Rahul Gandhi – ಬಿಹಾರ ವಿಧಾನಸಭಾ ಚುನಾವಣೆ (Bihar Assembly Elections) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಾಯಕರು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮೊದಲ ಹಂತದ ಮತದಾನಕ್ಕೆ ದಿನಾಂಕ ಹತ್ತಿರವಾಗುತ್ತಿರುವಾಗ, ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಚಾರದಲ್ಲಿ ಹೊಸ ಶೈಲಿಯನ್ನು ಪ್ರದರ್ಶಿಸಿದ್ದಾರೆ.

ಭಾನುವಾರದಂದು (ನವೆಂಬರ್ 2, 2025) ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ರ್ಯಾಲಿ ನಡೆಸಿದ ರಾಹುಲ್, ನಂತರ ಸ್ಥಳೀಯ ಮೀನುಗಾರರನ್ನು ಭೇಟಿ ಮಾಡಿದರು. ಅಚ್ಚರಿ ಎಂಬಂತೆ, ಅವರು ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಕಷ್ಟಗಳನ್ನು ಆಲಿಸುವುದಷ್ಟೇ ಅಲ್ಲ, ಸ್ವತಃ ಅವರೊಂದಿಗೆ ಕೆರೆಗೆ ಇಳಿದು ಮೀನು ಹಿಡಿದರು!
Rahul Gandhi – ಕೆರೆಗಿಳಿದ ರಾಹುಲ್ ಗಾಂಧಿ: ಅಚ್ಚರಿ ಮೂಡಿಸಿದ ನಾಯಕನ ನಡೆ
ಮೊದಲ ಹಂತದ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ, ಬಿಹಾರದಲ್ಲಿ ಪ್ರಚಾರದ ಕಾವು ಜೋರಾಗಿದೆ. ಅದೇ ರೀತಿ ರಾಹುಲ್ ಗಾಂಧಿ ಕೂಡ ತಮ್ಮ ಪ್ರಚಾರದ ವೇಗವನ್ನು ಹೆಚ್ಚಿಸಿದ್ದಾರೆ. ಭಾನುವಾರದಂದು ಬೇಗುಸರಾಯ್ ಜಿಲ್ಲೆಯಲ್ಲಿ ರ್ಯಾಲಿ ಮುಗಿಸಿದ ನಂತರ, ಅವರು ನೇರವಾಗಿ ಸ್ಥಳೀಯ ಮೀನುಗಾರರ ಸಮುದಾಯವನ್ನು ಭೇಟಿ ಮಾಡಲು ತೆರಳಿದರು.
ವಿಶೇಷ ಅಂದ್ರೆ, ಅವರು ಸುಮ್ಮನೆ ಮಾತಾಡಿ ಬರಲಿಲ್ಲ. ಜನರ ಕಷ್ಟಗಳನ್ನು ಹತ್ತಿರದಿಂದ ತಿಳಿಯಲು, ರಾಹುಲ್ ಗಾಂಧಿ, ತಮ್ಮದೇ ಮೈತ್ರಿಕೂಟದ ವಿಐಪಿ (ವಿಕಾಸಶೀಲ ಇನ್ಸಾನ್ ಪಾರ್ಟಿ) ಮುಖ್ಯಸ್ಥ ಮುಖೇಶ್ ಸಾಹ್ನಿ ಮತ್ತು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಅವರೊಂದಿಗೆ ನೇರವಾಗಿ ಕೆರೆಯ ನೀರಿಗಿಳಿದು, ಮೀನುಗಾರರಂತೆ ಬಲೆ ಬೀಸಿ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದರು!
ಇದು ಸಂಪೂರ್ಣ ನಿರೀಕ್ಷಿತವಲ್ಲದ ನಡೆ (Impromptu) ಆಗಿತ್ತು. ತಮ್ಮ ಟ್ರೇಡ್ಮಾರ್ಕ್ ಬಿಳಿ ಟಿ-ಶರ್ಟ್ ಮತ್ತು ಕಾರ್ಗೋ ಪ್ಯಾಂಟ್ಗಳಲ್ಲೇ ಕೆರೆಗಿಳಿದ ರಾಹುಲ್, ಮೀನುಗಾರರ ಪಕ್ಕ ನಿಂತು ಮೀನು ಹಿಡಿದರು. ಮೀನುಗಾರಿಕೆ ಸಮುದಾಯಕ್ಕೆ ಸೇರಿದ ಮುಖೇಶ್ ಸಾಹ್ನಿ ಅವರು ಬಲೆ ಬೀಸಿ ಮೀನು ಹಿಡಿಯುವ ಕೌಶಲ್ಯವನ್ನು ರಾಹುಲ್ ಅವರಿಗೆ ತೋರಿಸಿದರು.

