Live-in Relationship : ಲಿವ್-ಇನ್ ಪಾಲುದಾರನನ್ನೇ ಕೊ**ಲೆ ಮಾಡಿದ ಪ್ರೇಯಸಿ: ವಿಜಯಪುರದಲ್ಲಿ ನಡೆದಿದ್ದೇನು?

Live-in Relationship – ಸಂಬಂಧಗಳು ಈಗಿನ ಕಾಲದಲ್ಲಿ ಬಹಳ ಸಂಕೀರ್ಣವಾಗಿವೆ. ಪ್ರೀತಿ, ವಿಶ್ವಾಸದ ಜೊತೆಗೆ ವಿವಾದಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಅದೇ ವಿವಾದ ಕೊನೆಗೆ ಕೊಲೆಯಂತಹ (Murder) ಭೀಕರ ಘಟನೆಗೆ ಕಾರಣವಾದರೆ? ಇಂತಹದ್ದೇ ಒಂದು ಆಘಾತಕಾರಿ ಘಟನೆ ವಿಜಯಪುರ ನಗರದ ಅಮನ್ ಕಾಲೋನಿಯಲ್ಲಿ ನಡೆದಿದೆ. ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದ (Live-in Relationship) ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೃತ್ಯಕ್ಕೆ ಆಕೆಯ ಸಹೋದರ ಕೂಡ ಸಹಾಯ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

Vijayapura live-in relationship murder case – girlfriend and her brother accused of strangling partner

Live-in Relationship – ಪ್ರಿಯಕರನ ಹತ್ಯೆ: ಆಘಾತಕಾರಿ ಸತ್ಯ ಬಿಚ್ಚಿಟ್ಟ ಪ್ರೇಯಸಿ

ಹತ್ಯೆಗೊಳಗಾದ ವ್ಯಕ್ತಿಯನ್ನು ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ (26) ಎಂದು ಗುರ್ತಿಸಲಾಗಿದ್ದು, ಕೃತ್ಯ ಎಸಗಿದವರು ತಯ್ಯಾಬಾ (ಪ್ರೇಯಸಿ) ಮತ್ತು ಆಕೆಯ ಸಹೋದರ ಅಸ್ಲಮ್ ಭಾಗವಾನ್ ಎಂದು ತಿಳಿದುಬಂದಿದೆ. ಗೋಲಗುಂಬಜ್ ಪೊಲೀಸ್ ಠಾಣೆ (Golagumbaz Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸದ್ಯ ತಯ್ಯಾಬಾ ಮತ್ತು ಆಕೆಯ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Live-in Relationship – ಮುಂಜಾನೆ ಠಾಣೆಯಲ್ಲಿ ನಡೆದದ್ದೇನು?

ಇಂದು ಬೆಳಗ್ಗೆ ಗೋಲಗುಂಬಜ್ ಪೊಲೀಸ್ ಠಾಣೆಗೆ ತೆರಳಿದ ತಯ್ಯಾಬಾ, ತಾನೇ ತನ್ನ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ! ಇದನ್ನು ಕೇಳಿ ಠಾಣೆಯಲ್ಲಿದ್ದ ಪೊಲೀಸರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ತನ್ನ ಸಹೋದರ ಅಸ್ಲಮ್ ಕೂಡ ಈ ಕೊಲೆಗೆ ಸಹಕಾರ ನೀಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ.

ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸಮೀರ್‌ನ ದೇಹದ ಮೇಲೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ. ಮೃತದೇಹದ ಪರೀಕ್ಷೆಗಾಗಿ ‘ಸುಕೋ ಟೀಮ್’ ಸ್ಥಳಕ್ಕೆ ಆಗಮಿಸಿತ್ತು. ಮನೆಯ ಮಾಲೀಕ ಅಬ್ದುಲ್ ಜಮಾದಾರ್ ಅವರ ಪ್ರಕಾರ, 5-6 ತಿಂಗಳ ಹಿಂದೆ ತಯ್ಯಾಬಾ ಸಹೋದರಿಗೆ ಬಾಡಿಗೆಗೆ ಮನೆ ನೀಡಲಾಗಿತ್ತು. ಸಮೀರ್ ಇಲ್ಲಿಗೆ ಬಂದು ಹೋಗುತ್ತಿದ್ದರೂ, ಯಾರಿಗೂ ಗೊತ್ತಾಗದಂತೆ ವರ್ತಿಸುತ್ತಿದ್ದ. ಬೆಳಿಗ್ಗೆ ಪೊಲೀಸರು ಬಂದಾಗಲೇ ಕೊಲೆ ವಿಚಾರ ತಿಳಿದಿದ್ದು ಎಂದು ಅವರು ಹೇಳಿದ್ದಾರೆ. Read this also : ‘ಐಬೊಮ್ಮ’ ರವಿ ಬಂಧನ! ಆ ಕೋಪದಲ್ಲಿ ಹೆಂಡತಿಯೇ ಪೊಲೀಸರಿಗೆ ಮಾಹಿತಿ ಕೊಟ್ಟಳಾ? ಇಲ್ಲಿದೆ ಸಂಪೂರ್ಣ ವಿವರ!

