Kempegowda Jayanti 2025 – ಮಹನೀಯರ ಜಯಂತಿಗಳನ್ನು ಆಚರಿಸುವುದು ಮುಖ್ಯ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ವರ್ಷಕ್ಕೊಮ್ಮೆ ಅವರನ್ನು ನೆನಪಿಸಿಕೊಂಡರೆ ಸಾಲದು, ಅವರ ಮಾರ್ಗದರ್ಶನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆ ಎಂದಿದ್ದಾರೆ.
Kempegowda Jayanti 2025 – ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸದಾ ಪ್ರಸ್ತುತ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಅನೇಕ ಮಹನೀಯರು ಸಮಾಜದಲ್ಲಿ ಮೂಡನಂಬಿಕೆಗಳು, ಅನಿಷ್ಟ ಪದ್ದತಿಗಳು, ಅನಾಚಾರಗಳ ವಿರುದ್ದ ತಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಅವರ ನೆನಪಿನಲ್ಲಿ ನಾವೆಲ್ಲಾ ಇಂದು ಅವರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ. ಆದರೆ ಇದು ಅವರ ಜಯಂತಿಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಅವರಿಗೆ ಗೌರವ ಕೊಟ್ಟಂತೆ ಆಗುವುದಿಲ್ಲ. (Kempegowda Jayanti 2025) ಬದಲಿಗೆ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು. ಕನಿಷ್ಟ ಅವರ ಆದರ್ಶಗಳಲ್ಲಿ ಶೇ.10 ರಷ್ಟಾದರೂ ಪಾಲನೆ ಮಾಡಿದಾಗ ಅವರಿಗೆ ನಾವು ಗೌರವ ಕೊಟ್ಟಂತಾಗುತ್ತದೆ ಜೊತೆಗೆ ಅವರ ಜಯಂತಿ ಆಚರಣೆ ಮಾಡಿದ್ದಕ್ಕೂ ಅರ್ಥ ಬರುತ್ತದೆ ಎಂದರು.
Kempegowda Jayanti 2025 – ಗುಡಿಬಂಡೆಗೆ ಕೆಂಪೇಗೌಡರ ಸ್ವಾಗತ ದ್ವಾರ
ನಾಡಪ್ರಭು ಕೆಂಪೇಗೌಡರು ಸುಮಾರು ವರ್ಷಗಳ ಹಿಂದೆಯೆ ಸುಂದರವಾದ ಹಾಗೂ ಸುರಕ್ಷಿತವಾದ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದರು. ಆದರೆ ಇದೀಗ ಅದೇ ಬೆಂಗಳೂರು ಮಳೆ ಬಂದರೇ ಸಾಕು ಮಳೆಯ ನೀರಿನಲ್ಲಿ ಮುಳುಗುತ್ತದೆ. ಇಂದಿನ ತಂತ್ರಜ್ಞಾನದಲ್ಲೂ ಸಹ ಈ ರೀತಿಯ ಅವ್ಯವಸ್ಥೆ ಆಗುತ್ತಿದೆ ಎಂದರೇ ಅದು ಮನುಷ್ಯರ (Kempegowda Jayanti 2025) ದುರಾಸೆಯೇ ಕಾರಣ. ಆದ್ದರಿಂದ ನಮ್ಮ ಪೂರ್ವಜರ ಆದರ್ಶಗಳನ್ನು ನಾವು ಅನುಸರಿಸಬೇಕು. ಮುಂದಿನ ಕೆಂಪೇಗೌಡ ಜಯಂತಿಯೊಳಗೆ ಗುಡಿಬಂಡೆಗೆ ಪ್ರವೇಶ ಮಾಡುವ ಸೂಕ್ತ ಸ್ಥಳದಲ್ಲಿ ಕೆಂಪೇಗೌಡ ಹಾಗೂ ಹಾವಳಿ ಬೈರೇಗೌಡರ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
Kempegowda Jayanti 2025 – ಕೆಂಪೇಗೌಡರ ದೂರದೃಷ್ಟಿ ಯೋಜನೆಗಳು ಇಂದಿಗೂ ಮಾದರಿ
ಮುಖ್ಯ ಭಾಷಣಕಾರರಾಗಿ ಮಾತನಾಡಿದ ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಕೆಂಪೇಗೌಡ ರವರ ಜೀವನದ ಬಗ್ಗೆ ತಿಳಿಸುತ್ತಾ, ಕೆಂಪೇಗೌಡರು ದೂರದ ದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು. ನಗರಗಳನ್ನು ಹೇಗೆ ನಿರ್ಮಾಣ ಮಾಡಬೇಕೆಂದು ತಿಳಿಸಿಕೊಟ್ಟರು. ಉದ್ಯಾನಗಳು, ಕೆರೆ ಕುಂಟೆಗಳು, ಕೃಷಿ ಭೂಮಿ, ತೋಟಗಾರಿಕೆ ಕಸುಬುಗಳಾಧಾರಿತ ಪೇಟೆಗಳು, ಮಾರುಕಟ್ಟೆಗಳು, ಉದ್ದಿಮೆಗಳು ಬೆಳೆಯಬೇಕೆಂಬ ದೃಷ್ಟಿಯಿಂದ ಯೋಜಿತ ನಗರ ನಿರ್ಮಾಣ ಮಾಡಿದ್ದರಿಂದ ಇಂದು ಬೆಂಗಳೂರು ಸುಂದರ (Kempegowda Jayanti 2025) ಹಾಗೂ ಬೃಹತ್ ನಗರವಾಗಿ ಬೆಳೆದಿದೆ. ಇಡೀ ವಿಶ್ವವೇ ಇಂದು ಬೆಂಗಳೂರಿನತ್ತ ಮುಖ ಮಾಡುತ್ತಿದೆ. ಕೆಂಪೇಗೌಡರ ಆದರ್ಶಗಳು, ಸ್ವಾಮಿನಿಷ್ಟೆ ಇಂದು ನಮ್ಮೆಲ್ಲರಿಗೂ ಮಾರ್ಗಸೂಚಿಯಾಗಿದೆ ಎಂದರು.
Read this also : ಕೆಂಪೇಗೌಡರ ಜಯಂತಿ: ಜೂನ್ 29ಕ್ಕೆ ಗುಡಿಬಂಡೆಯಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ..!
ಕಾರ್ಯಕ್ರಮದಲ್ಲಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಕೃಷಿ ಇಲಾಖೆಯ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ದಿವಾಕರ್, ಟಿ.ಹೆಚ್.ಒ ಡಾ.ಅಕ್ಷಯ್, ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಸಮುದಾಯದ ಮುಖಂಡರಾದ ಆದಿರೆಡ್ಡಿ, ಹೆಚ್.ಪಿ.ಲಕ್ಷ್ಮೀನಾರಾಯಣ, ಆದಿನಾರಾಯಣರೆಡ್ಡಿ, ಬಾಲಕೃಷ್ಣರೆಡ್ಡಿ, ಪ್ರಕಾಶ್ ಸೇರಿದಂತೆ ಪಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರುಗಳು ಹಾಜರಿದ್ದರು.