Sunday, October 26, 2025
HomeStateLocal News : ಗುಡಿಬಂಡೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಸ್ಮರಣೆ

Local News : ಗುಡಿಬಂಡೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಸ್ಮರಣೆ

Local News – ಕುಶಲಕರ್ಮಿಗಳ ದೈವ, ದೇವಶಿಲ್ಪಿ ಶ್ರೀ ವಿಶ್ವಕರ್ಮರ ಜಯಂತಿಯನ್ನು ಗುಡಿಬಂಡೆ ತಾಲ್ಲೂಕಿನಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿಕ್ಕಬಳ್ಳಾಫುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವಿಸಲಾಯಿತು.

Community members celebrating Vishwakarma Jayanthi with floral tributes in Gudibande Taluk - Local News

Local News – ವಿಶ್ವಕರ್ಮರ ಮಹತ್ವ: ವಾಸ್ತುಶಿಲ್ಪ ಮತ್ತು ಕಲೆಗೆ ಅಪ್ರತಿಮ ಕೊಡುಗೆ

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಬಿಇಒ ಕಚೇರಿಯ ಸಿಬ್ಬಂದಿ ಹರ್ಷ ಅವರು, ವಿಶ್ವಕರ್ಮರ ಮಹತ್ವವನ್ನು ವಿವರಿಸಿದರು. ಋಗ್ವೇದ ಮತ್ತು ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವಶಕ್ತಿಶಾಲಿ ಮತ್ತು ಶ್ರೇಷ್ಠ ವಾಸ್ತುಶಿಲ್ಪಿ ಎಂದು ಕರೆಯಲಾಗಿದೆ. ಲಂಕಾ, ದ್ವಾರಕಾ, ಮತ್ತು ಇಂದ್ರಪ್ರಸ್ಥದಂತಹ ಭವ್ಯ ನಗರಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ. ಪಠ್ಯ ಪುಸ್ತಕಗಳಿಲ್ಲದೆ, ಆಧುನಿಕ ತಂತ್ರಜ್ಞಾನವಿಲ್ಲದೆ ಕುಶಲಕರ್ಮಿಗಳಾಗಿ ಬೆಳೆದ ವಿಶ್ವಕರ್ಮ ಸಮುದಾಯವು ಜಗತ್ತಿನಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸಿದೆ. ಈ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

Local News – ಪಂಚ ಕಸುಬುಗಳು ಮತ್ತು ಸಮಾಜಕ್ಕೆ ಕೊಡುಗೆ

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ (ಇಒ) ನಾಗಮಣಿ ಅವರು ಮಾತನಾಡಿ, ವಿಶ್ವಕರ್ಮರು ಕೇವಲ ಶಿಲ್ಪಿಗಳಲ್ಲ, ಅವರು ದೇವರುಗಳ ಶಿಲ್ಪಿಗಳು. ದೇವಾಲಯ, ಅರಮನೆ, ಮನೆ, ಮತ್ತು ಅಲಂಕಾರಿಕ ಪೀಠೋಪಕರಣಗಳನ್ನು ನಿರ್ಮಿಸುವಲ್ಲಿ ಅವರ ಪಾತ್ರ ದೊಡ್ಡದು. ಪಂಚ ಕಸುಬುಗಳಾದ ಚಿನ್ನಾಭರಣ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಮತ್ತು ಇನ್ನಿತರ ವೃತ್ತಿಗಳನ್ನು ನಡೆಸುವ ಮೂಲಕ ವಿಶ್ವಕರ್ಮ ಸಮುದಾಯವು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದೆ. ವಿಶ್ವಕರ್ಮರ ಆಚಾರ-ವಿಚಾರಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ, ಪ್ರವಾಸೋದ್ಯಮದ ಅಭಿವೃದ್ಧಿಗೂ ಈ ಸಮುದಾಯದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು. Read this also : ಅಮೇರಿಕಾದ ಹೃದಯ ಭಾಗದಲ್ಲಿ ಒಂದು ಅದ್ಭುತ ಲೋಕ, ಟೆಕ್ಸಾಸ್ ಎಂಬ ಒಂದು ವಿಸ್ಮಯಕಾರಿ ಜಗತ್ತು, ಭಾರತೀಯರ ದೃಷ್ಟಿಕೋನದಲ್ಲಿ…!

Community members celebrating Vishwakarma Jayanthi with floral tributes in Gudibande Taluk - Local News

Local News – ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು

ಈ ಕಾರ್ಯಕ್ರಮದಲ್ಲಿ ಬಿ.ಇ.ಒ ಕೃಷ್ಣಕುಮಾರಿ, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ಕರುನಾಡು ಸಾಹಿತ್ಯ ಪರಿಷತ್‌ನ ಪರಿಮಳ, ವಿಶ್ವಕರ್ಮ ಸಂಘದ ಅಧ್ಯಕ್ಷ ಬ್ರಹ್ಮಾಚಾರಿ, ಕಾರ್ಯದರ್ಶಿ ವೀರಾಚಾರಿ, ಮತ್ತು ಮುಖಂಡರಾದ ವೆಂಕಟರಮಣಚಾರಿ, ಅಣ್ಣಿ ಆಚಾರಿ, ವೆಂಕಟಾಚಲಪತಿ, ವೆಂಕಟಾಚಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular