದ ಸ್ಥಳೀಯರು, ಖಂಡಿತವಾಗಿಯೂ ಗುರುತು ಪರಿಚಯವಿಲ್ಲದ ದುಷ್ಕರ್ಮಿಗಳು ಕ್ಷುದ್ರ ಪೂಜೆ (ಮಾಟ-ಮಂತ್ರ) ನಡೆಸಲೆಂದೇ ಈ ಭೀಕರ ಕೃತ್ಯ ಎಸಗಿದ್ದಾರೆ ಎಂದು ಗಾಢವಾಗಿ ನಂಬಿದ್ದಾರೆ. ಅಮಾವಾಸ್ಯೆಯಂತಹ ದಿನಗಳಂದು ಮಾಟ-ಮಂತ್ರ ಮಾಡುವವರು ಈ ಮೂಕಪ್ರಾಣಿಯನ್ನು ಬಲಿ ನೀಡಿ, ಅದರ ಅಂಗಗಳನ್ನು ತಾಂತ್ರಿಕ ಪೂಜೆಗಳಿಗೆ ಬಳಸಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ. Read this also : ಗಂಡನ ಜೂಜಿಗೆ ಬಲಿಯಾದ ಹೆಂಡತಿ : ಪಣವಾಗಿಟ್ಟು ಸೋತ ಮೇಲೆ 8 ಜನರ ಸಾಮೂಹಿಕ ಅ***ಚಾರ, ಉತ್ತರಪ್ರದೇಶದಲ್ಲಿ ನಡೆದ ಘಟನೆ…!

ಗ್ರಾಮಸ್ಥರ ಮಾತು: “ಯಾರೋ ಬಂದು ಹೀಗೆ ಅಮಾಯಕ ಪ್ರಾಣಿಯನ್ನು ಹಿಂಸಿಸಿ, ಕೊಂದಿರುವುದು ನೋಡಿದರೆ ಮೈ ಜುಮ್ಮೆನ್ನುತ್ತದೆ. ಅಮಾವಾಸ್ಯೆಗೂ ಮೊದಲು ಇಂತಹ ದಾರುಣ ಕೃತ್ಯ ನಡೆದಿರುವುದು ಇಡೀ ಊರಿನಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Cow Brutally Injured for Occult Ritual Near Uppalamma Temple in Telangana

Telangana – ಪೊಲೀಸರಿಂದ ತನಿಖೆ ಮುಂದುವರಿಕೆ

ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರೈತ ವೆಂಕಟೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಸುವನ್ನು ಹಗ್ಗಗಳಿಂದ ಕಟ್ಟಿ ಬಲವಂತವಾಗಿ ಕೊಂಬು ಮತ್ತು ಕಣ್ಣನ್ನು ತೆಗೆದು, ರಕ್ತವನ್ನೂ ಸಂಗ್ರಹಿಸಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ನಿಜಕ್ಕೂ ಇದು ಕ್ಷುದ್ರ ಪೂಜೆಗಾಗಿ ಮಾಡಿದ ಕೃತ್ಯವೇ ಅಥವಾ ಬೇರೆ ಯಾವುದೇ ದುರುದ್ದೇಶ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top