Rahul Gandhi : ಶಾಕ್ ಆದ ಜನ
ಪ್ರತಿಪಕ್ಷದ ನಾಯಕರು ಈ ರೀತಿ ಕೆರೆಗೆ ಇಳಿದು, ತಮ್ಮಂತೆಯೇ ಮೀನು ಹಿಡಿಯುವುದನ್ನು ಕಂಡ ಅಲ್ಲಿನ ಸ್ಥಳೀಯರೆಲ್ಲಾ ಅಕ್ಷರಶಃ ದಂಗುಬಡ್ರು! “ನಾವು ಹಿಂದೆಂದೂ ಇಂತಹ ನಾಯಕನನ್ನು ನೋಡಿಲ್ಲ. ನಮ್ಮೊಂದಿಗೆ ಹೀಗೆ ಬೆರೆಯುವುದು ನಮಗೆಲ್ಲಾ ಹೆಮ್ಮೆಯ ಸಂಗತಿ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜನರು “ರಾಹುಲ್ ಗಾಂಧಿ ಜಿಂದಾಬಾದ್” ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಕಾಂಗ್ರೆಸ್ ಪಕ್ಷವು ಈ ವಿಡಿಯೋ ಕ್ಲಿಪ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ (X, ಮೊದಲು ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲಿಂದ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮೀನುಗಾರರ ಸಮಸ್ಯೆಗಳು ಮತ್ತು ಹೋರಾಟಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. Read this also : ನವೆಂಬರ್ 21ರ ಸಿಎಂ ಚರ್ಚೆ, ಸಿದ್ದರಾಮಯ್ಯ ಕೆಂಡಾಮಂಡಲ, ಕಾಂಗ್ರೆಸ್ನಲ್ಲಿ ತೀವ್ರ ಸಂಚಲನ…!

Rahul Gandhi -ಮಹಾ ಮೈತ್ರಿಕೂಟದ ಪ್ರಮುಖ ಭರವಸೆಗಳು
ಮೀನುಗಾರರನ್ನು ಭೇಟಿ ಮಾಡಿದ ನಂತರ, ಕಾಂಗ್ರೆಸ್ ಪಕ್ಷವು ಮಹಾ ಮೈತ್ರಿಕೂಟವು (INDIA Bloc) ಈ ಸಮುದಾಯಕ್ಕೆ ನೀಡಿದ ಪ್ರಮುಖ ಭರವಸೆಗಳನ್ನು ಪುನರುಚ್ಚರಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳು:
- ವಿಮಾ ಯೋಜನೆ: ಮೀನುಗಾರಿಕೆ ಸಮುದಾಯಕ್ಕೆ ವಿಮಾ ಯೋಜನೆಯನ್ನು ಜಾರಿಗೊಳಿಸುವುದು.
- ಆರ್ಥಿಕ ನೆರವು: ಮೀನುಗಾರಿಕೆಯನ್ನು ನಿಷೇಧಿಸುವ “ಮೂರು ತಿಂಗಳ ಅವಧಿಗೆ” ಪ್ರತಿ ಮೀನುಗಾರ ಕುಟುಂಬಕ್ಕೆ ₹ 5,000 ಆರ್ಥಿಕ ನೆರವು ನೀಡುವುದು.
