HomeStateLocal news : ಗುಡಿಬಂಡೆ: ಪೋಲಂಪಲ್ಲಿ ರಸ್ತೆ ಟಿಪ್ಪರ್‌ಗಳ ಹಾವಳಿಗೆ ತತ್ತರ! ಹದಗೆಟ್ಟ ರಸ್ತೆಯಿಂದ ಸ್ಥಳೀಯರಿಗೆ...

Local news : ಗುಡಿಬಂಡೆ: ಪೋಲಂಪಲ್ಲಿ ರಸ್ತೆ ಟಿಪ್ಪರ್‌ಗಳ ಹಾವಳಿಗೆ ತತ್ತರ! ಹದಗೆಟ್ಟ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ…!

Local news – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿ-ವರ್ಲಕೊಂಡ ರಸ್ತೆಯ ಅವಸ್ಥೆ ನಿಜಕ್ಕೂ ಶೋಚನೀಯವಾಗಿದೆ. ಒಂದೆಡೆ ಗುಂಡಿಗಳಿಂದ ತುಂಬಿದ ರಸ್ತೆ, ಮತ್ತೊಂದೆಡೆ ಅತಿ ಭಾರ ಹೊತ್ತ ಟಿಪ್ಪರ್‌ಗಳ ನಿರಂತರ ಸಂಚಾರದಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

Gudibande Polampalli Road Damage Due to Tipper Trucks and Quarrying - Local News

Local news – ಯಾಕೆ ಹೀಗಾಗಿದೆ?

ಈ ರಸ್ತೆ ಗುಡಿಬಂಡೆ ಪಟ್ಟಣದಿಂದ ಪೋಲಂಪಲ್ಲಿ ಮತ್ತು ವರ್ಲಕೊಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಪ್ರತಿದಿನ ನೂರಾರು ಜನರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ, ರಸ್ತೆಯಲ್ಲಿ ಎಲ್ಲಿ ನೋಡಿದರೂ ಗುಂಡಿಗಳೇ. ಇದರ ಜೊತೆಗೆ, ಈ ಭಾಗದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಚಟುವಟಿಕೆಗಳಿಂದಾಗಿ ಭಾರೀ ಗಾತ್ರದ ಟಿಪ್ಪರ್‌ಗಳು ಓಡಾಡುತ್ತಿದ್ದು, ರಸ್ತೆಯನ್ನು ಮತ್ತಷ್ಟು ಹಾಳು ಮಾಡುತ್ತಿವೆ.

Local news – ಶಾಲೆ ಮಕ್ಕಳ ದುಃಸ್ಥಿತಿ ಮತ್ತು ರೈತರ ಆತಂಕ

ಮೇಡಿಮಾಕಲಹಳ್ಳಿ ಗ್ರಾಮದ ರೈತ ಲಕ್ಷ್ಮೀನಾರಾಯಣರೆಡ್ಡಿ ತಮ್ಮ ಆತಂಕವನ್ನು ವ್ಯಕ್ತಪಡಿಸಿ, “ವರ್ಷಗಳಿಂದ ನಾವು ಇದೇ ರಸ್ತೆಯನ್ನು ಬಳಸುತ್ತಿದ್ದೇವೆ. ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು ಜೀವ ಕೈಯಲ್ಲಿ ಹಿಡಿದು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರಾತ್ರಿ ವೇಳೆ ಟಿಪ್ಪರ್‌ಗಳು ಅತಿ ವೇಗದಲ್ಲಿ ಚಲಿಸುವುದರಿಂದ ರೈತರು ಮತ್ತು ಸಣ್ಣ ವಾಹನ ಚಾಲಕರು ಭಯದಿಂದ ಓಡಾಡಬೇಕಾಗಿದೆ” ಎಂದು ತಿಳಿಸಿದ್ದಾರೆ.

ಈ ಕುರಿತು ಕಲ್ಲುಗಣಿಗಾರಿಕೆ ಮಾಲೀಕರ ಬಳಿ ಕೇಳಿದಾಗ, “ನಿಮಗೆ ಏನು ಬೇಕೋ ಅದನ್ನು ಮಾಡಿಕೊಳ್ಳಿ, ನಾವು ಯಾರಿಗೂ ಹೆದರುವುದಿಲ್ಲ” ಎಂದು ಉಡಾಫೆ ಉತ್ತರ ಕೊಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಗಣಿಗಾರಿಕೆಗೆ ಬಳಸುವ ಸ್ಫೋಟಕಗಳಿಂದಾಗಿ ಸುತ್ತಮುತ್ತಲಿನ ಮನೆಗಳಲ್ಲಿ ಭೂಕಂಪನದ ಅನುಭವವಾಗುತ್ತಿದ್ದು, ಇದರಿಂದ ಜನರ ಭಯ ಇನ್ನಷ್ಟು ಹೆಚ್ಚಾಗಿದೆ. Read this also : ಎಚ್ಚರ! ಹೊಸ ರೀತಿಯ ಸೈಬರ್ ವಂಚನೆ: OTP ಇಲ್ಲದೆ ಖಾತೆ ಖಾಲಿ….!

Gudibande Polampalli Road Damage Due to Tipper Trucks and Quarrying - Local News

Local news – ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಈ ಸಮಸ್ಯೆಯನ್ನು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೇ ಇದ್ದರೆ, ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular