Sunday, June 1, 2025
HomeStateLocal Problems : ರಸ್ತೆ ಮತ್ತು ಚರಂಡಿಗಾಗಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ….!

Local Problems : ರಸ್ತೆ ಮತ್ತು ಚರಂಡಿಗಾಗಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ….!

Local Problems – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 10ನೇ ವಾರ್ಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಯ ನಿವಾಸಿಗಳು ಕಳೆದ 25 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೂಕ್ತ ರಸ್ತೆ (Road), ಚರಂಡಿ (Drainage) ಮತ್ತು ಶೌಚಾಲಯದ (Toilet) ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯರು ಪಟ್ಟಣ ಪಂಚಾಯಿತಿ (Pattana Panchayat) ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Local Problems - Residents Protest for Roads, Drainage, and Toilets in Gudibande Ward 10 – Chikkaballapur District

Local Problems – ದಶಕಗಳ ಬೇಡಿಕೆ ಈಡೇರದ ಹಿನ್ನೆಲೆ ಆಕ್ರೋಷ

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ಅಪ್ಸರ್‍ ಪಾಷ, “ಕಳೆದ 15 ವರ್ಷಗಳಿಂದ ನಾವು ಸರಿಯಾದ ರಸ್ತೆ, ಚರಂಡಿ ಹಾಗೂ ಶೌಚಾಲಯದ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಈ ಕುರಿತು ಶಾಸಕರಿಗೆ (MLA) ಎರಡು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ.ಪಂ ಅಧಿಕಾರಿಗಳು ರಸ್ತೆ ಕಾಮಗಾರಿ (Road construction) ಗಾಗಿ ಜೆಸಿಬಿ ಕಳುಹಿಸಿದ್ದರು. ಆದರೆ ಖಾಸಗಿ ವ್ಯಕ್ತಿಯೊಬ್ಬರು ಅಡ್ಡಿಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಥಳಕ್ಕೆ ಬರಲಿಲ್ಲ. ಇದು ಪ.ಪಂ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದು ಕಿಡಿಕಾರಿದರು.

Local Problems – ಖಾಸಗಿ ವ್ಯಕ್ತಿಯಿಂದ ಅಡ್ಡಿ, ಅಧಿಕಾರಿಗಳ ಮೌನ

ಮೇ 8 ರಂದು ಪ.ಪಂ ಮುಖ್ಯಾಧಿಕಾರಿಗಳು, ಇಂಜಿನೀಯರ್‍ ಹಾಗೂ ಅಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ಈ ಹಿಂದೆ ಮಂಜೂರಾಗಿದ್ದ ನಗರೋತ್ತಾನ ಯೋಜನೆಯಡಿ ರಸ್ತೆ ಕಾಮಗಾರಿ ಆರಂಭಿಸಲು ಜೆಸಿಬಿ ಕಳುಹಿಸುವುದಾಗಿ ತಿಳಿಸಿದ್ದರು. ಅದರಂತೆ ಜೆಸಿಬಿ ಬಂದಾಗ, ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ಇದು ತಮ್ಮ ಜಾಗವೆಂದು ಹೇಳಿ ಕಾಮಗಾರಿಗೆ ಅಡ್ಡಿಪಡಿಸಿದರು. ಈ ವಿಷಯವನ್ನು ಸ್ಥಳೀಯರು ತಕ್ಷಣವೇ ಪ.ಪಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಮುಂದಿನ ಸೋಮವಾರ ನಾವು ಪ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಮಗೆ ಬೇಕಾದ ರಸ್ತೆ ಕಾಮಗಾರಿ ಪ್ರಾರಂಭವಾಗುವವರೆಗೂ ನಾವು ಕಚೇರಿಯನ್ನು ಬಿಟ್ಟು ಕದಲುವುದಿಲ್ಲ  ಎಂದು ಅಪ್ಸರ್‍ ಪಾಷ ಎಚ್ಚರಿಕೆ ನೀಡಿದರು. Read this also : ಚರಂಡಿ, ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ ಶಾಸಕರಿಗೆ ಸ್ಥಳೀಯರ ಮನವಿ…!

Local Problems – ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ

ಬಳಿಕ ಸ್ಥಳೀಯ ವ್ಯಕ್ತಿ ಮುನಿರಾಜು ಎಂಬುವವರು ಮಾತನಾಡಿ, ಸುಮಾರು ವರ್ಷಗಳಿಂದ ನಾವು ರಸ್ತೆ, ಚರಂಡಿ ಹಾಗೂ ಮುಖ್ಯವಾಗಿ ಶೌಚಾಲಯದ ಫಿಟ್ ಗಳಿಲ್ಲದೇ ತುಂಬಾನೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಈ ಜಾಗ ಬಂಡೆಯಿಂದ ಕೂಡಿದ ಹಿನ್ನೆಲೆಯಲ್ಲಿ ಶೌಚಾಲಯದ ಗುಂಡಿಗಳು ನಿರ್ಮಾಣ ಮಾಡಲು ಸಾಧ್ಯವಾಗುತ್ತಿ‌ಲ್ಲ. ಆದ್ದರಿಂದ ಸ್ಥಳೀಯ ಪಪಂ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿಕೊಂಡಿದ್ದೇವೆ. ಇದೀಗ ರಸ್ತೆ ನಿರ್ಮಾಣ ಮಾಡಲು ರಸ್ತೆ ಸಮತಟ್ಟು ಮಾಡುವಾಗ ಖಾಸಗಿ ವ್ಯಕ್ತಿಗಳು ಅಡ್ಡಿ ಮಾಡಿದ್ದಾರೆ. ಆದರೆ ಪಪಂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೇ ಉಗ್ರ ಹೊರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

Local Problems - Residents Protest for Roads, Drainage, and Toilets in Gudibande Ward 10 – Chikkaballapur District

Local Problems – ಮನವಿ ಪತ್ರ ಸಲ್ಲಿಕೆ

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ.ಪಂ ಅಧಿಕಾರಿ ಬಾಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮೌಲಾಸಾಬಿ,  ವೆಂಕಟಪ್ಪ, ಶೇಖರ್‍, ಶಶಿಧರ್‍, ಗೋಪಾಲಕೃಷ್ಣ, ಶ್ರೀನಿವಾಸ್, ವೆಂಕಟೇಶ್ ಸೇರಿದಂತೆ ಅನೇಕ ಸ್ಥಳೀಯರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular