Bride : ಕನ್ಯೆ ಅಂದುಕೊಂಡ್ರೆ, ಇಬ್ಬರು ಮಕ್ಕಳ ತಾಯಿ! ಕೊಪ್ಪಳದ ಯುವಕನಿಗೆ ₹4 ಲಕ್ಷ ವಂಚನೆ…!

Bride – ಕೊಪ್ಪಳದಲ್ಲಿ (Koppal) ನಡೆದ ಒಂದು ವಿಚಿತ್ರ ಘಟನೆ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ. ಕನ್ಯೆ ಎಂದು ನಂಬಿಸಿ, ಇಬ್ಬರು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿ, ಬರೋಬ್ಬರಿ 4 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಗಾವತಿಯ ಯುವಕ ದುರ್ಗಾ ಪ್ರಸಾದ್ (34) ಈ ವಂಚನೆಗೆ ಬಲಿಯಾದವರು. ಕೇವಲ ಐದು ದಿನಗಳಲ್ಲಿ ತಾನು ಮೋಸ ಹೋಗಿರುವುದನ್ನು ಅರಿತು, ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Fake bride scam in Koppal – woman with children marries man for money

Bride – ಪ್ರೀತಿಯ ಹುಡುಕಾಟದಲ್ಲಿ ಸಿಕ್ಕ ವಂಚಕರ ಬಲೆ!

ದುರ್ಗಾ ಪ್ರಸಾದ್ ಅವರ ಪೋಷಕರು ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು. ಈ ವೇಳೆ, ಕೊಪ್ಪಳದ ಶ್ರೀದೇವಿ ಎಂಬ ಮದುವೆ ಬ್ರೋಕರ್ (Marriage Broker) ಅವರನ್ನು ಸಂಪರ್ಕಿಸಿದರು. ಶ್ರೀದೇವಿ ಅವರು ಆಂಧ್ರಪ್ರದೇಶದ ವಿಜಯವಾಡದ ತಾಯಾರು ಎಂಬ ಮತ್ತೊಬ್ಬ ಬ್ರೋಕರ್ ಅನ್ನು ಪರಿಚಯಿಸಿದರು.

Bride – ವಂಚಕರ ಗ್ಯಾಂಗ್‌ನಿಂದ ಸಂಚು!

ತಾಯಾರು ತನ್ನ ಗ್ಯಾಂಗ್‌ನ ಪಾರ್ವತಿ, ವಿಮಲಾ, ಮತ್ತು ಆಟೋ ಡ್ರೈವರ್ ಅಪ್ಪಾರಾವ್ ಜೊತೆ ಸೇರಿ, ವಿಜಯವಾಡದ ಕೃಷ್ಣಲಂಕೆಯ ಪಲ್ಲವಿ ಅಲಿಯಾಸ್ ಆಮನಿ ಎಂಬ ಯುವತಿಯನ್ನು ದುರ್ಗಾ ಪ್ರಸಾದ್ ಕುಟುಂಬಕ್ಕೆ ಪರಿಚಯಿಸಿದರು. ಮೊದಲ ನೋಟಕ್ಕೆ ಪಲ್ಲವಿ ಇಷ್ಟವಾಗಿದ್ದರಿಂದ, ದುರ್ಗಾ ಪ್ರಸಾದ್ ಕುಟುಂಬ ಮದುವೆಗೆ ಒಪ್ಪಿಕೊಂಡಿತು. ಮದುವೆಗೆ ಒಪ್ಪಿಕೊಂಡ ನಂತರ, ಬ್ರೋಕರ್‌ಗಳು ಒಂದು ಹೊಸ ನಾಟಕ ಶುರು ಮಾಡಿದರು. ಪಲ್ಲವಿ ತಂದೆ-ತಾಯಿಗೆ ಆರೋಗ್ಯ ಸರಿಯಿಲ್ಲ, ಅವರ ಚಿಕಿತ್ಸೆಗೆ ಹಣ ಬೇಕು ಎಂದು ಹೇಳಿ, ದುರ್ಗಾ ಪ್ರಸಾದ್ ಅವರಿಂದ ಬರೋಬ್ಬರಿ 3.5 ಲಕ್ಷ ರೂಪಾಯಿ ವಸೂಲಿ ಮಾಡಿದರು.

Bride – ವಿಜಯವಾಡದಲ್ಲಿ ಅದ್ಧೂರಿ ಮದುವೆ, ಗಂಗಾವತಿಯಲ್ಲಿ ಆರತಕ್ಷತೆ!

ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ಜೂನ್ 5 ರಂದು ವಿಜಯವಾಡದ ಕನಕದುರ್ಗಾ ದೇವಸ್ಥಾನದಲ್ಲಿ ಮದುವೆ ನಡೆಯಿತು. ನಂತರ, ಜೂನ್ 7 ರಂದು ಗಂಗಾವತಿಯಲ್ಲಿರುವ ದುರ್ಗಾ ಪ್ರಸಾದ್ ಅವರ ಮನೆಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆರತಕ್ಷತೆ ಮುಗಿದ ನಂತರ, ಪಲ್ಲವಿ ಜೊತೆ ಬಂದಿದ್ದ ಆಕೆಯ ಸಹೋದರ ಹರೀಶ್, ತಾಯಿಗೆ ಅನಾರೋಗ್ಯ ಎಂದು ಹೇಳಿ, ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಪಡೆದು ನಾಪತ್ತೆಯಾದನು. ಇದರ ನಂತರ, ಪಲ್ಲವಿ ದುರ್ಗಾ ಪ್ರಸಾದ್ ಜೊತೆ ಸಂಸಾರ ಮಾಡಲು ನಿರಾಕರಿಸಿದಳು.

Fake bride scam in Koppal – woman with children marries man for money

Bride – “ನನಗೆ ಈಗಾಗಲೇ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ!”

ದುರ್ಗಾ ಪ್ರಸಾದ್ ಪ್ರಶ್ನಿಸಿದಾಗ, ಪಲ್ಲವಿ ಆಘಾತಕಾರಿ ಸತ್ಯವನ್ನು ಹೊರಹಾಕಿದಳು. “ನನಗೆ ಈಗಾಗಲೇ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ. ಗಂಡ ಬಿಟ್ಟಿದ್ದರಿಂದ ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ” ಎಂದು ಹೇಳಿದಳು. ಈ ಮಾತು ಕೇಳಿ, ವರನ ಕುಟುಂಬಸ್ಥರಿಗೆ ದೊಡ್ಡ ಆಘಾತವಾಯಿತು. ಪಲ್ಲವಿ ಹೇಳಿದ ಪ್ರಕಾರ, ಐದು ದಿನ ವಧುವಾಗಿ ನಟಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಬ್ರೋಕರ್‌ಗಳಾದ ತಾಯಾರು, ಪಾರ್ವತಿ, ವಿಮಲಾ, ಅಪ್ಪಾರಾವ್ ಆಮಿಷ ಒಡ್ಡಿದ್ದರು. ಈ ಮಾತು ನಂಬಿ, ಅವಳು ಈ ಮದುವೆಗೆ ಒಪ್ಪಿಕೊಂಡಿದ್ದಳು. ಆದರೆ, ಅವಳಿಗೆ ಸಿಕ್ಕಿದ್ದು ಕೇವಲ 35 ಸಾವಿರ ರೂಪಾಯಿ ಮಾತ್ರ. ಉಳಿದ ಹಣವನ್ನು ಬ್ರೋಕರ್‌ಗಳೇ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನ ನಿಜವಾದ ಹೆಸರು ಪಲ್ಲವಿ ಅಲ್ಲ, ಆಮನಿ ಎಂದು ಕೂಡ ಅವಳು ಹೇಳಿದ್ದಾಳೆ.

Read this also :  ಆಕೆ ಮದುವೆಯಾಗಿದ್ದು ಒಬ್ಬರನ್ನಲ್ಲ, 7 ತಿಂಗಳಲ್ಲಿ 25 ಮಂದಿಯನ್ನು ಮದುವೆಯಾದ ಕಿಲಾಡಿ ಲೇಡಿ…..!

Bride – ಪೊಲೀಸರ ತನಿಖೆ ಶುರು!

ಮೋಸ ಹೋಗಿರುವುದನ್ನು ಅರಿತ ದುರ್ಗಾ ಪ್ರಸಾದ್, ನ್ಯಾಯಕ್ಕಾಗಿ ವಿಜಯವಾಡದ ಕೃಷ್ಣಲಂಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ. ಈ ವಂಚಕರ ಗ್ಯಾಂಗ್ ಬಲೆಗೆ ಇನ್ನೆಷ್ಟು ಜನರು ಬಿದ್ದಿದ್ದಾರೋ ಎಂಬ ಅನುಮಾನ ಶುರುವಾಗಿದೆ.

Leave a Comment

Your email address will not be published. Required fields are marked *

Scroll to Top