Live-in Relationship – ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದಳೆ?

ಪ್ರಾಥಮಿಕ ಮೂಲಗಳ ಪ್ರಕಾರ, ಕೊಲೆಯಾದ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ಒಬ್ಬ ರೌಡಿ ಶೀಟರ್ ಆಗಿದ್ದ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಕೊಲೆ ಮತ್ತು ಕೊಲೆ ಯತ್ನದಂತಹ ಪ್ರಕರಣಗಳು ದಾಖಲಾಗಿದ್ದವಂತೆ. ಸಮೀರ್ ಮತ್ತು ತಯ್ಯಾಬಾ ಕಳೆದ ನಾಲ್ಕು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ, ಒಂದು ವರ್ಷದ ಹಿಂದೆ ಅವರ ನಡುವೆ ಮನಸ್ತಾಪ ಉಂಟಾಗಿ, ಸಮೀರ್‌ನ ಮೇಲೆ ಹಲ್ಲೆ ಕೂಡ ನಡೆದಿತ್ತು ಎನ್ನಲಾಗಿದೆ. ಕೆಲಕಾಲ ದೂರವಿದ್ದರೂ, ನಂತರ ಮತ್ತೆ ಒಂದಾಗಿದ್ದರು.

Vijayapura live-in relationship murder case – girlfriend and her brother accused of strangling partner

Live-in Relationship – ಕಿರುಕುಳವೇ ನಿರ್ಧಾರಕ್ಕೆ ಕಾರಣ

ಮತ್ತೆ ಒಂದಾದ ಬಳಿಕ ಸಮೀರ್, ತಯ್ಯಾಬಾಗೆ ತೀವ್ರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆತನ ದೌರ್ಜನ್ಯ ಮತ್ತು ಕಿರುಕುಳದಿಂದ ಬೇಸತ್ತ ತಯ್ಯಾಬಾ, ಅಂತಿಮವಾಗಿ ಸಮೀರ್‌ನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ. ನಿನ್ನೆ ರಾತ್ರಿ ಸುಮಾರು 8:30ಕ್ಕೆ ಸಮೀರ್ ತಯ್ಯಾಬಾ ಬಳಿ ಬಂದಿದ್ದ. ರಾತ್ರಿ 11 ರಿಂದ 12 ಗಂಟೆ ವೇಳೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ತಯ್ಯಾಬಾ ಮತ್ತು ಅಸ್ಲಮ್ ಶವದೊಂದಿಗೆ ಬೆಳಕು ಹರಿಯುವವರೆಗೂ ಕಾಯ್ದು, ಬೆಳಿಗ್ಗೆ 8 ಗಂಟೆಗೆ ಠಾಣೆಗೆ ಹೋಗಿ ತಾವೇ ತಪ್ಪೊಪ್ಪಿಕೊಂಡಿದ್ದಾರೆ. ಸಮೀರ್‌ನ ತಂದೆ, “ನನ್ನ ಮಗನನ್ನು ನಾಲ್ಕು ಜನರು ಸೇರಿ ಕೊಲೆ ಮಾಡಿದ್ದಾರೆ. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು,” ಎಂದು ಆಗ್ರಹಿಸಿದ್ದಾರೆ.

ಸದ್ಯ ಪೊಲೀಸರು, ತಯ್ಯಾಬಾಗೆ ಕಿರುಕುಳ ಮಾತ್ರ ಕಾರಣವಾ ಅಥವಾ ಬೇರೆ ಏನಾದರೂ ವೈಯಕ್ತಿಕ ದ್ವೇಷವಿತ್ತಾ ಎಂಬುದರ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಸಮೀರ್‌ನ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ. ಲಿವಿನ್ ರಿಲೇಷನ್‌ಶಿಪ್‌ನ ಈ ದುರಂತ ಅಂತ್ಯಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *

Scroll to Top