HomeStateCrime : ಮದುವೆಯಾದ ಎರಡೇ ವರ್ಷಕ್ಕೆ ವಿವಾಹಿತೆ ನಿಗೂಢ ಸಾವು, ಪ್ರೀತಿಸಿದ ಪತಿಯೇ ಜೀವ ತೆಗೆದ್ನಾ?

Crime : ಮದುವೆಯಾದ ಎರಡೇ ವರ್ಷಕ್ಕೆ ವಿವಾಹಿತೆ ನಿಗೂಢ ಸಾವು, ಪ್ರೀತಿಸಿದ ಪತಿಯೇ ಜೀವ ತೆಗೆದ್ನಾ?

Crime – ಪ್ರೀತಿ, ವಿಶ್ವಾಸದ ಮೇಲೆ ಕಟ್ಟಿದ ಸಂಸಾರವೊಂದು ಕೇವಲ ಎರಡೇ ವರ್ಷಕ್ಕೆ ಛಿದ್ರವಾಗಿದೆ. ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಪತಿಯೇ ಈ ಸಾವಿಗೆ ಕಾರಣನಾ ಎಂಬ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿರುವ ಈ ದುರಂತ ಘಟನೆ, ಇಡೀ ಪ್ರದೇಶವನ್ನೇ ಬೆಚ್ಚಿ ಬೀಳಿಸಿದೆ.

Mystery Death of Married Woman in Davanagere – Husband Under Suspicion - Crime News

Crime – ಪ್ರೀತಿಯಿಂದ ಆರಂಭ, ಕಣ್ಣೀರಿನ ಅಂತ್ಯ

ಹೊನ್ನೆಬಾಗಿ ಗ್ರಾಮದ ಜಿಶಾನ್ (23) ಅಡಿಕೆ ವ್ಯಾಪಾರಿಯಾಗಿದ್ದರೆ, ಚನ್ನಗಿರಿ ಪಟ್ಟಣದ ಜುನೇರಾ ಕೌಸರ್ (19) ಕಾಲೇಜಿಗೆ ಹೋಗುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಸುಮಾರು ಎರಡು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ಇವರ ಪ್ರೀತಿಯ ಸಂಕೇತವಾಗಿ ಒಂದೂವರೆ ವರ್ಷದ ಮುದ್ದಾದ ಮಗು ಸಹ ಇದೆ. ಸ್ವರ್ಗದಂತಹ ಸುಖ ಸಂಸಾರ ನಡೆಸಬೇಕಿದ್ದ ಈ ಜೋಡಿಯಲ್ಲಿ ಇತ್ತೀಚೆಗೆ ಕಲಹಗಳು ಶುರುವಾಗಿ, ಕೌಸರ್ ಏಕಾಏಕಿ ಹೆಣವಾಗಿದ್ದಾಳೆ.

Crime – ಕಿರುಕುಳ, ಜಗಳ, ರಾಜೀ ಪಂಚಾಯಿತಿ: ನಡೆದಿದ್ದೇನು?

ಪತಿ ಜಿಶಾನ್, ಪತ್ನಿ ಕೌಸರ್‌ಗೆ ಪ್ರತಿದಿನವೂ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. “ನಾನು ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೇನೆ, ಅವಳನ್ನೇ ಮದುವೆಯಾಗುತ್ತೇನೆ” ಎಂದು ಬೆದರಿಸಿ, ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನಂತೆ. ಪತಿಯ ಈ ಕಾಟವನ್ನು ಸಹಿಸಲಾಗದೆ ಕೌಸರ್ ಕಳೆದ ವಾರ ತವರಿಗೆ ಹೋಗಿದ್ದರು. ಆದರೆ, ಹೆತ್ತವರು ಮಧ್ಯಸ್ಥಿಕೆ ವಹಿಸಿ, ಗುರುವಾರ ರಾಜೀ ಪಂಚಾಯಿತಿ ನಡೆಸಿದ್ದರು. ಆದ್ರೆ ದುರಂತ ನೋಡಿ, ರಾಜೀ ಪಂಚಾಯಿತಿ ನಡೆದು ಕೇವಲ ಮೂರೇ ದಿನಕ್ಕೆ ಮಗಳು ಸಾವಿನ ಮನೆಯ ಸೇರಿದ್ದಾಳೆ. Read this also : ಇಬ್ಬರು ‘ಬಂಗಾರದ’ ಹೆಣ್ಣುಮಕ್ಕಳಿದ್ದರೂ ಪುತ್ರ ವ್ಯಾಮೋಹಕ್ಕೆ ತಾಯಿ ಬಲಿ…!

Crime – ಕೌಸರ್ ಸಾವು ಅನುಮಾನಾಸ್ಪದ: ಕೊಲೆಯ ಶಂಕೆ!

ಶನಿವಾರ (ಅಕ್ಟೋಬರ್ 26) ರಾತ್ರಿ ವೇಳೆ, ಕೌಸರ್ ತಮ್ಮ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಪತಿ ಮತ್ತು ಆತನ ಕುಟುಂಬಸ್ಥರು ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇಂದು (ಅಕ್ಟೋಬರ್ 26) ಬೆಳಗ್ಗೆ ಕೌಸರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಲ್ಲಿ ಮತ್ತೊಂದು ಗಂಭೀರ ವಿಷಯ ಹೊರಬಿದ್ದಿದೆ. ಮೃತಳ ದೇಹದ ತುಂಬೆಲ್ಲಾ ಹಲ್ಲೆ ಮಾಡಿದ ಗಾಯಗಳಿರುವುದು ಪೋಷಕರ ಗಮನಕ್ಕೆ ಬಂದಿದೆ. ಅಂದರೆ, ನೇಣು ಬಿಗಿಯುವ ಮೊದಲು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂಬ ಅನುಮಾನ ಬಲವಾಗಿದೆ. “ಪತಿ ಮಾಡಿದ ವಂಚನೆ, ಮೋಸ ಮತ್ತು ಕಿರುಕುಳವೇ ಮಗಳ ಸಾವಿಗೆ ಕಾರಣ. ಇದು ಕೊಲೆ,” ಎಂದು ಕೌಸರ್ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mystery Death of Married Woman in Davanagere – Husband Under Suspicion - Crime News

Crime – ಪತಿ ಶರಣಾಗತಿ, ಕೊಲೆ ಕೇಸ್‌ ದಾಖಲು

ಪತ್ನಿ ಶಿವಮೊಗ್ಗದಲ್ಲಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ, ಇತ್ತ ಪತಿ ಜಿಶಾನ್ ತಾನೇ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಗಳ ದೇಹದ ಗಾಯಗಳನ್ನು ಕಂಡ ಕೌಸರ್ ಕುಟುಂಬಸ್ಥರು ಜಿಶಾನ್ ವಿರುದ್ಧ ಕೊಲೆ ಕೇಸ್ (Murder Case) ದಾಖಲಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸರು ಅನುಮಾನಸ್ಪದ ಸಾವು (Unnatural Death) ಪ್ರಕರಣ ದಾಖಲಿಸಿಕೊಂಡು, ಜಿಶಾನ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪ್ರೇಮದ ದೋಣಿಯಲ್ಲಿ ಸಾಗಬೇಕಿದ್ದ ಯುವತಿಯ ಬದುಕು ಹೀಗೆ ಅರ್ಧದಲ್ಲೇ ಮುಗಿಯಲು ಕಾರಣ ಯಾರು? ಪತಿಯೇ ಈ ಕೃತ್ಯದ ಹಿಂದಿದ್ದಾನಾ? ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಮೃತಳ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular